ಒಂದು ವೇಳೆ ನೀವೂ ಕೂಡ ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕೊರೊನಾ ಮಹಾಮಾರಿಯ ಕಾರಣ ನೀವು ನಿಮ್ಮ ಕೆಲಸ ಕಳೆದುಕೊಂಡರೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಏಕೆಂದರೆ ಕೇಂದ್ರ ಸರ್ಕಾರ ನಿಮಗೆ ಎರಡು ವರ್ಷಗಳ ಕಾಲ ಅಂದರೆ 24 ತಿಂಗಳು ಧನಸಹಾಯ ನೀಡಲಿದೆ. ನೌಕರರ ರಾಜ್ಯ ವಿಮಾ ನಿಗಮ (ಇಎಸ್ಐಸಿ) 'ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ್ ಯೋಜನೆ' ಅಡಿಯಲ್ಲಿ ಕೆಲಸ ಕಳೆದುಕೊಂಡವರಿಗೆ ಆರ್ಥಿಕ ಸಹಾಯ ನೀಡಲಾಗುತ್ತದೆ.


COMMERCIAL BREAK
SCROLL TO CONTINUE READING

ESIC ಟ್ವೀಟ್ ಮೂಲಕ ಈ ಮಾಹಿತಿ ನೀಡಿದೆ
ಈ ಬಗ್ಗೆ ಇಎಸ್ಐಸಿ ಟ್ವೀಟ್ ಮಾಡಿದ್ದು "ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ್ ಯೋಜನೆ"ಯಡಿ, ನೀವು ನಿಮ್ಮ ಕೆಲಸವನ್ನು ಕಳೆದುಕೊಂಡಾಗ ಸರ್ಕಾರ ನಿಮಗೆ ಹಣಕಾಸಿನ ನೆರವು ನೀಡುತ್ತದೆ. ಕೆಲವು ಕಾರಣಗಳಿಂದಾಗಿ, ನಿಮ್ಮ ಉದ್ಯೋಗವನ್ನು ತೊರೆಯುವುದರಿಂದ ನಿಮ್ಮ ಆದಾಯದಲ್ಲಿ ಯಾವುದೇ ರೀತಿಯ ತಡೆ ಉಂಟಾಗುವುದಿಲ್ಲ" ಎಂದು ಹೇಳಲಾಗಿದೆ.



ಸರ್ಕಾರ ಸಹಾಯ ನೀಡುತ್ತದೆ 
ನೌಕರಿ ಮಾಡುವ ಜನರು ಒಂದು ವೇಳೆ ನೌಕರಿಯನ್ನು ಕಳೆದುಕೊಂಡರೆ ಅಥವಾ ಯಾವುದೇ ಇತರ ಕಾರಣಗಳಿಂದ ಅವರನ್ನು ಕೆಲಸದಿಂದ ವಜಾಗೊಳಿಸಿದರೆ ಸರ್ಕಾರದ ವತಿಯಿಂದ ಸಹಾಯ ನೀಡಲಾಗುತ್ತದೆ ಎಂದು ESIC ಹೇಳಿದೆ.


ಹೇಗೆ ಲಾಭ ಪಡೆಯಬೇಕು
ನೀವೂ ಸಹ ಈ ಯೋಜನೆಯ ಲಾಭವನ್ನು ಪಡೆಯಲು ಬಯಸಿದರೆ, ನೀವು ಇಎಸ್ಐಸಿಯ ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ ಯೋಜನೆಗೆ ನಿಮ್ಮ ನೋಂದಾಯಿಸಿಕೊಳ್ಳಬೇಕು. ಇಎಸ್ಐಸಿಯ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಅಟಲ್ ವಿಮಾ ಮಾಡಿದ ವ್ಯಕ್ತಿಗಳ ಕಲ್ಯಾಣ ಯೋಜನೆಯ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.


ಹೀಗೆ ಅರ್ಜಿ ಸಲ್ಲಿಸಿ


  • ಫಾರ್ಮ್ ಅನ್ನು ಡೌನ್ಲೋಡ್ ಮಾಡಲು

  • https://www.esic.nic.in/attachments/circularfile/93e904d2e3084d65fdf7793e9098d125.pdf ಈ ಲಿಂಕ್ ಮೇಲೆ ಕ್ಲಿಕ್ಕಿಸಿ

  • ಈ ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ, ನೀವು ಅದನ್ನು ಹತ್ತಿರದ ಇಎಸ್ಐಸಿ ಶಾಖೆಗೆ ಸಲ್ಲಿಸಬೇಕಾಗುತ್ತದೆ.

  • ಫಾರ್ಮ್ ಜೊತೆಗೆ, 20 ರೂ ಮೌಲ್ಯದ ನ್ಯಾಯಾಂಗವಲ್ಲದ ಸ್ಟಾಂಪ್ ಪೇಪರ್ ಮೇಲೆ ನೋಟರಿ ಅಫಿಡವಿಟ್ ಕೂಡ ಸಲ್ಲಿಸಬೇಕು.

  • ಇದರಲ್ಲಿ, ಎಬಿ -1 ರಿಂದ ಎಬಿ -4 ರವರೆಗಿನ ಫಾರ್ಮ್‌ಗಳನ್ನು ಭರ್ತಿ ಮಾಡಬೇಕು

  • ಅಟಲ್ ವಿಮೆ ಮಾಡಿದ ವ್ಯಕ್ತಿಗಳ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಮೋದಿ ಸರ್ಕಾರ ಕೂಡ ಶೀಘ್ರದಲ್ಲೇ ಆನ್‌ಲೈನ್ ಸೌಲಭ್ಯವನ್ನು ಪ್ರಾರಂಭಿಸಲಿದೆ.

  • ಹೆಚ್ಚಿನ ಮಾಹಿತಿಗಾಗಿ, ನೀವು ESIC (www.esic.nic.in) ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

  • ಈ ಯೋಜನೆಯ ಲಾಭವನ್ನು ನೀವು ಒಮ್ಮೆ ಮಾತ್ರ ಪಡೆಯಬಹುದು .