ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಹೊಂದಿದ ಅತಿಯಾದ ಆತ್ಮವಿಶ್ವಾಸವೇ ಪಕ್ಷ ಸೋಲಲು ಕಾರಣ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅಭಿಪ್ರಾಯಪಟ್ಟರು


COMMERCIAL BREAK
SCROLL TO CONTINUE READING

 ಝೀ ನ್ಯೂಸ್ ನ ಕಾಂಕ್ಲೇವ್ ನಲ್ಲಿ ವಿಡಿಯೋ ಸಂವಾದದ ಮೂಲಕ  ಉತ್ತರಪ್ರದೇಶ ಮತ್ತು ಬಿಹಾರ ಲೋಕಸಭಾ ಚುನಾವಣೆಯ ಫಲಿತಾಂಶದ ಕುರಿತಾಗಿ ಮಾತನಾಡಿದ ಆದಿತ್ಯನಾಥ್ " ನಮ್ಮಲ್ಲಿ ಇದ್ದ ಅತಿಯಾದ ಗೆಲ್ಲುವ ಆತ್ಮವಿಶ್ವಾಸವೇ ಚುನಾವಣೆಯಲ್ಲಿ ಸೋಲಲು ಕಾರಣ"ವೆಂದು ತಿಳಿಸಿದರು."ಅಲ್ಲದೆ ಈ ಉಪಚುನಾವಣೆಯಲ್ಲಿ ಅಧಿಕ ಜನರು ಮತಹಾಕದೆ ಇರುವುದು ಕೂಡ ಒಂದು ಕಾರಣ" ಎಂದರು.


ಇನ್ನೂ ಮುಂದುವರೆದು ಮಾತನಾಡಿದ ಅವರು ಉಪಚುನಾವಣೆಗಳು ಸ್ಥಳೀಯ ವಿಷಯಗಳ ಆಧಾರದ ಮೇಲೆ ನಡೆಯುತ್ತವೆ. 2019 ರ ಚುನಾವಣೆಗೆ ಇದು ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಅವರು ತಿಳಿಸಿದರು.