ಪಾಟ್ನಾ: ಬಿಹಾರ ಉಪಮುಖ್ಯಮಂತ್ರಿ ಮತ್ತು ಹಿರಿಯ ಬಿಜೆಪಿ ನಾಯಕ ಸುಶೀಲ್ ಮೋದಿ ಅವರು ರಾಷ್ಟ್ರೀಯ ಡೆಮಾಕ್ರಟಿಕ್ ಅಲೈಯನ್ಸ್ (ಎನ್ಡಿಎ) ಯಲ್ಲಿ ಯಾವುದೇ ಭಿನ್ನಾಭಿಪ್ರಾಯಗಳನ್ನು ಅವರು ನಿರಾಕರಿಸಿದ್ದಾರೆ. ಅಲ್ಲದೆ ನಮ್ಮಲ್ಲಿ ಯಾವುದೇ ವಿವಾದಗಳಿಲ್ಲ ಎಂದು ಅವರು ಹೇಳಿದರು.  


COMMERCIAL BREAK
SCROLL TO CONTINUE READING

"ಯಾರು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ, ಯಾರು ಸ್ಪರ್ಧಿಸುವುದಿಲ್ಲ ಎಂದು ಎಲ್ಲಾ ಕ್ಷೇತ್ರದ ನಾಯಕರು ಸಭೆ ಸೇರಿದ ದಿನದಂದು ಈ ಎಲ್ಲಾ ವಿಷಯಗಳನ್ನು ಪ್ರಕಟಿಸಲಾಗುವುದು" ಎಂದು ಸುಶೀಲ್ ಮೋದಿ ಹೇಳಿದರು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಬಗ್ಗೆ ಮಾತನಾಡಿರುವ ಅವರು, ದೇಶಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಆದರೆ ಬಿಹಾರಕ್ಕೆ ನಿತೀಶ್ ಕುಮಾರ್ ಎಂದು ಹೇಳಿದ್ದಾರೆ. ಆದ್ದರಿಂದ ಬಿಹಾರದಲ್ಲಿ ಪ್ರಧಾನಿ ಮೋದಿ ಹೆಸರು ಹಾಗೂ ನಿತೀಶ್ ಕುಮಾರ್ ಅವರ ಕೆಲಸದ ಹೆಸರಿನಲ್ಲಿ ಮತಗಳು ಸಿಗಲಿವೆ. ಇದರಲ್ಲಿ ವಿವಾದ ಎಲ್ಲಿದೆ ಎಂದು ಕೇಳಿದರು?



ಇದಕ್ಕೂ ಮೊದಲು ಭಾನುವಾರ ಟ್ವೀಟ್ ಮಾಡಿದ್ದ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್,  ಬಿಹಾರದಲ್ಲಿ ನರೇಂದ್ರ ಮೋದಿಗಿಂತ ನಿತೀಶ್ ಕುಮಾರ್ ದೊಡ್ಡ ಮತ್ತು ಪ್ರಭಾವಿ ನಾಯಕರಾಗಿದ್ದಾರೆಯೇ ಎಂದು ಸುಶೀಲ್ ಮೋದಿ ಅವರನ್ನು ಪ್ರಶ್ನಿಸಿದ್ದರು.



ಅದೇ ವೇಳೆ ಜೆಡಿಯು ನಾಯಕ ಪವನ್ ವರ್ಮಾ ಅವರು ನಮ್ಮ ನಡುವೆ ಇನ್ನೂ ಯಾವುದೇ ರೀತಿಯ ಔಪಚಾರಿಕ ಮಾತುಕತೆ ಆಗಿಲ್ಲ ಎಂದು ಹೇಳಿದರು. ಒಕ್ಕೂಟದ ಅತಿದೊಡ್ಡ ಪಕ್ಷ ಬಿಜೆಪಿಯಾಗಿದ್ದು, ಪರಸ್ಪರ ಸಹಕಾರ ಮತ್ತು ಸನ್ನಿವೇಶದ ಪರಿಸ್ಥಿತಿಯನ್ನು ಪರಿಗಣಿಸಿ ಎಲ್ಲಾ ಅಂಗ ಪಕ್ಷಗಳನ್ನು ಎದುರಿಸಲು ಅವರು ಉಪಕ್ರಮವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ನಾವು ಬಯಸುತ್ತೇವೆ. ಚುನಾವಣೆಗಳನ್ನು ಪರಿಗಣಿಸಿ, ಬಿಹಾರದಲ್ಲಿ ಒಕ್ಕೂಟದ ಕುರಿತು ಚರ್ಚೆ ನಡೆಯಲಿದೆ ಎಂದು ಅವರು ಹೇಳಿದರು. ನಮ್ಮ ಪ್ರಕಾರ, ಜೆಡಿಯು ಬಿಹಾರದಲ್ಲಿ ಅತಿದೊಡ್ಡ ಮಿತ್ರ ಪಕ್ಷವಾಗಿದೆ ಎಂದು ಹೇಳಿದರು.



ಮೈತ್ರಿ ನಡುವಿನ ಹೊಂದಾಣಿಕೆಯು ಇನ್ನೂ ವೇಗವಾಗಿ ಮಾರ್ಪಟ್ಟಿದೆ. ಜೂನ್ 7 ರಂದು ಪಾಟ್ನಾದಲ್ಲಿ ಬಿಜೆಪಿ, ಜೆಡಿಯು, ಲೋಕ ಜನಶಕ್ತಿ ಪಾರ್ಟಿ (LJP) ಮತ್ತು ರಾಷ್ಟ್ರೀಯ ಲೋಕ ಸಮಾತಾ ಪಕ್ಷ (RLSP)ದ ಹಲವು ನಾಯಕರು ಸೇರಿದ್ದಾರೆ.


ಔತಣಕೂಟದಲ್ಲಿ, ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ರಾಷ್ಟ್ರೀಯ ಅಧ್ಯಕ್ಷ ನಿತೀಶ್ ಕುಮಾರ್ ಮತ್ತು ಬಿಹಾರ ಬಿಜೆಪಿ ಉಸ್ತುವಾರಿ ಭೂಪೇಂದ್ರ ಯಾದವ್ ಸೇರಿದ್ದಾರೆ. ಔತಣಕೂಟದಲ್ಲಿ, ಎನ್ಡಿಎ ಅಂಗಸಂಸ್ಥೆಗಳ ನಡುವೆ ಉತ್ತಮ ಹೊಂದಾಣಿಕೆಯ ಕುರಿತು ಚರ್ಚೆ ನಡೆಯಲಿದೆ.