ಮುಂಬೈ: ದೇಶದಲ್ಲೇ ಪ್ಯಾಸೆಂಜರ್ ವಿಮಾನಗಳ ತಯಾರಿಕೆಗೆ ಕರಡು ತಯಾರಿಸಲು ಸರಕಾರ ಕಾರ್ಯ ನಿರ್ವಹಿಸುತ್ತಿದೆ. ಇದಲ್ಲದೆ, ದೇಶದೊಳಗೆ ತನ್ನ ಹಣಕಾಸು ವ್ಯವಸ್ಥೆಯನ್ನು ಆಯೋಜಿಸುತ್ತಿದೆ ಎಂದು ನಾಗರೀಕ ವಿಮಾನಯಾನ ಸಚಿವ ಸುರೇಶ್ ಪ್ರಭು ಮಂಗಳವಾರ ಹೇಳಿದರು. 2019 ಗ್ಲೋಬಲ್ ಏವಿಯೇಷನ್ ​​ಶೃಂಗಸಭೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸುರೇಶ್ ಪ್ರಭು, ಭಾರತದಲ್ಲಿ ವಿಮಾನ, ನಿರ್ವಹಣೆ, ದುರಸ್ತಿ ಮತ್ತು ಮೂಲಭೂತ ಬದಲಾವಣೆಯನ್ನು (ಎಂಆರ್ಒ) ಮಾಡಬೇಕೆಂದು ಸರ್ಕಾರ ಬಯಸಿದೆ ಎಂದು ಹೇಳಿದರು. ಈ ಕೆಲಸಕ್ಕಾಗಿ ನಾವು ಅನ್ಯ ದೇಶವನ್ನು ಅವಲಂಬಿಸಿದರೆ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಲಿದೆ. ಅಲ್ಲದೆ ಅದು ನಿರುದ್ಯೋಗ ಸಮಸ್ಯೆಯನ್ನೂ ಹೆಚ್ಚಿಸುತ್ತದೆ ಎಂದು ಎಚ್ಚರಿಸಿದ್ದಾರೆ. ನಾಗರಿಕ ವಿಮಾನಯಾನ ಸಚಿವಾಲಯ, ಇಂಡಿಯನ್ ಏರ್ ಫೋರ್ಸ್ ಅಥಾರಿಟಿ ಮತ್ತು ಇಂಡಸ್ಟ್ರಿ ಬೋರ್ಡ್ FICCI ಯಿಂದ ಈ ಶೃಂಗವನ್ನು ಜಂಟಿಯಾಗಿ ಆಯೋಜಿಸಲಾಗಿದೆ.


COMMERCIAL BREAK
SCROLL TO CONTINUE READING

"ನಾವು ಭಾರತದಲ್ಲಿ ವಿಮಾನ ನಿರ್ಮಾಣಕ್ಕಾಗಿ ಒಂದು ನೀಲನಕ್ಷೆಯನ್ನು ಪ್ರಸ್ತುತಪಡಿಸುತ್ತೇವೆ." ರಾಷ್ಟ್ರದ ವಾಯು ಪ್ರಯಾಣದ ಬೇಡಿಕೆಯನ್ನು ಪೂರೈಸಲು 2,300 ಹೊಸ ವಿಮಾನಗಳು ಅಗತ್ಯವಿದೆ. ಇದಕ್ಕಾಗಿ ನಾವು ಪ್ರಪಂಚದ ಉನ್ನತ ವಿಮಾನಯಾನ ಸಂಸ್ಥೆಗಳೊಂದಿಗೆ ಕೈ ಜೋಡಿಸಬಹುದು. ಆದರೆ ದೇಶೀಯ ಕಂಪೆನಿಗಳ ವಿಮಾನಯಾನವನ್ನು ಹಣಕಾಸು ನೆರವು ಮಾಡಲು ಸರ್ಕಾರ ಬಯಸಿದೆ ಎಂದು ವಿಮಾನಯಾನ ಸಚಿವ ಎಂದು ಸುರೇಶ್ ಪ್ರಭು ಹೇಳಿದರು. 


"ನಾವು ಈಗಾಗಲೇ ವಿಮಾನದ ಹಣಕಾಸು ನಿರ್ವಹಣೆ ಮಾಡುತ್ತಿದ್ದೇವೆ ಮತ್ತು ಭಾರತದಲ್ಲೇ ಸೌಲಭ್ಯ ಲಭ್ಯವಿರುವಾಗ ಏಕೆ ಬಾಹ್ಯ ಕಂಪೆನಿಗಳ ಮೊರೆಹೋಗಬೇಕು ಎಂದು ಪರಿಗಣಿಸುತ್ತಿದ್ದೇವೆ" ಎಂದು ಅವರು ತಿಳಿಸಿದರು.


ಭಾರತದಲ್ಲಿನ ವಾಯುಯಾನ ಕ್ಷೇತ್ರದ ಅಭಿವೃದ್ಧಿ ಬಹಳ ವೇಗವಾಗಿ ಹೋಗುತ್ತದೆ. ಮುಂದಿನ ಎರಡು ದಶಕಗಳಲ್ಲಿ ಭಾರತದಲ್ಲಿ ಏರ್ ಪ್ರಯಾಣಿಕರ ಸಂಚಾರ 1.12 ಶತಕೋಟಿಯನ್ನು ದಾಟಲಿದೆ ಎಂದು ವರದಿಯೊಂದು ತಿಳಿಸಿದೆ. ಸಿವಿಲ್ ಏವಿಯೇಷನ್ ಸಚಿವಾಲಯದ ಮಾಹಿತಿಯ ಪ್ರಕಾರ ಪ್ರಸ್ತುತ ಪ್ರಯಾಣಿಕರ ಸಂಚಾರವು 187 ಮಿಲಿಯನ್ಗಳಷ್ಟಿದೆ.


ಮಂಗಳವಾರ, ಜಾಗತಿಕ ಏವಿಯೇಷನ್ ಶೃಂಗಸಭೆಯಲ್ಲಿ ಈ ವಲಯ ಬೆಳವಣಿಗೆಯ ವರದಿಯನ್ನು ನೀಡಲಾಯಿತು. ವಿಮಾನಯಾನ ಸಚಿವ ಜಯಂತ್ ಸಿನ್ಹಾ ಅವರು ನಾಲ್ಕು ವರ್ಷಗಳ ಹಿಂದೆ ಭಾರತದಲ್ಲಿ ಒಟ್ಟು 400 ವಿಮಾನಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಿದರು. ಪ್ರಸ್ತುತ ದೇಶದಲ್ಲಿ 622 ವಿಮಾನಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ. 2040 ರ ಹೊತ್ತಿಗೆ ಈ ಸಂಖ್ಯೆ 2359 ಎಂದು ನಿರೀಕ್ಷಿಸಲಾಗಿದೆ. ಅದೇ ರೀತಿಯಾಗಿ ದೇಶದಲ್ಲಿ 99 ವಿಮಾನ ನಿಲ್ದಾಣಗಳಿವೆ. 2040 ರ ಹೊತ್ತಿಗೆ ಅದರ ಸಂಖ್ಯೆಯು 200 ಕ್ಕೂ ಹೆಚ್ಚಾಗುತ್ತದೆ ಎಂದು ವಿವರಿಸಿದರು.