ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಮತ್ತು ಗುಜರಾತ್‌ನ ಕೆಲವು ಭಾಗಗಳು ತನ್ನ ಪ್ರದೇಶದ ಭಾಗವೆಂದು ಹೇಳಿಕೊಂಡ ಪಾಕಿಸ್ತಾನ (Pakistan) "ಹೊಸ ರಾಜಕೀಯ ನಕ್ಷೆ" ಬಿಡುಗಡೆ ಮಾಡುವುದಕ್ಕೆ ಭಾರತ ಮಂಗಳವಾರ ಆಕ್ಷೇಪ ವ್ಯಕ್ತಪಡಿಸಿದೆ. ಇದನ್ನು 'ರಾಜಕೀಯ ಮೂರ್ಖತನ' ಎಂದು ಕರೆದ ಭಾರತ ಈ ಹಾಸ್ಯಾಸ್ಪದ ಹಕ್ಕುಗಳಿಗೆ ಕಾನೂನು ಮಾನ್ಯತೆ ಅಥವಾ ಅಂತರರಾಷ್ಟ್ರೀಯ ವಿಶ್ವಾಸಾರ್ಹತೆ ಇಲ್ಲ ಎಂದು ಖಡಕ್ ಸಂದೇಶ ರವಾನಿಸಿದೆ.


COMMERCIAL BREAK
SCROLL TO CONTINUE READING

ಪಾಕಿಸ್ತಾನದ ಫೆಡರಲ್ ಕ್ಯಾಬಿನೆಟ್ ಮಂಗಳವಾರ ನಕ್ಷೆಯನ್ನು ಅನುಮೋದಿಸಿದೆ ಎಂದು ಹೇಳಲಾಗಿದೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ (Imran Khan) ತಮ್ಮ ದೇಶದ ಹೊಸ ರಾಜಕೀಯ ನಕ್ಷೆಯನ್ನು ಇಸ್ಲಾಮಾಬಾದ್‌ನಲ್ಲಿ ಬಿಡುಗಡೆ ಮಾಡಿದ ಕೆಲವೇ ಗಂಟೆಗಳ ನಂತರ ನವದೆಹಲಿಯಿಂದ ಈ ಕಠಿಣ ಪ್ರತಿಕ್ರಿಯೆ ನೀಡಲಾಗಿದೆ. 


 ಜಮ್ಮು ಮತ್ತು ಕಾಶ್ಮೀರ (Jammu and Kashmir) ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಭಾರತ ಸರ್ಕಾರದ ಐತಿಹಾಸಿಕ ನಿರ್ಧಾರ ಒಂದು ವರ್ಷ ಪೂರ್ಣಗೊಳ್ಳುವ ಒಂದು ದಿನದ ಮೊದಲು ಪಾಕಿಸ್ತಾನ ನಕ್ಷೆಯಲ್ಲಿ ಈ ವಿವಾದಾತ್ಮಕ ಬದಲಾವಣೆಗಳನ್ನು ಮಾಡಲಾಗಿದೆ. ನವದೆಹಲಿಯ ಸಂಕ್ಷಿಪ್ತ ಹೇಳಿಕೆಯಲ್ಲಿ ವಿದೇಶಾಂಗ ಸಚಿವಾಲಯವು "ಪಾಕಿಸ್ತಾನದ ರಾಜಕೀಯ ನಕ್ಷೆ" ಎಂದು ಕರೆಯಲ್ಪಡುವದನ್ನು ನಾವು ನೋಡಿದ್ದೇವೆ, ಅದನ್ನು ಪ್ರಧಾನಿ ಇಮ್ರಾನ್ ಖಾನ್ ಬಿಡುಗಡೆ ಮಾಡಿದ್ದಾರೆ. ಇದು ರಾಜಕೀಯ ಮೂರ್ಖತನದ ಕೃತ್ಯವಾಗಿದ್ದು, ಇದರಲ್ಲಿ ಭಾರತದ ಗುಜರಾತ್ ರಾಜ್ಯಗಳು ಮತ್ತು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ಕೇಂದ್ರಾಡಳಿತ ಪ್ರದೇಶಗಳ ಕೆಲ ಪ್ರದೇಶಗಳನ್ನು ಅಸಂಬದ್ಧವಾಗಿ ತನ್ನದೆಂದು ಹೇಳಿಕೊಳ್ಳುತ್ತವೆ. 


ಜಮ್ಮು ಮತ್ತು ಕಾಶ್ಮೀರದ ಹಿರಾನಗರ್ ವಲಯದಲ್ಲಿ ಪಾಕಿಸ್ತಾನದ ಸ್ಪೈ ಡ್ರೋನ್ ಪತ್ತೆ


ಇಂತಹ ಹಾಸ್ಯಾಸ್ಪದ ವಿಷಯಗಳಿಗೆ ಕಾನೂನು ಮಾನ್ಯತೆ ಅಥವಾ ಅಂತರರಾಷ್ಟ್ರೀಯ ವಿಶ್ವಾಸಾರ್ಹತೆ ಇಲ್ಲ. ವಾಸ್ತವವಾಗಿ ಈ ಹೊಸ ಪ್ರಯತ್ನವು ಗಡಿಯಾಚೆಗಿನ ಭಯೋತ್ಪಾದನೆಯ ಮೂಲಕ ಈ ಪ್ರದೇಶವನ್ನು ವಶಪಡಿಸಿಕೊಳ್ಳಲು ಪಾಕಿಸ್ತಾನವು ಆಸಕ್ತಿ ಹೊಂದಿದೆ ಎಂಬುದನ್ನು ಖಚಿತಪಡಿಸುತ್ತದೆ ಎಂದಿದ್ದಾರೆ.


ಹೊಸ ನಕ್ಷೆ:
ಹೊಸ ನಕ್ಷೆಯಲ್ಲಿ ಪಾಕಿಸ್ತಾನವು ಭಾರತದೊಂದಿಗಿನ ಗಡಿಯನ್ನು ತೋರಿಸುತ್ತದೆ, ಪಾಕಿಸ್ತಾನವು ಅದರ ಪಕ್ಕದ ಕಾಶ್ಮೀರದ ಸಂಪೂರ್ಣ ಭಾಗವನ್ನು ತೋರಿಸಿದೆ. ಆದಾಗ್ಯೂ ಚೀನಾದ ಗಡಿಯಲ್ಲಿರುವ ಕಾಶ್ಮೀರ ಮತ್ತು ಲಡಾಖ್‌ನ ಒಂದು ಭಾಗವನ್ನು ಗುರುತಿಸಲಾಗಿಲ್ಲ ಮತ್ತು ಇದನ್ನು "ಅನಿರ್ದಿಷ್ಟ ಗಡಿ" ಎಂದು ವಿವರಿಸಲಾಗಿದೆ. ಅಂತೆಯೇ ನಿಯಂತ್ರಣ ರೇಖೆಯನ್ನು ಕರಕೋರಂ ಪಾಸ್ಗೆ ವಿಸ್ತರಿಸಲಾಗಿದೆ, ಇದರಲ್ಲಿ ಸಿಯಾಚಿನ್ ಅನ್ನು ಪಾಕಿಸ್ತಾನದ ಭಾಗವೆಂದು ಸ್ಪಷ್ಟವಾಗಿ ವಿವರಿಸಲಾಗಿದೆ. ನಿಯಂತ್ರಣ ರೇಖೆಯನ್ನು (ಎಲ್‌ಒಸಿ) ಕೆಂಪು ಚುಕ್ಕೆಗಳಿರುವ ರೇಖೆಯೊಂದಿಗೆ ತೋರಿಸಲಾಗಿದೆ.


ಕಾಶ್ಮೀರಕ್ಕೆ ಶೀಘ್ರದಲ್ಲೇ ಸಿಗಲಿದೆ ಮೊದಲ ಮಲ್ಟಿಪ್ಲೆಕ್ಸ್ ಚಿತ್ರಮಂದಿರ


ಈ ವಿಷಯದ ಬಗ್ಗೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಇಮ್ರಾನ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದ್ದು, ನಕ್ಷೆಯಲ್ಲಿನ ಬದಲಾವಣೆಗಳು 'ಅಸಂಬದ್ಧ' ಎಂದು ಹೇಳಿದ್ದಾರೆ. "ಭಾರತದ ಏಕತೆ ಮತ್ತು ಸಮಗ್ರತೆಯನ್ನು ಹಾಳುಮಾಡುವ ಅಪಪ್ರಚಾರದ ಚಿಂತನೆಯಲ್ಲಿ ಪಾಕಿಸ್ತಾನ ಎಂದಿಗೂ ಯಶಸ್ವಿಯಾಗುವುದಿಲ್ಲ" ಎಂದು ರೂಪಾನಿ ಟ್ವೀಟ್ ಮಾಡಿದ್ದಾರೆ.




ನಕ್ಷೆಯು ಜಮ್ಮು ಮತ್ತು ಕಾಶ್ಮೀರವನ್ನು "ವಿವಾದಿತ ಪ್ರದೇಶ" ಎಂದು ವಿವರಿಸುತ್ತದೆ, ಇದರ ಸಂಬಂಧಿತ ಯುಎನ್‌ಎಸ್‌ಸಿ ನಿರ್ಣಯಗಳ ಅಡಿಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಇಸ್ಲಾಮಾಬಾದ್‌ನ ಪ್ರಮುಖ ಮಾರ್ಗವನ್ನು ಶ್ರೀನಗರ ಹೆದ್ದಾರಿಗೆ ಮರುನಾಮಕರಣ ಮಾಡಲು ಪಾಕಿಸ್ತಾನ ಸಚಿವ ಸಂಪುಟ ಅನುಮೋದನೆ ನೀಡಿತು. ಇದನ್ನು ಮೊದಲು ಕಾಶ್ಮೀರ ಹೆದ್ದಾರಿ ಎಂದು ಕರೆಯಲಾಗುತ್ತಿತ್ತು. ಜಮ್ಮು ಮತ್ತು ಕಾಶ್ಮೀರದ ಮರುಸಂಘಟನೆಯ ಕುರಿತು ಕಳೆದ ಒಂದು ವರ್ಷದಿಂದ ಭಾರತದ ವಿರುದ್ಧ ಅಂತರರಾಷ್ಟ್ರೀಯ ಬೆಂಬಲವನ್ನು ಪಡೆಯಲು ಪಾಕಿಸ್ತಾನ ವಿಫಲ ಪ್ರಯತ್ನಗಳನ್ನು ನಡೆಸುತ್ತಿದೆ.


ಪಾಕಿಸ್ತಾನದ ಸ್ನೇಹಿತ ಚೀನಾ ಕೂಡ ಕಾಶ್ಮೀರ ವಿಷಯದ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್‌ಎಸ್‌ಸಿ) ಚರ್ಚಿಸಲು ಪ್ರಯತ್ನಿಸಿದೆ. ಆದಾಗ್ಯೂ ಇತರ ಸದಸ್ಯ ರಾಷ್ಟ್ರಗಳು ಈ ಪ್ರಯತ್ನಗಳನ್ನು ತಿರಸ್ಕರಿಸಿದವು.