ನವದೆಹಲಿ: ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶಕ್ಕೆ ಪ್ರತಿಕ್ರಿಯೆ ನೀಡಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ದೇಶದ ಜನರೇ ಯಾವಾಗಲೂ ಪ್ರಜಾಪ್ರಭುತ್ವದ ಮ್ಯಾನ್ ಆಫ್ ದಿ ಮ್ಯಾಚ್ ಆಗಿರುತ್ತಾರೆ ಎಂದು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಮಮತಾ ಬ್ಯಾನರ್ಜೀ "ಬಿಜೆಪಿ ಎಲ್ಲ ರಾಜ್ಯಗಳಲ್ಲಿ ಇಲ್ಲ ಎನ್ನುವುದನ್ನು ಸೆಮಿಫೈನಲ್ ಸಾಬಿತುಪಡಿಸಿದೆ.ಇದು 2019ರ ಫೈನಲ್ ಪಂದ್ಯಕ್ಕೆ  ನಿಜವಾದ ಪ್ರಜಾಸತ್ತಾತ್ಮಕ ದಿಕ್ಸೂಚಿಯನ್ನು ನೀಡಿದೆ.ಅಂತಿಮವಾಗಿ ಪ್ರಜಾಪ್ರಭುತ್ವದಲ್ಲಿ ಯಾವಾಗಲೂ ಜನರೇ ಮ್ಯಾನ್ ಆಫ್ ದಿ ಮ್ಯಾಚ್.ಗೆಲುವು ಸಾಧಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.



"ಜನರು ಬಿಜೆಪಿ ವಿರುದ್ದ ಮತವನ್ನು ಹಾಕಿದ್ದಾರೆ, ಇದು ಈ ದೇಶದ ಜನರಿಗೆ ಸಿಕ್ಕಂತ ಗೆಲುವು.ಇದು ಪ್ರಜಾಪ್ರಭುತ್ವಕ್ಕೆ ಸಂದ ಗೆಲುವು, ಅನ್ಯಾಯಕ್ಕೆ, ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದ್ದಕ್ಕೆ, ರೈತರು,ಯುವಕರು, ದಲಿತರು, ಹಿಂದುಳಿದವರಿಗೆ ಯಾವುದೇ ಕೆಲಸವನ್ನು ನೀಡದೆ ಇರುವುದಕ್ಕೆ ಸಿಕ್ಕಂತ ಗೆಲುವು" ಎಂದು ಹೇಳಿದ್ದಾರೆ.