ಛತ್ರ: ಜಾರ್ಖಂಡ್ ಪೊಲೀಸರು ಛತ್ರದಲ್ಲಿ ನಡೆಸಿದ ಎನ್‌ಕೌಂಟರ್‌ನಲ್ಲಿ ಐವರು ನಕ್ಸಲರು ಹತರಾಗಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.ಹತ್ಯೆಗೀಡಾದ ಐವರ ಪೈಕಿ ಇಬ್ಬರ ತಲೆಗೆ ತಲಾ 25 ಲಕ್ಷ ರೂ.ಬಹುಮಾನ ನೀಡಲಾಗಿದ್ದು, ಇನ್ನಿಬ್ಬರಿಗೆ ತಲಾ 5 ಲಕ್ಷ ರೂ.ಬಹುಮಾನ ಘೋಷಿಸಿದ್ದರು.


COMMERCIAL BREAK
SCROLL TO CONTINUE READING

ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ.ಈ ವಿಷಯದ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.ಭಾನುವಾರದಂದು ಪೊಲೀಸ್ ಮತ್ತು ಡಿಆರ್‌ಜಿ ಜಂಟಿ ತಂಡವು ಛತ್ತೀಸ್‌ಗಢದ ಬಂಡಾಯ ಪೀಡಿತ ಕಂಕೇರ್ ಜಿಲ್ಲೆಯಲ್ಲಿ ಮೂವರು ನಕ್ಸಲರನ್ನು ಬಂಧಿಸಿದೆ.


ಇದನ್ನೂ ಓದಿ: Nadoja Belagallu Veeranna: ತೊಗಲುಗೊಂಬೆ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಸಾವು!


ಪೊಲೀಸರ ಪ್ರಕಾರ,ಬಂಧಿತ ನಕ್ಸಲರನ್ನು ಸಮುಂದ್ ಅಲಿಯಾಸ್ ಸುಮನ್ ಸಿಂಗ್ ಅಂಚಲಾ (42), ಸಂಜಯ್ ಕುಮಾರ್ ಉಸೇಂಡಿ (27), ಮತ್ತು ಪರಶ್ರಾಮ್ ಧಂಗುಲ್ (55) ಎಂದು ಗುರುತಿಸಲಾಗಿದೆ.ನಕ್ಸಲರು ಇರುವ ಬಗ್ಗೆ ನಿಖರವಾದ ಸುಳಿವು ಆಧರಿಸಿ ಜಂಟಿ ತಂಡವು ಕಾರ್ಯಾಚರಣೆ ನಡೆಸಿದೆ.ಕೊಯೆಲಿಬೀಡಾ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯದಿಂದ ಮೂವರು ದಂಗೆಕೋರರನ್ನು ಬಂಧಿಸುವಲ್ಲಿ ತಂಡವು ಯಶಸ್ವಿಯಾಗಿದೆ" ಎಂದು ಅಂತಗಢ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಖೋಮನ್ ಸಿನ್ಹಾ ಹೇಳಿದರು.


ಇದನ್ನೂ ಓದಿ: ರಾಷ್ಟ್ರಮಟ್ಟದಲ್ಲಿ ಮಿಂಚಲು ಹೊರಟ ಹಳ್ಳಿ ಹೈದನಿಗೆ ಬೇಕಿದೆ ಸಹಾಯ ಹಸ್ತ


"ಬಂಧಿತ ನಕ್ಸಲರು ನಿರ್ಮಾಣ ಕಾರ್ಯಗಳಲ್ಲಿ ತೊಡಗಿದ್ದ ವಾಹನಗಳಿಗೆ ಬೆಂಕಿ ಹಚ್ಚುವುದು, ಟವರ್‌ಗಳಿಗೆ ಬೆಂಕಿ ಹಚ್ಚುವುದು ಮತ್ತು ಜನರನ್ನು ಪೊಲೀಸ್ ಮಾಹಿತಿದಾರರು ಮತ್ತು ಇತರರು ಎಂದು ಬ್ರಾಂಡ್ ಮಾಡುವ ಮೂಲಕ ಜನರ ಮೇಲೆ ಹಲ್ಲೆ ನಡೆಸುವುದು ಸೇರಿದಂತೆ ಹಲವಾರು ಘಟನೆಗಳಲ್ಲಿ ಭಾಗಿಯಾಗಿದ್ದಾರೆ" ಎಂದು ಎಎಸ್ಪಿ ಸಿನ್ಹಾ ತಿಳಿಸಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.