ಚೆನ್ನೈ: ಆದಾಯ ತೆರಿಗೆ ಇಲಾಖೆ ಇಂದು ಬೆಳ್ಳಂಬೆಳಗ್ಗೆ ಶಶಿಕಲಾ ಕುಟುಂಬದ ಒಡೆತನದಲ್ಲಿರುವ ಜಯ ಟಿವಿ ಮತ್ತು ಡಾ. ನಾಮ್ಧೂ ಎಂ.ಜಿ.ಆರ್ (ತಮಿಳು ವೃತ್ತಪತ್ರಿಕೆ) ಕಚೇರಿಯ ಮೇಲೆ ದಾಳಿ ಮಾಡಿದೆ. 



COMMERCIAL BREAK
SCROLL TO CONTINUE READING

 


ಜಯ ಟಿವಿ ಸಂಸ್ಥೆ ತೆರಿಗೆ ಪಾವತಿಯಲ್ಲಿ ವಂಚನೆ ಮಾಡಿರುವ ಆಧಾರದ ಮೇಲೆ ಬೆಳಿಗ್ಗೆ 6 ಗಂಟೆ ಸಮಯದಲ್ಲಿ ಐಟಿ ಇಲಾಖೆಯ 10 ಅಧಿಕಾರಿಗಳು ಜಯ ಟಿವಿ ಕಚೇರಿಯಲ್ಲಿ ದಾಳಿ ಮಾಡಿದ್ದಾರೆ. ಈ ಚಾನೆಲ್ ಅನ್ನು ಜಯಲಲಿತಾ ಅವರು ಪ್ರಾರಂಭಿಸಿದರು. ಆದರೆ, ಈಗ ಅದು ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ಕುಟುಂಬದ ಒಡೆತನದಲ್ಲಿದೆ. ಭ್ರಷ್ಟಾಚಾರದ ಆರೋಪದ ಅಡಿಯಲ್ಲಿ ಶಶಿಕಲಾ ಜೈಲಿನಲ್ಲಿರುವುದರಿಂದ, ಚಾನಲ್ ನಿಯಂತ್ರಣದ ಜವಾಬ್ದಾರಿಯನ್ನು ಪ್ರಸ್ತುತ ಆಕೆಯ ಸೋದರಳಿಯ ವಿವೇಕ್ ಜಿರುಮನ್ ನಿರ್ವಹಿಸುತ್ತಿದ್ದಾರೆ.


ಜಯ ಟಿವಿ ನೆಟ್ವರ್ಕ್ ಒಂದು ಸುದ್ದಿ ಚಾನಲ್, ಇದು ಎಂಟರ್ಟೈನ್ಮೆಂಟ್ ಚಾನಲ್ ಮತ್ತು ಚಲನಚಿತ್ರ ಚಾನೆಲ್ ಅನ್ನು ಸಹ ಹೊಂದಿದೆ.