ಚೆನ್ನೈ: ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕರುಣಾನಿಧಿ ಒಂದು ವರ್ಷದ ನಂತರ ಪಕ್ಷದ ಕಚೇರಿಗೆ ಭೇಟಿ ನೀಡಿದ್ದಾರೆ. ಕಳೆದ ಡಿಸೆಂಬರ್ ನಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಆ ನಂತರದಲ್ಲಿ ಕಚೇರಿಗೆ ಭೇಟಿ ನೀಡಿರಲಿಲ್ಲ.


COMMERCIAL BREAK
SCROLL TO CONTINUE READING

ವೀಲ್ ಚೇರ್ನಲ್ಲಿ ಪಕ್ಷದ ಕಚೇರಿಗೆ ಆಗಮಿಸಿದ ಕರುಣಾನಿಧಿ ಜೊತೆ ಅವರ ಮಗ ಮತ್ತು ಡಿಎಂಕೆ ಕಾರ್ಯಕಾರಿ ಅಧ್ಯಕ್ಷ ಎಂ.ಕೆ. ಸ್ಟಾಲಿನ್, ಮಗಳು ಸೆಲ್ವಿ ಮತ್ತು ಹಿರಿಯ ನಾಯಕ ದುರೈ ಮುರುಗನ್ ಸಹ ಇದ್ದರು.


ಔಷಧ-ಪ್ರೇರಿತ ಅಲರ್ಜಿ ಕಾರಣ ಕರುಣಾನಿಧಿ ಅಕ್ಟೋಬರ್ 2016 ರಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಆ ವರ್ಷ ಡಿಸೆಂಬರ್ನಲ್ಲಿ ಅವರನ್ನು ಎರಡು ಬಾರಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.


ಹಿರಿಯ ನಾಯಕನನ್ನು ಡಿಸೆಂಬರ್ ಮೊದಲ ವಾರದಲ್ಲಿ "ಪೌಷ್ಟಿಕತೆ ಮತ್ತು ಜಲಸಂಚಯನವನ್ನು ಉತ್ತಮಗೊಳಿಸುವಿಕೆ" ಗಾಗಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು ಮತ್ತು ನಂತರ ಗಂಟಲು ಮತ್ತು ಶ್ವಾಸಕೋಶದ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು.