Ram Mandir Pran Pratishtha: ಅಯೋಧ್ಯೆ ನಗರವು ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ ಸಂಪೂರ್ಣವಾಗಿ ಸಿದ್ಧವಾಗಿದೆ. ಭಗವಾನ್ ರಾಮನ ಆಗಮನಕ್ಕೆ ಪ್ರತಿಯೊಬ್ಬರೂ ಕೊಡುಗೆ ನೀಡಲು ಬಯಸುತ್ತಿದ್ದಾರೆ. ಅಮ್ರೋಹಾದ ಮುಸ್ಲಿಂ ಕುಟುಂಬವೂ ಸಹ ಇದಕ್ಕೆ ಸಿದ್ಧತೆ ಮಾಡಿಕೊಂಡಿದೆ. ಶ್ರೀರಾಮನ ಹೆಸರಿನ ಕ್ಯಾಪ್‌ಗಳನ್ನು ಈ ಕುಟುಂಬ ಸಿದ್ಧಪಡಿಸುತ್ತಿದೆ. ಜನವರಿ 22 ರಂದು ರಾಮ ಮಂದಿರ ಉದ್ಘಾಟನಾ ದಿನದಂದು ಶ್ರೀರಾಮನ ಭಕ್ತರು ಈ ಕ್ಯಾಪ್‌ಗಳನ್ನು ಧರಿಸಲಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರಾಮಲಲ್ಲಾನನ್ನು ನೋಡಲು ಕರ್ನಾಟಕದಿಂದ ಅಯೋಧ್ಯೆಗೆ 2000km ನಡೆದು ಬಂದ ʻಆಧುನಿಕ ಗಾಂಧಿʼ.! 


ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೂ ಮುನ್ನ, ಉತ್ತರ ಪ್ರದೇಶದ ಅಮ್ರೋಹದ ಮುಸ್ಲಿಂ ಕುಶಲಕರ್ಮಿ ವಾಸಿಂ ಬೇಗ್ ಮತ್ತು ಅವರ ಕುಟುಂಬ ಉದ್ಘಾಟನಾ ದಿನದಂದು ಧರಿಸಲು ಜೈ ಶ್ರೀ ರಾಮ್ ಎಂದು ಬರೆದ ಕ್ಯಾಪ್‌ಳನ್ನು ತಯಾರಿಸುತ್ತಿದ್ದಾರೆ. ಭಗವಾನ್ ಶ್ರೀರಾಮನ ಚಿತ್ರ ಮತ್ತು ಹೆಸರಿನೊಂದಿಗೆ 40 ಸಾವಿರ ಕ್ಯಾಪ್‌ಗಳನ್ನು ತಯಾರಿಸಲು ದೆಹಲಿಯಿಂದ ಆರ್ಡರ್‌ ಸಿಕ್ಕಿದೆ ಎಂದು ಹೇಳಿದ್ದಾರೆ.  


ಅಮ್ರೋಹ ನಗರವು ಹಿಂದೂ-ಮುಸ್ಲಿಂ ಐಕ್ಯತೆಯ ಸಂದೇಶವನ್ನು ನೀಡುವ ನಗರವಾಗಿದೆ. ಅಮ್ರೋಹ ನಿವಾಸಿ ವಾಸಿಂ ಬೇಗ್ ಟೋಪಿಗಳನ್ನು ತಯಾರಿಸುವುದನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ. 


ಇದನ್ನೂ ಓದಿ: ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗಿಯಾಗುವ ಕುರಿತು ಮಹತ್ವದ ನಿರ್ಧಾರ ಪ್ರಕಟಿಸಿದ ಖರ್ಗೆ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.