ವಿಜಯವಾಡ: ಆಂಧ್ರ ಪ್ರದೇಶದಲ್ಲಿ ಜಗನ ಮೋಹನ್ ರೆಡ್ಡಿ ಸರ್ಕಾರ ಪರಿಷ್ಕೃತ ಅಬಕಾರಿ ನೀತಿ ಜಾರಿಗೆ ತರಲು ಮುಂದಾಗಿದೆ. ಹೊಸ ನಿಯಮದನ್ವಯ, ಮದ್ಯದಂಗಡಿಗಳು ರಾತ್ರಿ 10 ಗಂಟೆ ಬದಲು, ಸಂಜೆ 6 ಗಂಟೆಗೇ ಬಾಗಿಲು ಮುಚ್ಚಬೇಕಿದೆ.


COMMERCIAL BREAK
SCROLL TO CONTINUE READING

ಹೊಸ ನಿಯಮ ಜಾರಿಗೆ ಬಂದಿದ್ದೆ ಆದಲ್ಲಿ ಕುಡುಕರಿಗೆ ಸಮಸ್ಯೆ ಆಗದಿದ್ದರೂ, ಕೊಂಚ ಕಡಿವಾಣ ಬೀಳಲಿದೆ ಎಂಬುದು ಅಬಕಾರಿ ಇಲಾಖೆಯ ಪ್ಲಾನ್ ಆಗಿದೆ.


ಅಷ್ಟೇ ಅಲ್ಲದೆ, ಮದ್ಯದಂಗಡಿಗಳ ಸಂಖ್ಯೆಯನ್ನು ಶೇ.20ರಷ್ಟು ಕಡಿಮೆ ಮಾಡುವ ಉದ್ದೇಶ ಹೊಂದಿರುವ ಜಗನ್ ಸರ್ಕಾರ, ಬೆಲೆ ಏರಿಕೆ ಮಾಡುವ ಹಾಗೂ ಕೆಲವು ಬ್ರಾಂಡ್​ಗಳನ್ನು ಬಂದ್ ಮಾಡುವ ನಿರ್ಧಾರವನ್ನೂ ಕೈಗೊಳ್ಳಲುವ ಸಾಧ್ಯತೆ ಇದೇ ಎನ್ನಲಾಗಿದೆ. 


ಅಧಿಕಾರಕ್ಕೆ ಬಂದರೆ ಆಂಧ್ರ ಪ್ರದೇಶವನ್ನು ಮದ್ಯ ಮುಕ್ತ ಮಾಡುವುದಾಗಿ ಆಶ್ವಾಸನೆ ನೀಡಿದ್ದ ಜಗನ್, ಈ ನಿಟ್ಟಿನಲ್ಲಿ ಇಂತಹ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ.