ಕೋಲ್ಕತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ನಡುವೆ ನೇರ ಹಣಾಹಣೆ ಏರ್ಪಟ್ಟಿದೆ. ಮಮತಾ ಬ್ಯಾನರ್ಜಿ (Mamata Banerjee) ಬಿಜೆಪಿ ಮುಖಂಡರಿಗೆ ಹೊರಗಿನವರು ಎಂದು ಟೀಕಿಸಿದ ನಂತರ, ಬಿಜೆಪಿ ನಂದಿಗ್ರಾಮ್ನಲ್ಲಿ ಸ್ಥಳೀಯ ಸಮಸ್ಯೆಗಳನ್ನು ಪ್ರಸ್ತಾಪಿಸಿ ಮಮತಾ ಬ್ಯಾನರ್ಜಿಯನ್ನು ಹೊರಗಿನವರು ಎಂದು ಕರೆದಿದೆ. ಇದರ ನಂತರ ಮಹತ್ವದ ನಿರ್ಧಾರ ಕೈಗೊಂಡಿರುವ ಮಮತಾ ಬ್ಯಾನರ್ಜಿ ನಂದಿಗ್ರಾಮ್ನಲ್ಲಿ 2 ಮನೆಗಳನ್ನು ಬಾಡಿಗೆಗೆ ತೆಗೆದುಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಮಮತಾ ಬ್ಯಾನರ್ಜಿ ಬಾಡಿಗೆ ಮನೆ ಪಡೆದ ಹಿಂದಿನ ಉದ್ದೇಶ?
ಸುವೆಂದು ಅಧಿಕಾರಿ (Suvendu Adhikari) ಸಿಎಂ ಮಮತಾ ಬ್ಯಾನರ್ಜಿಯವರನ್ನು ನಂದಿಗ್ರಾಮಕ್ಕೆ ಹೊರಗಿನವರು ಎಂದು ಬಣ್ಣಿಸಿದ ನಂತರ ಮಮತಾ ಬ್ಯಾನರ್ಜಿ (Mamata Banerjee) ಈ ಕ್ರಮ ಕೈಗೊಂಡಿದ್ದಾರೆ. ಈ ಮೂಲಕ ಹೊರಗಿನವರ ಎಂಬ ಟ್ಯಾಗ್ ಅನ್ನು ತೆಗೆದುಹಾಕಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಅವರು ನಂದಿಗ್ರಾಮ್ನ ರಾಯಪಾಡ ಪ್ರದೇಶದಲ್ಲಿ ಎರಡು ಮನೆಗಳನ್ನು ಬಾಡಿಗೆಗೆ ತೆಗೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಭಾನುವಾರ (ಮಾರ್ಚ್ 21) ನಡೆದ ರ್ಯಾಲಿಯೊಂದರಲ್ಲಿ, ಮಮತಾ ಬ್ಯಾನರ್ಜಿ ಅವರು ಶೀಘ್ರದಲ್ಲೇ ಹಲ್ಡಿ ನದಿಯ ದಡದಲ್ಲಿ ತನ್ನ ಪಕ್ಕಾ ಮನೆಯನ್ನು ನಿರ್ಮಿಸುವುದಾಗಿ ಹೇಳಿದರು.


ಇದನ್ನೂ ಓದಿ - "ನಮಗೆ ದುರ್ಯೋಧನ, ದುಶ್ಯಾಸನ ಬೇಕಿಲ್ಲ"


ಕಾಲಿಗೆ ಪೆಟ್ಟಾಗಿದ್ದರಿಂದ ತನ್ನ ಯೋಜನೆಯನ್ನು ಬದಲಾಯಿಸಿದ ಮಮತಾ ಬ್ಯಾನರ್ಜಿ : 
ಮಮತಾ ಬ್ಯಾನರ್ಜಿ ಈ ಹಿಂದೆ ವಾಸಿಸಲು ನಿರ್ಧರಿಸಿದ್ದ ಮನೆಯಲ್ಲಿ ನೆಲ ಮಹಡಿಯಲ್ಲಿ ಅಂಗಡಿಗಳಿವೆ ಮತ್ತು ಮೊದಲ ಮಹಡಿಯಲ್ಲಿ ವಾಸಿಸಲು ಸ್ಥಳವಿದೆ ಎಂದು ಸ್ಥಳೀಯ ಜನರು ಹೇಳುತ್ತಾರೆ. ಹೇಗಾದರೂ, ಕಾಲಿಗೆ ಗಾಯವಾದ ನಂತರ, ಮಮತಾ ಬ್ಯಾನರ್ಜಿ ತನ್ನ ಯೋಜನೆಯನ್ನು ಬದಲಾಯಿಸಿಕೊಂಡಿದ್ದಾರೆ. ಹಾಗಾಗಿ ಅವರು ನೆಲಮಹದಿಯಲ್ಲಿರುವ ಮನೆಗಳನ್ನು ಬಾಡಿಗೆಗೆ ಪಡೆದಿದ್ದಾರೆ. ಮಮತಾ ಬ್ಯಾನರ್ಜಿ ವಾಸಿಸಲು ಹೋಗುವ ಮನೆಯಲ್ಲಿ, ಕೆಲಸ ನಡೆಯುತ್ತಿದೆ ಮತ್ತು ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ಮನೆಯ ಮಾಲೀಕ ಸುಡಮ್ ಚಂದ್ರ ಪಾರುಯಿ ನಿವೃತ್ತ ಶಾಲಾ ಶಿಕ್ಷಕ. ಅದೇ ಸಮಯದಲ್ಲಿ, ಅವರ ಭದ್ರತಾ ಸಿಬ್ಬಂದಿ ಇನ್ನೊಂದು ಮನೆಯಲ್ಲಿ ಉಳಿಯುತ್ತಾರೆ ಎಂದು ಹೇಳಲಾಗುತ್ತಿದೆ.


ನಂದಿಗ್ರಾಮ್ನಲ್ಲಿ ಮಮತಾ ಬ್ಯಾನರ್ಜಿ Vs ಸುವೆಂದು ಅಧಿಕಾರಿ :
ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ತಮ್ಮ ಸಾಂಪ್ರದಾಯಿಕ ಸ್ಥಾನ ಭವಾನಿಪುರವನ್ನು ತೊರೆದು ಈ ಬಾರಿ ಚುನಾವಣೆಯಲ್ಲಿ ನಂದಿಗ್ರಾಮ್‌ನಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಅದೇ ಸಮಯದಲ್ಲಿ, ಟಿಎಂಸಿಯನ್ನು ತೊರೆದ ಸುವೆಂದು ಅಧಿಕಾರಿಯನ್ನು (Suvendu Adhikari) ಬಿಜೆಪಿ ನಂದಿಗ್ರಾಮ್‌ನಿಂದ  ಕಣಕ್ಕಿಳಿಸಿದೆ.


ಇದನ್ನೂ ಓದಿ - "ನಾನು ಅಧಿಕಾರಿ ಕುಟುಂಬದ ನಿಜವಾದ ಮುಖ ಗುರುತಿಸದ ಕತ್ತೆ"


ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ಮತದಾನ ನಡೆಯಲಿದೆ:
ಪಶ್ಚಿಮ ಬಂಗಾಳದ 294 ವಿಧಾನಸಭಾ ಸ್ಥಾನಗಳಿಗೆ 8 ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 27, ಏಪ್ರಿಲ್ 1, ಏಪ್ರಿಲ್ 6, ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಮತ್ತು ಏಪ್ರಿಲ್ 29 ರಂದು ರಾಜ್ಯದಲ್ಲಿ ಮತದಾನ ನಡೆಯಲಿದ್ದು, ಮೇ 2 ರಂದು ಚುನಾವಣಾ ಫಲಿತಾಂಶಗಳು ಬರಲಿವೆ. ಮೊದಲ ಮತ್ತು ಎರಡನೇ ಹಂತದಲ್ಲಿ 30-30 ಸ್ಥಾನಗಳು, ಮೂರನೇ ಹಂತದಲ್ಲಿ 31 ಸ್ಥಾನಗಳು, ನಾಲ್ಕನೇ ಹಂತದಲ್ಲಿ 44 ಸ್ಥಾನಗಳು, ಐದನೇ ಹಂತದಲ್ಲಿ 45 ಸ್ಥಾನಗಳು, ಆರನೇ ಹಂತದಲ್ಲಿ 43 ಸ್ಥಾನಗಳು, ಏಳನೇ ಹಂತದಲ್ಲಿ 36 ಸ್ಥಾನಗಳಿಗೆ ಮತದಾನ ನಡೆಯಲಿದ್ದು ಎಂಟನೇ ಹಂತದಲ್ಲಿ 35 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ನಡೆಯಲಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.