#MeToo:5ನೇ ಕ್ಲಾಸ್ ನಲ್ಲಿ ಆಡುತ್ತಿದ್ದಾಗ ನಡೆದುದ್ದರ ಬಗ್ಗೆ ಈಗ ಆರೋಪ ಮಾಡುವುದು ಸರಿಯೇ? ಕೇಂದ್ರ ಸಚಿವ
ಮೀಟೂ ಚಳುವಳಿಯನ್ನು ದೇಶದಲ್ಲಿ ವಿಕೃತ ಮನಸ್ಸಿನವರು ಪ್ರಾರಂಭಿಸಿದ್ದಾರೆ ಎಂದು ಕೇಂದ್ರ ಸಚಿವ ಪೋನ್ ರಾಧಾಕೃಷ್ಣನ್ ಮೀಟೂ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನವದೆಹಲಿ: ಮೀಟೂ ಚಳುವಳಿಯನ್ನು ದೇಶದಲ್ಲಿ ವಿಕೃತ ಮನಸ್ಸಿನವರು ಪ್ರಾರಂಭಿಸಿದ್ದಾರೆ ಎಂದು ಕೇಂದ್ರ ಸಚಿವ ಪೋನ್ ರಾಧಾಕೃಷ್ಣನ್ ಮೀಟೂ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರು ಮೀಟೂ ಚಳುವಳಿ ಕುರಿತಾಗಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಮಾತನಾಡಿದ ಸಚಿವರು "ಯಾರಾದರೋ ಅಂತಹ ಘಟನೆ ನಡೆದಿದೆ ಎಂದು ಆರೋಪ ಮಾಡಿದರೆ..ಆ ಘಟನೆಯು ನಾವು ಐದನೇ ತರಗತಿಯಲ್ಲಿ ಜೊತೆಯಾಗಿ ಆಟವಾಡುತ್ತಿರಬೇಕಾದರೆ ನಡೆದಿದ್ದರೆ ಅದರ ಕುರಿತಾಗಿ ಈಗ ಆರೋಪ ಮಾಡುವುದು ಸರಿಯೇ? ಇಂತಹ ಚಳುವಳಿ ವಿಕೃತ ಮನಸ್ಸನ್ನು ಹೊಂದಿದವರ ಫಲವಾಗಿ ಸುರುವಾಗಿದೆ" ಎಂದು ಆರೋಪಿಸಿದ್ದಾರೆ
ಇನ್ನು ಮುಂದುವರೆದು ಇದೆ ರೀತಿಯ ಆರೋಪಗಳನ್ನು ಕೂಡ ಪುರುಷರು ಮಾಡ ತೊಡಗಿದರೆ ಅದು ಅವಮಾನವಾಗಲಿದೆ ಇದನ್ನು ಸ್ವೀಕೃತಿ ಮಾಡಿಕೊಳ್ಳಲಾಗುತ್ತದೆಯೇ? ಎಂದು ಸಚಿವ ಪೋನ್ ರಾಧಾಕೃಷ್ಣನ್ ಪ್ರಶ್ನಿಸಿದ್ದಾರೆ.