ನವದೆಹಲಿ: ಗೊಂದಲ ಪರಿಸ್ಥಿತಿಗಳ ನಡುವೆ, ಸಿಬಿಎಸ್ಇ 10ನೇ ತರಗತಿಯ ಗಣಿತಶಾಸ್ತ್ರದ ಮರು ಪರೀಕ್ಷೆ ನಡೆಸುವುದಿಲ್ಲ ಎಂದು ನಿರ್ಧರಿಸಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಮೂಲಗಳು ತಿಳಿಸಿವೆ. ಇದಕ್ಕೂ ಮೊದಲು, ಮತ್ತೆ ಜುಲೈನಲ್ಲಿ ನಡೆಯುವ ಪರೀಕ್ಷೆ ನಡೆಯಲಿದೆ, ಅಗತ್ಯವಿದ್ದರೆ ಹರಿಯಾಣ ಮತ್ತು ದೆಹಲಿಯ ವಿದ್ಯಾರ್ಥಿಗಳು ಆ ಪರೀಕ್ಷೆಯಲ್ಲಿ ಕುಳಿತುಕೊಳ್ಳಬೇಕು ಎಂದು ಬೋರ್ಡ್ ಹೇಳಿದೆ.


COMMERCIAL BREAK
SCROLL TO CONTINUE READING

ಸುದ್ದಿ ಸಂಸ್ಥೆ ಡಿಎನ್ಎ ಉಲ್ಲೇಖಿಸಿರುವ ಪ್ರಕಾರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಮೂಲಗಳು, ವಿಶ್ಲೇಷಣೆ ನಂತರ ಸಿಬಿಎಸ್ಇ ಯಾವುದೇ ಮರುಪರೀಕ್ಷೆಯನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಕಂಡುಕೊಂಡಿದೆ. ಇದು 16 ಲಕ್ಷಕ್ಕಿಂತಲೂ ಹೆಚ್ಚಿನ 10ನೇ ತರಗತಿ ವಿದ್ಯಾರ್ಥಿಗಳಿಗೆ ಪರಿಹಾರದ ಸುದ್ದಿಯಾಗಿದೆ. ಈ ನಿಟ್ಟಿನಲ್ಲಿ, ಸಚಿವಾಲಯವು ಶೀಘ್ರದಲ್ಲೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ.


ಇದಕ್ಕೂ ಮೊದಲು ಸೋಮವಾರ,ಸಿಬಿಎಸ್ಇ ವಿವಾದದ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ 10 ನೇ ಗಣಿತ ವಿಷಯವನ್ನು ಪುನಃ ಪರೀಕ್ಷಿಸಲು ಬಯಸಿದರೆ, ಸಿಬಿಎಸ್ಇಯ ಯೋಜನೆ ಏನು? ಎಂದು ಮುಖ್ಯ ನ್ಯಾಯಾಧೀಶ ಗೀತಾ ಮಿತ್ತಲ್ ಮತ್ತು ಜಸ್ಟಿಸ್ ಸಿ. ಹರಿಶಂಕರ್ ಅವರ ಪೀಠವು ಸಿಬಿಎಸ್ಇಗೆ 10 ನೇ ಗಣಿತದ ಮರು-ಪರೀಕ್ಷೆಯನ್ನು ನಡೆಸಲು ಯೋಜನೆಯನ್ನು ಅರಿತುಕೊಡಲು ಕೇಳಿದೆ. ತಾಜಾ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸುವ ಮೊದಲು ಇದು ಸೋರಿಕೆಗಳ ತೀವ್ರತೆ ಮತ್ತು ಹರಡಿಕೆಯನ್ನು ಮೌಲ್ಯಮಾಪನ ಮಾಡುತ್ತಿದೆ ಎಂದು ಸಿಬಿಎಸ್ಇ ನ್ಯಾಯಾಲಯಕ್ಕೆ ತಿಳಿಸಿದೆ.


CBSE 12ನೇ ತರಗತಿಯ ಅರ್ಥಶಾಸ್ತ್ರ ಪರೀಕ್ಷೆ ಮತ್ತು 10ನೇ ತರಗತಿಯ ಗಣಿತಶಾಸ್ತ್ರದ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಸಿಬಿಎಸ್ಇ ಮತ್ತು ಕೇಂದ್ರವನ್ನು ನ್ಯಾಯಾಲಯ ಪ್ರಶ್ನಿಸಿದೆ. ಸಂಕ್ಷಿಪ್ತ ವಿಚಾರಣೆಯ ಸಂದರ್ಭದಲ್ಲಿ, ಸಿಬಿಎಸ್ಇಗೆ ಮರು ಪರೀಕ್ಷೆಗೆ ಜುಲೈ ವರೆಗೆ ಅವರು ಹೇಗೆ ನಿರೀಕ್ಷಿಸಬಹುದು. ಆ ಸಮಯದಲ್ಲಿ ವಿದ್ಯಾರ್ಥಿಗಳು ಲಾಕ್ ಆಗಬಹುದು ಎಂದು ತಿಳಿಸಿರುವ ಪೀಠವು, ಇದು ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷವನ್ನು ನಾಶಮಾಡುವುದು ಮಾತ್ರವಲ್ಲದೆ, ಅವರ ತಲೆಯ ಮೇಲೆ ಕತ್ತಿಯಂತೆ ತೂಗುತ್ತಿರುತ್ತದೆ ಎಂದು  ತಿಳಿಸಿದೆ.


ಸಿಬಿಎಸ್ಇ ತಾನು 10 ನೇ ತರಗತಿಯ ಗಣಿತ ಮರು ಪರೀಕ್ಷೆ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲವೆಂದು ತಿಳಿಸಿದ್ದರೂ, ದೇಶಾದ್ಯಂತ ದೆಹಲಿ ಮತ್ತು ಹರಿಯಾಣಗಳಲ್ಲಿ ಮಾತ್ರ ಮರು ಪರೀಕ್ಷೆ ನಡೆಯಲಿದೆ ಎಂದು ಅಂದಾಜು ಮಾಡುತ್ತಿದ್ದಾರೆ. ವಾದಗಳನ್ನು ಕೇಳಿದ ನಂತರ ನ್ಯಾಯಾಲಯ ಸಿಬಿಎಸ್ಇಯನ್ನು ಈ ನಿಟ್ಟಿನಲ್ಲಿ ತೀರ್ಮಾನಿಸಲು ಏಪ್ರಿಲ್ 16 ರವರೆಗೆ ಗಡುವು ನೀಡಿದೆ. ಈ ತೀರ್ಮಾನ 10 ನೇ ತರಗತಿ ವಿದ್ಯಾರ್ಥಿಗಳಿಗೆ ಕೂಡ ಅತ್ಯಗತ್ಯವಾಗಿದೆ ಎಂದು ಪೀಠ ತಿಳಿಸಿದೆ. ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ವಿದ್ಯಾರ್ಥಿಗಳು 11ನೇ ತರಗತಿಯಲ್ಲಿ ಯಾವ ವಿಷಯ ಅಧ್ಯಯನ ಮಾಡಬೇಕೆಂದು ನಿರ್ಧರಿಸುತ್ತಾರೆ. ಹಾಗಾಗಿ ಏಪ್ರಿಲ್ 16ರ ವರೆಗೆ ಈ ಬಗ್ಗೆ ತೀರ್ಮಾನ ಕೈಗೊಳ್ಳಿ ಎಂದು ಕೋರ್ಟ್ ತಿಳಿಸಿದೆ.