ನವದೆಹಲಿ: ಪಿಜ್ಜಾವನ್ನು ಕೊಡಿಸುವುದಾಗಿ ಹೇಳಿ ನಂತರ ಹತ್ತನೇ ಕ್ಲಾಸ್ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ವೆಸಗಿರುವ ಘಟನೆ ಪೂರ್ವ ದೆಹಲಿಯಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಬಾಲಕಿಯ ಯಜಮಾನನ ಮಗನು ಈ ಕೃತ್ಯವನ್ನು ಎಸಗಿದ್ದು ಆತನ ಜೊತೆ ಸ್ನೇಹಿತರು ಕೂಡಿ ಅತ್ಯಾಚಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.ಶುಕ್ರವಾರ ಪಿಜ್ಜಾ ಕೊಡಿಸುವುದಾಗಿ ಹೇಳಿ ಆಕೆಯನ್ನು ಕೋಣೆಯ ಒಳಗಡೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಲಾಗಿದೆ ಎಂದು  ಹಿರಿಯ ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.ಆ ಬಾಲಕಿಗೆ ಈ ಬೆದರಿಕೆ ಹಾಕಿ ಇದನ್ನು ಯಾರಿಗೋ ತಿಳಿಸಬಾರದೆಂದು ಹೇಳಿದ್ದರು ಎನ್ನಲಾಗಿದೆ.


ಈ ಬಾಲಕಿ  ಕಲ್ಯಾಣ್ಪುರಿಯಲ್ಲಿ ಕಲ್ಯಾಣ್ ವಾಸ್ ಶಾಂತಿ ಉಳಿದುಕೊಂಡಿದ್ದು,ಕೃತ್ಯವೆಸಗಿರುವ ನಾಲ್ವರು ಆರೋಪಿಗಳು ಪೂರ್ವ ವಿನೋದ್ ನಗರದಲ್ಲಿ ವಾಸವಾಗಿದ್ದಾರೆ ಎಂದು ಹೇಳಲಾಗಿದೆ.


ಬಾಲಕಿಯ ತಾಯಿ ಕೆಲಸದಿಂದ ಹಿಂದಿರುಗಿದಾಗ, ಈ ಘಟನೆಯನ್ನು ವಿವರಿಸಲಾಗಿದೆ ಅನಂತರ ಇಬ್ಬರೂ ಪೊಲೀಸ್ ಠಾಣೆಗೆ ದೂರು ದಾಖಲಾಗಿಸಿದೆ.ಈಗ ಪೋಲಿಸರು ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.