ನವದೆಹಲಿ: 2014 ರಲ್ಲಿ, ಕೇಂದ್ರದಲ್ಲಿ ಅಧಿಕಾರ ಬದಲಾವಣೆಯಾದ ಬಳಿಕ, ಭಾರತ ಸರ್ಕಾರದ ಅಧೀನಕ್ಕೆ ಬರುವ ಎಲ್ಲಾ ಸಚಿವಾಲಯಗಳು ಉತ್ಕರ್ಷ ಮತ್ತು ಸುಧಾರಣೆಯನ್ನು ಕಂಡಿವೆ. ಆರೋಗ್ಯ ಸಚಿವಾಲಯದ ಜವಾಬ್ದಾರಿಗಳ ನಂತರ, ಸಾಮಾನ್ಯ ಜನರ ಜೀವನದ ಸುರಕ್ಷತೆಯ ಬಗ್ಗೆ ಮಾತನಾಡಿರುವ ಎರಡನೇ ಪ್ರಮುಖ ಸಚಿವಾಲಯವೆಂದರೆ ಅದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ, ಈ ಸಚಿವಾಲಯ ಶ್ರೀಮಂತರು ಮತ್ತು ಬಡವರು, ಜಾತಿ ಮತ್ತು ಧರ್ಮದ ತಾರತಮ್ಯಕ್ಕಿಂತ ಬದಿಗಿಟ್ಟು ಪ್ರತಿಯೊಬ್ಬರ ಜೀವ ಉಳಿಸುವುದು ದೊಡ್ಡ ಆದ್ಯತೆಯಾಗಿದೆ ಎಂದು ಭಾವಿಸಿದೆ.


COMMERCIAL BREAK
SCROLL TO CONTINUE READING

ಈ ನಿಟ್ಟಿನಲ್ಲಿ ಸಾಕಷ್ಟು ಸಕ್ರಿಯವಾಗಿರುವ ಕೆಲವು ಸೂಕ್ಷ್ಮ ಇಲಾಖೆಗಳ ಬಗ್ಗೆ ಹೇಳುವುದಾದರೆ, ಕಳೆದ 6 ವರ್ಷಗಳಲ್ಲಿ ರಸ್ತೆ ಸಾರಿಗೆ ಸಚಿವಾಲಯವು ಜೀವ ಉಳಿಸುವುದರ ಕನೆಗೆ ತನ್ನ ಹೆಚ್ಚಿನ ಗಮನ ಹರಿಸಿದೆ. ರರಸ್ತೆಯಲ್ಲಿ ನಡೆಯುವ ಪ್ರತಿಯೊಬ್ಬ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಅಡಿಯಲ್ಲಿ ಬರುವ ಈ ಸಚಿವಾಲಯವು ನಿಜಕ್ಕೂ ಅನೇಕ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಇದರ ಅಡಿಯಲ್ಲಿ, ರಸ್ತೆಯ ಮೂಲಕ ಹಾದುಹೋಗುವ ಪ್ರತಿಯೊಬ್ಬ ವ್ಯಕ್ತಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅನೇಕ ಕಾನೂನುಗಳನ್ನು ಬದಲಾಯಿಸಲಾಗಿದೆ, 4 ಚಕ್ರಗಳ ವಾಹನದಿಂದ ಹಿಡಿದು 16 ಚಕ್ರಗಳು ಅಥವಾ ಅದಕ್ಕಿಂತ ಹೆಚ್ಚಿನ ವಾಹನಗಳಿಗೆ ಹೊಸ ನೀತಿ ಮತ್ತು ನಿಯಮಗಳನ್ನು ಜಾರಿಗೊಳಿಸುವುದರ ಜೊತೆಗೆ ದ್ವಿಚಕ್ರ ವಾಹನಗಳ ಸುರಕ್ಷತೆಯ ಪರಿಶೀಲನೆಯ ನಡೆಸಲು ಹೊಸ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. 


ಚಾಲಕರ ಹಿಂದಿನ ಸೀಟ್ ಗೆ ಹ್ಯಾಂಡ್ ಹೋಲ್ಡ್ ಇರಲೇಬೇಕು
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಹೊಸ ಮಾರ್ಗಸೂಚಿಗಳ ಪ್ರಕಾರ, ಈಗ ಬೈಕ್‌ನ ಎರಡೂ ಬಾಡಿಗೆ ಚಾಲಕನ ಹಿಂದಿನ ಆಸನಕ್ಕೆ ಹ್ಯಾಂಡ್ ಹೆಲ್ಡ್ ಕಡ್ಡಾಯವಾಗಿದೆ. ಇಲ್ಲಿಯವರೆಗೆ ಹೆಚ್ಚಿನ ಬೈಕ್‌ಗಳಿಗೆ ಈ ಸೌಲಭ್ಯವಿರಲಿಲ್ಲ. ಆದರೆ, ಕೆಲವು ದಶಕಗಳ ಹಿಂದೆ ದ್ವಿಚಕ್ರ ವಾಹನಗಳನ್ನು ತಯಾರಿಸುವ ಕೆಲವು ಕಂಪನಿಗಳು ಇದನ್ನು ಅನುಸರಿಸಿದ್ದವು. ಇದೀಗ ಸಚಿವಾಲಯ ಕೂಡ ಬೈಕ್ ನ ಎರಡು ಬಾಡಿಗೆ ಇವುಗಳನ್ನು ಕಡ್ಡಾಯಗೊಳಿಸಿದೆ. ಜೊತೆಗೆ ಬೈಕ್‌ನ ಹಿಂದಿನ ಚಕ್ರದ ಎಡಭಾಗದ ಗರಿಷ್ಠ ಭಾಗವನ್ನು ಸರಿಯಾಗಿ ಕವರ್ ಮಾಡಬೇಕು ಎನ್ನಲಾಗಿದೆ. ಇದರಿಂದ ಹಿಂದೆ ಕುಳಿತವರ ಬಟ್ಟೆಗಳನ್ನು ಚಕ್ರದಲ್ಲಿ ಸಿಲುಕಿಕೊಳ್ಳುವುದಿಲ್ಲ.


ಇದಲ್ಲದೆ ಬೈಕ್‌ನಲ್ಲಿ ಲೈಟ್ ಕಂಟೇನರ್‌ಗಳನ್ನು ಅಳವಡಿಸಲು ಸಚಿವಾಲಯ ಸಲಹೆ ನೀಡಿದೆ. ಹೊಸ ಮಾನದಂಡಗಳಲ್ಲಿ ಅನುಸಾರ ಕಂಟೇನರ್ ಎತ್ತರವು 550 ಮಿ.ಮೀ, ಅಗಲ 510 ಮಿ.ಮೀ ಎತ್ತರ 500 ಮಿ.ಮೀ ಗಿಂತ ಹೆಚ್ಚಾಗಿರಬಾರದು. ಹಿಂದಿನ ಸವಾರಿಯ ಸ್ಥಳದಲ್ಲಿ ಈ ಕಂಟೇನರ್ ಅನ್ನು ಅಳವಡಿಸಿದ್ದರೆ, ಡ್ರೈವರ್ ಹೊರತುಪಡಿಸಿ ಬೇರೆ ಯಾರೂ ಬೈಕ್ ಮೇಲೆ ಕುಳಿತುಕೊಳ್ಳಬಾರದು.  ಕಾಲಕಾಲಕ್ಕೆ ಈ ನಿಯಮಗಳನ್ನು ಬದಲಾಯಿಸಲು ಸರ್ಕಾರ ಮುಕ್ತವಾಗಿದೆ ಎಂಬುದು ಇಲ್ಲಿ ಗಮನಾರ್ಹ.


ವಾಹನಗಳ ಟೈರ್ ಗಳಿಗೆ ಸಂಬಂಧಿಸಿದಂತೆಯೂ ಕೂಡ ಇತ್ತೀಚೆಗಷ್ಟೇ ಸರ್ಕಾರ ನೂತನ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಇದರಲ್ಲಿ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಅನ್ನು ಸೂಚಿಸಲಾಗಿದ್ದು, ಹೊಸ ವ್ಯವಸ್ಥೆಯಲ್ಲಿ ಸ್ಥಾಪಿಸಲಾದ ಮೀಟರ್ ಗಳು ವಾಹನದ ಟೈರ್‌ಗಳಲ್ಲಿ ಗಾಳಿಯ ಒತ್ತಡ ಎಷ್ಟಿದೆ ಎಂಬ ಮಾಹಿತಿ ಚಾಲಕನಿಗೆ ತಿಳಿಸುತ್ತದೆ, ಇದರೊಂದಿಗೆ ಸಚಿವಾಲಯವು ಟೈರ್ ರಿಪೇರಿ ಕಿಟ್ ಅನ್ನು ಸಹ ಶಿಫಾರಸು ಮಾಡಿದೆ.