ನವದೆಹಲಿ: ಮಾನವೀಯ ಅಗತ್ಯಗಳು ವಾಣಿಜ್ಯ ಲಾಭಗಳನ್ನು ಮೀರಿಸುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೋವಿನ್ ವೇದಿಕೆಯನ್ನು ಇತರ ರಾಷ್ಟ್ರಗಳೊಂದಿಗೆ ಉಚಿತವಾಗಿ ಹಂಚಿಕೊಳ್ಳಲು ಮುಂದಾಗಿದ್ದಾರೆ.


COMMERCIAL BREAK
SCROLL TO CONTINUE READING

ಸದ್ಯ ನಡೆಯುತ್ತಿರುವ ಜಿ 20 ಹಣಕಾಸು ಮಂತ್ರಿಗಳು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್ಸ್ ಸಭೆಯ ಎರಡನೇ ದಿನದಂದು ಭಾಗವಹಿಸಿದ ನಿರ್ಮಲಾ ಸೀತಾರಾಮನ್ (Nirmala Sitharaman) ಸಾಂಕ್ರಾಮಿಕ ಸಮಯದಲ್ಲಿ ತಂತ್ರಜ್ಞಾನವನ್ನು ಸಮಗ್ರ ಸೇವಾ ವಿತರಣೆಯೊಂದಿಗೆ ಸಂಯೋಜಿಸುವಲ್ಲಿ ಭಾರತದ ಯಶಸ್ವಿ ಅನುಭವವನ್ನು ಹಂಚಿಕೊಂಡಿದ್ದಾರೆ ಎಂದು ಹಣಕಾಸು ಸಚಿವಾಲಯವು ಟ್ವೀಟ್ ಸರಣಿಯಲ್ಲಿ ತಿಳಿಸಿದೆ.


ಕೊರೋನಾದಿಂದ ಕುಂಠಿತಗೊಂಡ ವಲಯಗಳಿಗೆ ಕೇಂದ್ರದಿಂದ 1.1 ಲಕ್ಷ ಸಾಲದ ನೆರವು


"ನಮ್ಮ ವ್ಯಾಕ್ಸಿನೇಷನ್‌ನ ವ್ಯಾಪ್ತಿ ಮತ್ತು ಈ ವ್ಯಾಪ್ತಿಯನ್ನು ಕೋವಿನ್ ಅಪ್ಲಿಕೇಶನ್ ಹೇಗೆ ಸಮರ್ಥವಾಗಿ ಬೆಂಬಲಿಸಿದೆ ಎಂದು ನಿರ್ಮಲಾ ಸೀತಾರಾಮನ್ ಹಂಚಿಕೊಂಡಿದ್ದಾರೆ ಮತ್ತು ಮಾನವೀಯ ಅಗತ್ಯತೆಗಳು ವಾಣಿಜ್ಯ ಪ್ರಯೋಜನಗಳನ್ನು ಮೀರಿಸುತ್ತದೆ ಎಂಬ ನಮ್ಮ ದೃಢವಾದ ನಂಬಿಕೆಯಿಂದಾಗಿ ಈಗ ಭಾರತವು ಈ ವೇದಿಕೆಯನ್ನು ಎಲ್ಲಾ ದೇಶಗಳಿಗೆ ಮುಕ್ತವಾಗಿ ಲಭ್ಯವಾಗಿಸಿದೆ" ಎಂದು ಟ್ವೀಟ್ ತಿಳಿಸಿದೆ.


ಸಭೆಯಲ್ಲಿ, ಹಣಕಾಸು ಮಂತ್ರಿಗಳ ಚರ್ಚೆಗಳು ಆರ್ಥಿಕ ಚೇತರಿಕೆ, ಸುಸ್ಥಿರ ಹಣಕಾಸು ಮತ್ತು ಅಂತರರಾಷ್ಟ್ರೀಯ ತೆರಿಗೆಗಳ ನೀತಿಗಳ ಮೇಲೆ ಕೇಂದ್ರೀಕರಿಸಲ್ಪಟ್ಟಿದ್ದವು.


ಇದನ್ನೂ ಓದಿ: GST Council Meeting 2021: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ 6 ಪ್ರಮುಖ ಘೋಷಣೆಗಳು ಇಲ್ಲಿವೆ


"ಚೇತರಿಕೆ ಅಧಿವೇಶನದ ನೀತಿಗಳಲ್ಲಿ, ಎಫ್‌ಎಂ ಆರ್ಥಿಕ ಚೇತರಿಕೆಯ 3 ವೇಗವರ್ಧಕಗಳ ಬಗ್ಗೆ ಚರ್ಚಿಸಿದೆ- ಡಿಜಿಟಲೀಕರಣ, ಹವಾಮಾನ ಕ್ರಿಯೆ ಮತ್ತು ಸುಸ್ಥಿರ ಮೂಲಸೌಕರ್ಯ; ಸಾಂಕ್ರಾಮಿಕ ಸಮಯದಲ್ಲಿ ಅಂತರ್ಗತ ಸೇವಾ ವಿತರಣೆಯೊಂದಿಗೆ ತಂತ್ರಜ್ಞಾನವನ್ನು ಸಂಯೋಜಿಸುವಲ್ಲಿ ಭಾರತದ ಯಶಸ್ವಿ ಅನುಭವವನ್ನು ಹಂಚಿಕೊಂಡಿದೆ" ಎಂದು ಟ್ವೀಟ್ ನಲ್ಲಿ ಉಲ್ಲೇಖಿಸಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.