ನವದೆಹಲಿ: ಗೋವಾದ ಕೃಷಿ ಸಚಿವ ಈಗ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ರನ್ನು ಜೀಸಸ್ ಗೆ ಹೋಲಿಸಿದ್ದಾರೆ. ಸದನದಲ್ಲಿ ಮಾತನಾಡುತ್ತಾ ಸಿಎಂ ರನ್ನು ಹೊಗಳಿದ ಸಚಿವರು "ಪರಿಕ್ಕರ್ ಅವರು ಜೀಸಸ್ ರೀತಿ ಸೇತುವೆಗಳನ್ನು ನಿರ್ಮಿಸುತ್ತಾರೇ ಹೊರತು ಗೋಡೆಗಳನ್ನಲ್ಲ" ಎಂದು ಹೊಗಳಿದ್ದಾರೆ.


COMMERCIAL BREAK
SCROLL TO CONTINUE READING

ಮಾಂಡೋವಿ ನದಿಗೆ ನಿರ್ಮಿಸಿರುವ ಅಟಲ್ ಸೇತುವೆ ಪೂರ್ಣಗೊಂಡಿರುವ ವಿಚಾರವಾಗಿ ಸದನದಲ್ಲಿ ಧನ್ಯವಾದಗಳನ್ನು ಅರ್ಪಿಸಿದ ಸಚಿವ ವಿಜಯ ಸರ್ದೇಸಾಯಿ " ಬೈಬಲ್ ನಲ್ಲಿ ಒಂದು ಹೇಳಿಕೆ ಇದೆ. ಮನುಷ್ಯ ಸೇತುವೆಗಳನ್ನು ನಿರ್ಮಿಸಬೇಕೆ ಹೊರತು ಗೋಡೆಗಳನ್ನಲ್ಲ, ಆದ್ದರಿಂದ ಜೀಸಸ್ ಸೇತುವೆಯನ್ನು ನಿರ್ಮಿಸಿದರೇ ಹೊರತು ಗೋಡೆಗಳನ್ನಲ್ಲ.ಆದ್ದರಿಂದ ಸಿಎಂ ಮನೋಹರ್ ಪರಿಕ್ಕರ್ ಸೇತುವೆಗಳನ್ನು ನಿರ್ಮಿಸುವ ವ್ಯಕ್ತಿ" ಎಂದು ಶ್ಲಾಘಿಸಿದರು.


ಸಿಎಂ ಮನೋಹರ್ ಪರಿಕ್ಕರ್ ಸದ್ಯ ಕ್ಯಾನ್ಸರ್ ಗಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.ಈ ಹಿಂದೆ ಅವರು ನ್ಯೂಯಾರ್ಕ್ ಮತ್ತು ಮುಂಬೈನಲ್ಲಿ ಚಿಕಿತ್ಸೆ ಪಡೆದಿದ್ದರು. ಈಗ ಆಗಾಗ ಚೆಕ್ ಅಪ್ ಗಾಗಿ ಅವರು ದೆಹಲಿಯ ಏಮ್ಸ್ ಆಸ್ಪತ್ರೆಗೆ ಬರುತ್ತಿರುತ್ತಾರೆ. ಇತ್ತೀಚಿಗೆ ಪರಿಕ್ಕರ್ ಅವರನ್ನು ಭೇಟಿ ಮಾಡಿದ್ದ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಅನಂತರ ರಫೇಲ್ ಒಪ್ಪಂದದ ವಿಚಾರವಾಗಿ ಹೇಳಿಕೆಯನ್ನು ನೀಡಿದ್ದರು.ಇದಕ್ಕೆ ಪ್ರತಿಯಾಗಿ ಪರಿಕ್ಕರ್ ರಾಹುಲ್ ಗಾಂಧಿಗೆ ಪತ್ರ ಬರೆದು ತಮ್ಮ ಭೇಟಿಯನ್ನು ರಾಜಕೀಯ ಹಿತಾಸಕ್ತಿಗೆ ಬಳಸಿಕೊಂಡಿರುವುದಕ್ಕೆ ಪರಿಕ್ಕರ್ ಕಿಡಿಕಾರಿದ್ದರು.