ಪುಣೆ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರು ಹೊಸ ಸಂಸತ್ ಭವನದ ಉದ್ಘಾಟನೆಯನ್ನು ನೋಡಿ ಸಂತೋಷಪಡಲಿಲ್ಲ ಎಂದು ಭಾನುವಾರ ಹೇಳಿದ್ದಾರೆ.ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಬಳಿಕ ಶರದ್ ಪವಾರ್ ಅವರು ಪ್ರತಿಕ್ರಿಯಿಸಿದ್ದಾರೆ.


COMMERCIAL BREAK
SCROLL TO CONTINUE READING

"ನಾನು ಈ ಘಟನೆಯನ್ನು ಬೆಳಿಗ್ಗೆ ನೋಡಿದೆ, ನಾನು ಅಲ್ಲಿಗೆ ಹೋಗಲಿಲ್ಲ ಎಂದು ನನಗೆ ಸಂತೋಷವಾಗಿದೆ. ಅಲ್ಲಿ ನಡೆದದ್ದನ್ನು ನೋಡಿದ ನಂತರ ನಾನು ಚಿಂತಿತನಾಗಿದ್ದೇನೆ. ನಾವು ದೇಶವನ್ನು ಹಿಂದಕ್ಕೆ ಕೊಂಡೊಯ್ಯುತ್ತಿದ್ದೇವೆಯೇ? ಈ ಕಾರ್ಯಕ್ರಮವು ಸೀಮಿತ ಜನರಿಗೆ ಮಾತ್ರವೇ?" ಎಂದು ಅವರು ಪ್ರಶ್ನಿಸಿದರು.


ಇದನ್ನೂ ಓದಿ: MLA ಅಲ್ಲ, MLC ಅಂತು ಅಲ್ಲವೇ ಅಲ್ಲ..! ಯಾರು ಈ ನೂತನ ಸಚಿವ ʼಬೋಸರಾಜುʼ..?


ಏನೇ ನಡೆದರೂ ಅದು ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸಮಾಜದ ಪರಿಕಲ್ಪನೆಗೆ ವ್ಯತಿರಿಕ್ತವಾಗಿದೆ ಎಂದು ಅವರು ಹೇಳಿದರು."ಆಧುನಿಕ ವಿಜ್ಞಾನದ ಆಧಾರದ ಮೇಲೆ ಸಮಾಜವನ್ನು ನಿರ್ಮಿಸುವ ಪರಿಕಲ್ಪನೆಯನ್ನು ಹೊಂದಿದ್ದ ಪಂ.ನೆಹರೂಗೆ ನಿಖರವಾಗಿ ವಿರುದ್ಧವಾಗಿದೆ.ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿಗಳನ್ನು  ಆಹ್ವಾನಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮಾತ್ರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು, ಆದರೆ ರಾಜ್ಯಸಭೆಯ ಸಭಾಪತಿಗಳಾಗಿರುವ ಉಪರಾಷ್ಟ್ರಪತಿ ಜಗದೀಪ್ ಧಂಖರ್, ಅಲ್ಲಿರಲಿಲ್ಲ,ಆದ್ದರಿಂದ ಇಡೀ ಕಾರ್ಯಕ್ರಮವು  ಕೇವಲ ಸೀಮಿತ ಜನರಿಗೆ ಇದ್ದಂತೆ ತೋರುತ್ತಿದೆ ಎಂದು ಅವರು ಕಿಡಿ ಕಾರಿದರು.


ಇದನ್ನೂ ಓದಿ: ನಮ್ಮ ಸರ್ಕಾರ ಪೊಲೀಸ್ ಇಲಾಖೆಯನ್ನ ʼಕೇಸರಿಕರಣʼ ಮಾಡೋಕೆ ಬಿಡಲ್ಲ


ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಾಯಕಿ ಸುಪ್ರಿಯಾ ಸುಳೆ ಅವರು ನೂತನ ಸಂಸತ್ ನ ಉದ್ಘಾಟನೆಯನ್ನು ಅಪೂರ್ಣವಾಗಿರುವ ಘಟನೆ ಎಂದು ಬಣ್ಣಿಸಿದ್ದಾರೆ."ಪ್ರತಿಪಕ್ಷಗಳಿಲ್ಲದೆ ಹೊಸ ಸಂಸತ್ ಭವನವನ್ನು ತೆರೆಯುವುದು ಅಪೂರ್ಣ ಘಟನೆಯಾಗಿದೆ. ಇದರರ್ಥ ದೇಶದಲ್ಲಿ ಪ್ರಜಾಪ್ರಭುತ್ವವಿಲ್ಲ" ಎಂದು ಅವರು ಪುಣೆಯಲ್ಲಿ ಹೇಳಿದರು.


ಇಂದು ಮುಂಜಾನೆ, ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯ ಸಭಾಂಗಣದಲ್ಲಿ ಫಲಕವನ್ನು ಅನಾವರಣಗೊಳಿಸುವ ಮತ್ತು 'ಸೆಂಗೊಲ್' ಅನ್ನು ಸ್ಥಾಪಿಸುವ ಮೂಲಕ ಹೊಸ ಸಂಸತ್ತಿನ ಕಟ್ಟಡವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ