ನವದೆಹಲಿ: ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಶುಕ್ರವಾರ ಮಧ್ಯಪ್ರದೇಶದ ಭೋಪಾಲ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಟೀಕಾ ಪ್ರಹಾರ ನಡೆಸಿ ಅವರನ್ನು ಉದ್ಯಮಿಗಳ ಕೈಗೊಂಬೆ ಎಂದು ಕಿಡಿಕಾರಿದ್ದಾರೆ.


COMMERCIAL BREAK
SCROLL TO CONTINUE READING

ಎಎನ್ಐಗೆ ಜೊತೆಗೆ ಮಾತನಾಡಿದ ಸಿಧು" ಪ್ರಧಾನಿ ದೊಡ್ಡ ವ್ಯಾಪಾರ ಗುಂಪುಗಳು ಮತ್ತು ಕೈಗಾರಿಕೋದ್ಯಮಿಗಳಿಗೆ ಕೈಗೊಂಬೆ ಎಂದು ಆರೋಪಿಸಿದರು."2014 ರಲ್ಲಿನ ಮೋದಿ ಅಲೆ ಈಗ ಜನರಿಗೆ ಸಮಸ್ಯೆಯನ್ನುಂಟು ಮಾಡಿದೆ.ಅದು ಈಗ ವಿಷವಾಗಿ ಪರಿವರ್ತನೆಯಾಗಿದೆ.ಇದು ಕೈಗಾರಿಕೋದ್ಯಮಿಗಳ ಕೈಗೊಂಬೆ.ಇದು 15-16 ಕೋಟಿ ಜನರಿಗೆ ವರವಾಗಿದೆ ಎಂದು ಸಿಧು ಹೇಳಿದರು.


ಮಧ್ಯ ಪ್ರದೇಶದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ ಸಿಧು ಬಿಜೆಪಿ ಸರ್ಕಾರದ ವಿರುದ್ದ ಕಿಡಿಕಾರಿದರು.ಸತತ ನಾಲ್ಕನೇ  ಬಾರಿಗೆ ಅಧಿಕಾರಕ್ಕೆರುವ ಕನಸು ಕಾಣುತ್ತಿರುವ ಬಿಜೆಪಿಗೆ ಈ ಬಾರಿ ಪ್ರತಿಪಕ್ಷ ಕಾಂಗ್ರೆಸ್ ನಿಂದ ತೀವ್ರ ಪೈಪೋಟಿ ಕಂಡು ಬರುತ್ತಿದೆ.ಶಿವರಾಜ್ ಸಿಂಗ್ ನೇತೃತ್ವದ ಸರ್ಕಾರ ಈ ಬಾರಿ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ.