ನವದೆಹಲಿ : ಲಾಭದಾಯಕ ಹುದ್ದೆಯನ್ನು ಹೊಂದಿದ್ದಕ್ಕೆ 20 ಎಎಪಿ ಶಾಸಕರ ಅನರ್ಹತೆಗೆ ಚುನಾವಣಾ ಆಯೋಗದ(ಇಸಿಐ) ಶಿಫಾರಸು ಮಾಡಿದ ಕೆಲವೇ ಗಂಟೆಗಳ ನಂತರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ವಿಷಯದ ಬಗ್ಗೆ ಮೌನವನ್ನು ಮುರಿದು ಅಂತಿಮವಾಗಿ ಸತ್ಯಕ್ಕೆ ಜಯ ದೊರೆಯಲಿದೆ ಎಂದು ತಿಳಿಸಿದ್ದಾರೆ.



COMMERCIAL BREAK
SCROLL TO CONTINUE READING

"ಸತ್ಯ ಮತ್ತು ಪ್ರಾಮಾಣಿಕತೆಯ ಮಾರ್ಗವನ್ನು ಅನುಸರಿಸುವಾಗ ಈ ರೀತಿಯ ಅಡೆತಡೆಗಳು ಬರುವುದು ಸಹಜ ಆದರೆ ಆದ್ದರಿಂದ ಅಷ್ಟಕ್ಕೇ ಹೆದರಿ ನಮ್ಮ ಪ್ರಾಮಾಣಿಕತೆಯನ್ನು ನಿಲ್ಲಿಸಬಾರದು, ನಮ್ಮಲ್ಲಿ ಸತ್ಯವಿದ್ದಾಗ ಪ್ರಪಂಚದ ಎಲ್ಲಾ ಗೋಚರ ಮತ್ತು ಅಗೋಚರ  ಶಕ್ತಿಗಳು ಸಹಾಯ ಮಾಡುತ್ತವೆ.ಇದಕ್ಕೆ ದೇವರು ಸಹಿತ ಬೆಂಬಲಿಗನಾಗಿ ನಿಲ್ಲುತ್ತಾನೆ" ಎಂದು ಕೇಜ್ರಿವಾಲ್ ಟ್ವೀಟ್ ಮೂಲಕ ತಿಳಿಸಿದ್ದಾರೆ.