ನವದೆಹಲಿ : ಶ್ರೀಲಂಕಾ ದೇಶವು ಪ್ರಸ್ತುತ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದೀಗ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಹಾಗೂ ಶ್ರೇಷ್ಠ ಆಟಗಾರ ಸನತ್ ಜಯಸೂರ್ಯ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿಹೊಗಳಿದ್ದಾರೆ. ಜಯಸೂರ್ಯ ಒಂದು ಕಾಲದ ಶ್ರೇಷ್ಠ ಆಟಗಾರರಲ್ಲಿ ಒಬ್ಬರು.


COMMERCIAL BREAK
SCROLL TO CONTINUE READING

ಪಿಎಂ ಮೋದಿಯನ್ನು ಹೊಗಳಿದ ಜಯಸೂರ್ಯ 


ಶ್ರೀಲಂಕಾದ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ(Sanath Jayasuriya), ಶ್ರೀಲಂಕಾಕ್ಕೆ ಸಹಾಯ ಮಾಡಿದ್ದಕ್ಕೆ ಭಾರತ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದ್ದಾರೆ. ನೀವು ನಮ್ಮ ಅದ್ಭುತ ನೆರೆಹೊರೆಯವರಾಗಿದ್ದೀರಿ. ನಮ್ಮ ದೇಶದ ಅಣ್ಣಂದಿರಂತೆ ಸಹಾಯ ಮಾಡುತ್ತಿದ್ದೀರಾ. ನಮ್ಮ  ಬದುಕು ತುಂಬಾ ಕಷ್ಟಕರವಾಗಿದೆ. ಶೀಘ್ರದಲ್ಲೇ ಚಿತ್ರಣ ಬದಲಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಭಾರತ ಮತ್ತು ಇತರ ದೇಶಗಳ ಸಹಾಯದಿಂದ ನಾವು ಈ ಪರಿಸ್ಥಿತಿಯಿಂದ ಹೊರಬರಲು ಪ್ರಯತ್ನಿಸುತ್ತಿದ್ದೇವೆ ಎಡನು ಹೇಳಿದ್ದಾರೆ.


Government of India)ವು ಶ್ರೀಲಂಕಾಕ್ಕೆ ಇದುವರೆಗೆ 270,000 ಮೆಟ್ರಿಕ್ ಟನ್‌ಗಳಷ್ಟು ಇಂಧನವನ್ನು ಪೂರೈಸಿದೆ. ಡಾಲರ್ ಎದುರು ಶ್ರೀಲಂಕಾದ ರೂಪಾಯಿ ತೀವ್ರವಾಗಿ ಕುಸಿಯುತ್ತಿದ್ದು, ವಿದೇಶಿ ಸಾಲವೂ ಹೆಚ್ಚುತ್ತಿದೆ. ಶ್ರೀಲಂಕಾ ಸರ್ಕಾರದ ಆದಾಯದಲ್ಲಿ ತೀವ್ರ ಕುಸಿತ ಕಂಡುಬಂದಿದೆ, ಇದರಿಂದಾಗಿ ಅದು ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿದೆ. ಶ್ರೀಲಂಕಾ ಸರ್ಕಾರದ ವಿರುದ್ಧ ಜನ ಪ್ರತಿಭಟನೆ ಆರಂಭಿಸಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಜಯಸೂರ್ಯ ಹೇಳಿದ್ದಾರೆ. ಜನರೊಂದಿಗೆ ಸರಿಯಾಗಿ ಮಾತನಾಡದಿದ್ದರೆ ಅನಾಹುತವಾಗುತ್ತದೆ. ಸದ್ಯಕ್ಕೆ ಅದರ ಜವಾಬ್ದಾರಿ ಈಗಿನ ಸರ್ಕಾರದ ಮೇಲಿದೆ ಎಂದು ಹೇಳಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.