ನವ ದೆಹಲಿ: ಅರ್ಥಿಕ ವರ್ಷ 2005-06 ರಿಂದ 2015-16 ರವರೆಗೆ ಒಂದು ದಶಕದಲ್ಲಿ 27 ಕೋಟಿ ಜನರು ಭಾರತದಲ್ಲಿ ಬಡತನ ರೇಖೆಯಿಂದ ಹೊರಬಂದಿದ್ದಾರೆ. ಇದು ಬಡತನದ ವಿರುದ್ಧ ಜಾಗತಿಕ ಹೋರಾಟವನ್ನು ಗೆಲ್ಲುವ ಭರವಸೆಯ ಸಂಕೇತವಾಗಿದೆ ಎಂಬ ಮಾಹಿತಿಯನ್ನು ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಮ್ನ '2018 ಮಲ್ಟಿಡೈಮೆನ್ಶನಲ್ ಗ್ಲೋಬಲ್ ಪಾವರ್ಟಿ ಇಂಡೆಕ್ಸ್' ನಿಂದ ಪಡೆಯಲಾಗಿದೆ. 


COMMERCIAL BREAK
SCROLL TO CONTINUE READING

2018 ಬಹು-ಆಯಾಮದ ಗ್ಲೋಬಲ್ ಪಾವರ್ಟಿ ಇಂಡೆಕ್ಸ್ (ಎಂಪಿಐ) ವರದಿಯನ್ನು ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಮ್ (ಯುಎನ್ಡಿಪಿ) ಮತ್ತು ಆಕ್ಸ್ಫರ್ಡ್ ಪಾವರ್ಟಿ ಮತ್ತು ಹ್ಯೂಮನ್ ಡೆವಲಪ್ಮೆಂಟ್ ಇನಿಶಿಯೇಟಿವ್ (ಒಪಿಐಐ) ಯಿಂದ ಜಂಟಿಯಾಗಿ ಸಿದ್ಧಪಡಿಸಲಾಗಿದೆ. 


ಪ್ರಪಂಚದಾದ್ಯಂತ 1.3 ಶತಕೋಟಿ ಜನರು ಬಹು-ಆಯಾಮದ ಬಡತನದಲ್ಲಿ ವಾಸಿಸುತ್ತಿದ್ದಾರೆ ಎಂದು ಇದರಲ್ಲಿ ವರದಿಯಾಗಿದೆ. ಇದು MPI ಯಲ್ಲಿ ಒಟ್ಟು 104 ರಾಷ್ಟ್ರಗಳ ಒಟ್ಟು ಜನಸಂಖ್ಯೆಯ ನಾಲ್ಕನೇ ಒಂದು ಭಾಗವಾಗಿದೆ.


ಬಹು-ಆಯಾಮದ ಬಡತನದಲ್ಲಿ 1.3 ಶತಕೋಟಿ ಜನರಲ್ಲಿ ಅರ್ಧದಷ್ಟು (46 ಪ್ರತಿಶತ) ಜನರು ವಾಸಿಸುತ್ತಿದ್ದಾರೆ ಎಂದು ವರದಿ ಹೇಳಿದೆ. ಭಾರತದಲ್ಲಿ ಕಳೆದ ಹತ್ತು ವರ್ಷಗಳಲ್ಲಿ, ಬಡವರ ಸಂಖ್ಯೆಯು ಅರ್ಧದಷ್ಟು ಕಡಿಮೆಯಾಗಿದೆ, ಇದು 55% ರಿಂದ 28% ಕ್ಕೆ ಇಳಿದಿದೆ. 2005-06 ರಿಂದ 2015-16ರ ನಡುವೆ ಒಂದು ದಶಕದಲ್ಲಿ 27 ದಶಲಕ್ಷ ಜನರು ಭಾರತದಲ್ಲಿ ಬಡತನ ರೇಖೆಯಿಂದ ಹೊರಬಂದಿದ್ದಾರೆ ಎಂದು ವರದಿ ಹೇಳಿದೆ. ಇದು ಜಗತ್ತಿನಿಂದ ಬಡತನವನ್ನು ನಿರ್ಮೂಲನೆ ಮಾಡುವ ಭರವಸೆಯ ಸಂಕೇತವಾಗಿದೆ.


ಯುಎನ್ಡಿಪಿ ಮ್ಯಾನೇಜರ್ ಆಚಿಮ್ ಸ್ಟೈನರ್ ಅವರು, "ಬಡತನ ಮಟ್ಟವು ಮಕ್ಕಳಲ್ಲಿ ವಿಶೇಷವಾಗಿ ಆಘಾತಕಾರಿಯಾಗಿದೆ, ಆದ್ದರಿಂದ ಇದನ್ನು ಎದುರಿಸಲು ಪ್ರಯತ್ನಗಳು ಬೇಕಾಗುತ್ತವೆ. 1900 ರಿಂದಲೂ, ಭಾರತದಲ್ಲಿ ಮಾತ್ರವಲ್ಲದೆ ಇತರ ದಕ್ಷಿಣ ಏಷ್ಯಾದ ದೇಶಗಳಲ್ಲಿ ಜನರ ಜೀವನವನ್ನು ನಿರೀಕ್ಷಿಸುವಿಕೆಯು 4 ವರ್ಷಗಳಷ್ಟು ಹೆಚ್ಚಾಗಿದೆ ಮತ್ತು ಭಾರತದಲ್ಲಿ ವಾಸಿಸುವ ಜನರಲ್ಲಿ ಅದು 11 ವರ್ಷಗಳಷ್ಟು ಹೆಚ್ಚಾಗಿದೆ, ಬಹು-ಆಯಾಮದ ಬಡತನವನ್ನು ಸುಧಾರಿಸುವಲ್ಲಿ ಇದು ಒಳ್ಳೆಯದು ಎಂದಿದ್ದಾರೆ.


"ಭಾರತದಲ್ಲಿ ಬಡತನವು ನಾಲ್ಕು ರಾಜ್ಯಗಳಲ್ಲಿ ಹೆಚ್ಚಾಗಿದೆ. ಆದರೂ ಭಾರತದಲ್ಲಿ ಸಣ್ಣ ಪ್ರಮಾಣದಲ್ಲಿ ಬಡತನ ಇದೆ. ಆದರೆ ಬಿಹಾರ, ಜಾರ್ಖಂಡ್, ಉತ್ತರಪ್ರದೇಶ ಮತ್ತು ಮಧ್ಯಪ್ರದೇಶಗಳು ಹೆಚ್ಚಿನ ಸಂಖ್ಯೆಯಲ್ಲಿ ಬಡತನ ಮನೆ ಮಾಡಿದೆ. ಈ ನಾಲ್ಕು ರಾಜ್ಯಗಳಲ್ಲಿರುವ ಅರ್ಧದಷ್ಟು ಜನರು ಬಡವರಾಗಿದ್ದಾರೆ. ಇದರಲ್ಲಿ ಸುಮಾರು 19.6 ಕೋಟಿ ಜನ ಬಡವರು ಎಂದು ಅಂದಾಜಿಸಲಾಗಿದೆ." ವರದಿಯ ಪ್ರಕಾರ ದೆಹಲಿ, ಕೇರಳ ಮತ್ತು ಗೋವಾದಲ್ಲಿ ಬಡವರ ಸಂಖ್ಯೆಯು ಅತೀ ಕಡಿಮೆಯಾಗಿದೆ.