ನವದೆಹಲಿ: ಕೇಂದ್ರದಲ್ಲಿ 'ಫಿರ್ ಏಕ್ ಬಾರ್ ಮೋದಿ ಸರ್ಕಾರ್' ರಚನೆಯಾಗುವುದು ನಿಶ್ಚಿತವಾಗಿದೆ. ಲೋಕಸಭಾ ಚುನಾವಣೆ 2019ರ ಪ್ರಚಂಡ ವಿಜಯದ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಕ್ಷದ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರ ನಿವಾಸಕ್ಕೆ ಭೇಟಿ ನೀಡಿದರು. 


COMMERCIAL BREAK
SCROLL TO CONTINUE READING


ಮಾಹಿತಿಯ ಪ್ರಕಾರ, ಇಬ್ಬರು ನಾಯಕರು ಈ ಚುನಾವಣೆಯ ಈ ಬೃಹತ್ ವಿಜಯದ ಸಂತಸಕ್ಕಾಗಿ ಅಡ್ವಾಣಿ ಅವರನ್ನು ಅಭಿನಂದಿಸಿ, ಆಶೀರ್ವಾದ ಪಡೆದುಕೊಳ್ಳಲು ದೆಹಲಿಯ ಅವರ ನಿವಾಸ ತಲುಪಿದ್ದಾರೆ.


ಮಾಹಿತಿ ಪ್ರಕಾರ, ಅವರು ಲಾಲ್ ಕೃಷ್ಣ ಅಡ್ವಾಣಿ ಭೇಟಿಯಾದ ನಂತರ ಇಂದು ಮುರಳಿ ಮನೋಹರ್ ಜೋಶಿ ಅವರನ್ನೂ ಭೇಟಿಯಾಗಲಿದ್ದಾರೆ. ಲಾಲ್ ಕೃಷ್ಣ ಅಡ್ವಾಣಿಯವರನ್ನು ಭೇಟಿಯಾದ ನಂತರ, ಟ್ವಿಟ್ಟರ್ ನಲ್ಲಿ ಪ್ರಧಾನಿ ಮೋದಿ ಅವರು ಫೋಟೋ ಹಂಚಿಕೊಂಡಿದ್ದಾರೆ.