ನವದೆಹಲಿ : ಕರೋನಾದಿಂದಾಗಿ ಪ್ರಾರಂಭವಾದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) ಅಡಿಯಲ್ಲಿ, ದೇಶದ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರದಲ್ಲಿ 5 ಕೆಜಿ ಗೋಧಿ ಮತ್ತು ಅಕ್ಕಿ ನೀಡುವ ಯೋಜನೆಯನ್ನು ಇತ್ತೀಚೆಗೆ ಮಾರ್ಚ್ 2020 ರವರೆಗೆ ವಿಸ್ತರಿಸಲಾಯಿತು. 


COMMERCIAL BREAK
SCROLL TO CONTINUE READING

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) ಅವಧಿಯನ್ನು ಮಾರ್ಚ್ ನಂತರ ವಿಸ್ತರಿಸುವ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಯಾವುದೇ ಭರವಸೆ ನೀಡಲಿಲ್ಲ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ವ್ಯಾಪ್ತಿಗೆ ಒಳಪಡುವ 80 ಕೋಟಿ ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡಲು ಕೇಂದ್ರವು ಮಾರ್ಚ್ 2020 ರಲ್ಲಿ ಯೋಜನೆಯನ್ನು ಪ್ರಾರಂಭಿಸಿತು. ಕೊರೋನಾ ಸಮಯದಲ್ಲಿ ಅಗತ್ಯವಿರುವ ಜನರ ಸಮಸ್ಯೆಗಳನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿತ್ತು.


ಇದನ್ನೂ ಓದಿ : Budget 2022 : ಕೇಂದ್ರ ಬಜೆಟ್ ನಲ್ಲಿ ಮನೆ ಖರೀದಿದಾರರಿಗೆ ಸಿಹಿ ಸುದ್ದಿ!


ಬಜೆಟ್ ನಂತರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವೆ ಸೀತಾರಾಮನ್(Nirmala Sitharaman), 'ಬಜೆಟ್‌ನಲ್ಲಿ ಏನು ಹೇಳಲಾಗಿದೆ ಎಂಬುದನ್ನು ಹೊರತುಪಡಿಸಿ ನಾನು ಬೇರೆ ಏನನ್ನೂ ಹೇಳಬೇಕಾಗಿಲ್ಲ.' ಮಾರ್ಚ್ 2022 ರ ನಂತರ PMGKAY ವ್ಯಾಪ್ತಿಯನ್ನು ವಿಸ್ತರಿಸಲಾಗುತ್ತದೆಯೇ ಎಂದು ಅವರನ್ನು ಪ್ರಶಿನಿಸಿದಾಗ. PMGKAY ಯೋಜನೆಯನ್ನು 2020-21 ರಲ್ಲಿ ಕೇವಲ ಮೂರು ತಿಂಗಳಿಗೆ ಪ್ರಾರಂಭಿಸಲಾಯಿತು. ನಂತರ ಸರ್ಕಾರ ಜುಲೈ-ನವೆಂಬರ್ ಗೆ ಹೆಚ್ಚಿಸಿತು.


ಕೋವಿಡ್(Covid-19) ಬಿಕ್ಕಟ್ಟು ಮುಂದುವರಿದರೆ 2021 ರ ಮೇ ಮತ್ತು ಜೂನ್‌ನಲ್ಲಿ ಇದನ್ನು ಮತ್ತೆ ಜಾರಿಗೊಳಿಸಲಾಯಿತು ಮತ್ತು ನಾಲ್ಕನೇ ಹಂತದ ಅಡಿಯಲ್ಲಿ ಜುಲೈನಿಂದ ನವೆಂಬರ್, 2021 ರವರೆಗೆ ಐದು ತಿಂಗಳವರೆಗೆ ವಿಸ್ತರಿಸಲಾಯಿತು. ನಂತರ ಯೋಜನೆಯ ಅವಧಿಯನ್ನು ಡಿಸೆಂಬರ್, 2021 ರಿಂದ ಮಾರ್ಚ್, 2022 ರವರೆಗೆ ವಿಸ್ತರಿಸಲಾಯಿತು ಎಂದು ತಿಳಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.