ಸೋತು ಗೆದ್ದರೂ ಒಲಿಯಲಿಲ್ಲ RCB ಫೈನಲ್‌ಗೆ ಹೋಗುವ ಅದೃಷ್ಟ..! RRಗೆ ಆಲ್‌ ದಿ ಬೆಸ್ಟ್‌, ಮುಂದಿನ ಸಲ ಕಪ್‌ ನಮ್ದೆ..

RR vs RCB : ಹಲವು ವರ್ಷಗಳಿಂದ ಐಪಿಎಲ್ ಟ್ರೋಫಿಗಾಗಿ ಕಾಯುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮತ್ತೊಮ್ಮೆ ನಿರಾಸೆ ಎದುರಾಗಿದೆ. ರಾಜಸ್ಥಾನ ರಾಯಲ್ಸ್‌ ಎದುರು ಎಲಿಮಿನೇಟರ್ ಪಂದ್ಯದಲ್ಲಿ ಮುಗ್ಗರಿಸಿದೆ. ಗೆಲವಿಗೆ ಸಮೀಪದಲ್ಲೇ ಆರ್‌ಸಿಬಿ ಸೋಲು ಅನುಭವಿಸಿದೆ.. 

Written by - Krishna N K | Last Updated : May 23, 2024, 12:29 AM IST
    • ಟ್ರೋಫಿಗಾಗಿ ಪ್ರಯತ್ನಿಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಭಾರೀ ನಿರಾಸೆ
    • ಪ್ಲೇ-ಆಫ್ ಅವಕಾಶಗಳನ್ನು ಕಳೆದುಕೊಂಡ ನಮ್ಮ ಬೆಂಗಳೂರು ತಂಡ
    • ಸೋಲಿನೊಂದಿಗೆ ರಾಯಲ್‌ ಚಾಲೆಂಜರ್ಸ್‌ ಐಪಿಎಲ್ ಸೀಸನ್ ಅಂತ್ಯಗೊಳಿಸಿದೆ.
 ಸೋತು ಗೆದ್ದರೂ ಒಲಿಯಲಿಲ್ಲ RCB ಫೈನಲ್‌ಗೆ ಹೋಗುವ ಅದೃಷ್ಟ..! RRಗೆ ಆಲ್‌ ದಿ ಬೆಸ್ಟ್‌, ಮುಂದಿನ ಸಲ ಕಪ್‌ ನಮ್ದೆ.. title=
RCB vs RR

RCB vs RR : ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭದಿಂದಲೂ ಟ್ರೋಫಿಗಾಗಿ ಪ್ರಯತ್ನಿಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಭಾರೀ ನಿರಾಸೆಯಾಗಿದೆ. ಈ ಸಲ ಕಪ್ ನಮ್ಮದೇ ಎನ್ನುವ ಕನಸು ನನಸಾಗಿಲ್ಲ. ಪ್ಲೇ-ಆಫ್ ಅವಕಾಶಗಳನ್ನು ಕಳೆದುಕೊಂಡೂ ಅದ್ಭುತವಾಗಿ ಪುಟಿದೇದ್ದಿದ್ದ ನಮ್ಮ ಬೆಂಗಳೂರು ತಂಡ ಎಲಿಮಿನೇಟರ್ ಪಂದ್ಯದಲ್ಲಿ ಸೋಲು ಕಂಡಿದೆ. ಬಹು ಮಹತ್ವದ ಪಂದ್ಯದಲ್ಲಿ ಬೆಂಗಳೂರು ವಿರುದ್ಧ ರಾಜಸ್ಥಾನ 4 ವಿಕೆಟ್‌ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಸನ್ ರೈಸರ್ಸ್ ಕ್ವಾಲಿಫೈಯರ್ 2ನ್ನು ಎದುರಿಸಲು ಸಜ್ಜಾಗಿದೆ. ಸೋಲಿನೊಂದಿಗೆ ರಾಯಲ್‌ ಚಾಲೆಂಜರ್ಸ್‌ ಐಪಿಎಲ್ ಸೀಸನ್ ಅಂತ್ಯಗೊಳಿಸಿದೆ.

ಅಹಮದಾಬಾದ್‌ನಲ್ಲಿ ಬುಧವಾರ ನಡೆದ ಎಲಿಮಿನೇಟರ್‌ನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟಾಸ್ ಸೋತಿದೆ. 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 172 ರನ್‌ ಗಳಿಸಿತು. ಭಾರೀ ರನ್ ಗಳಿಸಬೇಕಾಗಿದ್ದ ಪಂದ್ಯದಲ್ಲಿ ಕಡಿಕೆ ಮೊತ್ತವನ್ನು ಬೆಂಗಳೂರು ತಂಡ ಕಲೆ ಹಾಕಿತು. 

ಇದನ್ನೂ ಓದಿ:ದಿನೇಶ್ ಕಾರ್ತಿಕ್ ಔಟ್ ನೀಡಿಲ್ಲವೆಂದು ಮೈದಾನದಲ್ಲೇ ಥರ್ಡ್ ಅಂಪೈರ್ ವಿರುದ್ಧ ಕಿಡಿಕಾರಿದ ಕುಮಾರ್ ಸಂಗಕ್ಕಾರ!

ವಿರಾಟ್ ಕೊಹ್ಲಿ ಸೇರಿದಂತೆ ಯಾವುದೇ ಬ್ಯಾಟ್ಸ್‌ಮನ್ ಬೃಹತ್ ಮೊತ್ತವನ್ನು ಕಲೆ ಹಾಕಲು ಸಾಧ್ಯವಾಗಲಿಲ್ಲ. ಕೊಹ್ಲಿ 24 ಎಸೆತಗಳಲ್ಲಿ ಕೇವಲ 33 ರನ್ ಗಳಿಸಿ ಔಟಾದರು. ಇದಕ್ಕೂ ಮುನ್ನ ನಾಯಕ ಫಾಫ್ ಡುಪ್ಲೆಸಿಸ್ ಕೇವಲ 17 ರನ್ ಗಳಿಸಿ ಔಟ್‌ ಆದರು. ಕ್ಯಾಮರೂನ್ ಗ್ರೀನ್ 27 ರನ್ ಗಳಿಸಿದರೆ, ರಜತ್ ಪಾಟಿದಾರ್ 34 ರನ್ ಗಳಿಸಿದರು. 

ಎಲ್ಲಾ ಬ್ಯಾಟ್ಸ್‌ಮನ್‌ಗಳ ಪೈಕಿ ರಜತ್ ಅವರ ಸ್ಕೋರ್ ಗರಿಷ್ಠ ಎಂಬುದು ಗಮನಾರ್ಹ. ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಗೋಲ್ಡನ್ ಡಕೌಟ್ ಬೆಂಗಳೂರಿನ ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿತು. ನಂತರ ಮಹಿಪಾಲ್ ಲ್ಯಾಮ್ರೋರ್ ಬ್ಯಾಟ್‌ನಿಂದ ಬರವಸೆ ರನ್ಸ್‌ ಬಂತು. ಅವರು 17 ಎಸೆತಗಳಲ್ಲಿ 32 ರನ್ ಗಳಿಸಿದರು. ನಂತರ ದಿನೇಶ್ ಕಾರ್ತಿಕ್ 11, ಸ್ವಪ್ನಿಲ್ ಸಿಂಗ್ 9 ಹಾಗೂ ಕರಣ್‌ ಶರ್ಮಾ ತಲಾ 5 ರನ್ ಗಳಿಸಿ ಸ್ಕೋರ್ ಬೋರ್ಡ್ ಹೆಚ್ಚಿಸಿದರು.

ಇದನ್ನೂ ಓದಿ:IPL : 173ರನ್ ಗಳ ಟಾರ್ಗೆಟ್ ನೀಡಿದ RCB, ಗುರಿ ತಲುಪಿ ಕ್ವಾಲಿಫೈಯರ್ 2 ಗೆ ಹೋಗ್ತಾರಾ ? ಇಲ್ಲಾ ಎಲಿಮಿನೇಟ್? ಆಗತ್ತಾ RR!

ರಾಜಸ್ಥಾನ ಬೌಲರ್‌ಗಳು ಮಿತವಾಗಿ ಬೌಲಿಂಗ್ ಮಾಡಿ ಬೆಂಗಳೂರಿನ ಸ್ಕೋರ್ ಬೋರ್ಡ್ ಅನ್ನು ಹಿಡಿತದಲ್ಲಿಟ್ಟರು. ಪವರ್ ಪ್ಲೇನಿಂದ ಕೊನೆಯ ಎಸೆತದವರೆಗೆ ಉತ್ತಮವಾಗಿ ಬೌಲ್ ಮಾಡಿದರು. 44 ರನ್ ನೀಡಿದರೂ 3 ವಿಕೆಟ್ ಪಡೆದು ಶಕ್ತಿ ಪ್ರದರ್ಶನ ಮಾಡಿದರು. ಹಿರಿಯ ಬೌಲರ್ ರವಿಚಂದ್ರನ್ ಅಶ್ವಿನ್ ಎರಡು ವಿಕೆಟ್ ಪಡೆದರು. ಯುಜುವೇಂದ್ರ ಚಾಹಲ್ ವಿರಾಟ್ ಕೊಹ್ಲಿಯ ನಿರ್ಣಾಯಕ ವಿಕೆಟ್ ಪಡೆದದ್ದು ಗಮನಾರ್ಹ. ಬ್ಯಾಟಿಂಗ್ ಮಾಡಲು ಪರದಾಡುತ್ತಿದ್ದ ಕೊಹ್ಲಿಯನ್ನು ಚಹಾಲ್ ವಾಪಸ್ ಕಳುಹಿಸಿದ್ದು ಪಂದ್ಯದ ಹೈಲೈಟ್. ಟ್ರೆಂಟ್ ಬೌಲ್ಟ್ ಮತ್ತು ಸಂದೀಪ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು.

 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News