ನವದೆಹಲಿ: ಭಾರತ ಮತ್ತು ಇಸ್ರೇಲ್ ಈಗ ಕರೋನವೈರಸ್ ವಿರುದ್ಧ ಒಟ್ಟಾಗಿ ಹೋರಾಡಲಿವೆ. ಕೋವಿಡ್ -19 (Covid-19) ಸಾಂಕ್ರಾಮಿಕದ ಮಧ್ಯೆ ಕರೋನಾವೈರಸ್ ತನಿಖೆಯನ್ನು ವೇಗಗೊಳಿಸಲು ಭಾರತ ಮತ್ತು ಇಸ್ರೇಲ್ ಜಂಟಿಯಾಗಿ ಸಂಶೋಧನೆ ಮತ್ತು ಅಭಿವೃದ್ಧಿ ನಡೆಸಲಿವೆ ಎಂದು ಇಸ್ರೇಲ್ ರಾಯಭಾರ ಕಚೇರಿ ಸೋಮವಾರ ತಿಳಿಸಿದೆ.


COMMERCIAL BREAK
SCROLL TO CONTINUE READING

ಕರೋನಾವೈರಸ್ ಬಗ್ಗೆ ತನಿಖೆ ನಡೆಸಲು ದತ್ತಾಂಶ ಮತ್ತು ಕೃತಕ ಬುದ್ಧಿಮತ್ತೆಯ ಆಧಾರದ ಮೇಲೆ ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆ ಉಭಯ ದೇಶಗಳ ಪ್ರಮುಖರು  ಚರ್ಚಿಸಿದ್ದಾರೆ ಎಂದು ಪ್ರಧಾನ ವೈಜ್ಞಾನಿಕ ಸಲಹೆಗಾರರ ​​ಕಚೇರಿ ತಿಳಿಸಿದೆ.


ಇಸ್ರೇಲ್ ರಾಯಭಾರ ಕಚೇರಿಯ ವಕ್ತಾರ ಅವಿಜೆಲ್ ಸ್ಪಿರಾ ಭಾರತ ಮತ್ತು ಇಸ್ರೇಲ್ ಜಂಟಿಯಾಗಿ ಕರೋನವೈರಸ್ (Coronavirus) ಕೋವಿಡ್ -19 ತ್ವರಿತ ತನಿಖೆಗಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಿವೆ ಎಂದು ಟ್ವೀಟ್ ಮಾಡಿದ್ದಾರೆ.


ಭಾರತದ ಇಸ್ರೇಲಿ ರಾಯಭಾರಿ ರಾನ್ ಮಲಕಾ ಅವರು ಭಾರತ ಮತ್ತು ಇಸ್ರೇಲ್ನ ತಜ್ಞರು ಒಟ್ಟಾಗಿ ಇಡೀ ಜಗತ್ತಿಗೆ ಜೀವನವನ್ನು ಬದಲಾಯಿಸುವ ಪರಿಹಾರವನ್ನು ಕಂಡುಕೊಳ್ಳಲು ಒಟ್ಟಾಗಿ ಕೆಲಸ ಮಾಡುತ್ತಾರೆ. ವಿಶೇಷವಾಗಿ ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಎದುರಿಸಲು ಒಟ್ಟಾಗಿ ಕಾರ್ಯನಿರ್ವಹಿಸಲಿದ್ದು ನಾನು ಈ ಬಗ್ಗೆ ಹೆಮ್ಮೆಪಡುತ್ತೇನೆ ಎಂದಿದ್ದಾರೆ. 


ಇದಕ್ಕೂ ಮುನ್ನ ಇಸ್ರೇಲ್ (Isrel) ಕರೋನಾ ವೈರಸ್‌ನ ಲಸಿಕೆ ತಯಾರಿಸುವುದಾಗಿ ಹೇಳಿಕೊಂಡಿತ್ತು. ಕರೋನಾ ವೈರಸ್‌ಗೆ ಪ್ರತಿಕಾಯಗಳನ್ನು ಪ್ರತ್ಯೇಕಿಸುವಲ್ಲಿ ಇಸ್ರೇಲ್ ಇನ್‌ಸ್ಟಿಟ್ಯೂಟ್ ಫಾರ್ ಬಯೋಲಾಜಿಕಲ್ ರಿಸರ್ಚ್ (ಐಐಬಿಆರ್) ಯಶಸ್ವಿಯಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ನಫ್ತಾಲಿ ಬೆನೆಟ್ ಹೇಳಿದ್ದಾರೆ. 


ಇಸ್ರೇಲ್ ಹೊರಡಿಸಿದ ಹೇಳಿಕೆಯ ಪ್ರಕಾರ ಬೆನೆಟ್ ನೆಸ್ ಜಿಯೋನಾದ ಇಸ್ರೇಲ್ನ ಜೈವಿಕ ಸಂಶೋಧನಾ ಸಂಸ್ಥೆಗೆ (ಐಐಬಿಆರ್) ಭೇಟಿ ನೀಡಿದರು ಮತ್ತು 'ವೈರಸ್ ಮೇಲೆ ದಾಳಿ ಮಾಡುವ ಪ್ರತಿಕಾಯಗಳು ಮತ್ತು ರೋಗಿಗಳ ದೇಹದಲ್ಲಿ ಅದು ನಿಷ್ಪರಿಣಾಮಕಾರಿಯಾಗಬಲ್ಲದು' ಎಂದು ತೋರಿಸಲಾಯಿತು ಎಂದು ಇಸ್ರೇಲ್ ತಿಳಿಸಿತ್ತು.


ಪ್ರತಿಕಾಯವನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಈಗ ಸಂಸ್ಥೆ ಪೇಟೆಂಟ್ ಪಡೆಯುವ ಪ್ರಕ್ರಿಯೆಯಲ್ಲಿದೆ ಮತ್ತು ಮುಂದಿನ ಹಂತದಲ್ಲಿ ಸಂಶೋಧಕರು ಅಂತಾರಾಷ್ಟ್ರೀಯ ಕಂಪನಿಗಳನ್ನು ಸಂಪರ್ಕಿಸಿ ಪ್ರತಿಕಾಯವನ್ನು ವಾಣಿಜ್ಯ ಪ್ರಮಾಣದಲ್ಲಿ ಉತ್ಪಾದಿಸುತ್ತಾರೆ ಎಂದು ಈ ಹೇಳಿಕೆಯಲ್ಲಿ ತಿಳಿಸಲಾಗಿದೆ.