ನವದೆಹಲಿ: ಕತುವಾ ಮತ್ತು ಉನ್ನಾವೋ ಘಟನೆಗಳ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ತಾಳಿರುವ 'ಮೌನ' ನಿಲುವಿಗೆ ಕಿಡಿಕಾರಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಈ ಹಿಂದೆ ನನಗೆ ನೀಡಿದ್ದ ಸಲಹೆಯನ್ನು ಸ್ವತಃ ಮೋದಿಯವರು ಅಳವಡಿಸಿಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. 


COMMERCIAL BREAK
SCROLL TO CONTINUE READING

ಇಂಡಿಯನ್ ಎಕ್ಷಪ್ರೆಸ್ ಪತ್ರಿಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು ಈ ಹಿಂದೆ 2012 ರ ವೇಳೆ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ  ತಮಗೆ ನರೇಂದ್ರ ಮೋದಿ ನೀಡಿದ್ದ ಸಲಹೆಯನ್ನು ಈಗ ಸ್ವತಃ ಅವರೇ ಅಳವಡಿಸಿಕೊಳ್ಳಬೇಕಾಗಿದೆ ಎಂದರು.


ಸಂದರ್ಶನದಲ್ಲಿ ಮಾತನಾಡಿದ ಅವರು "ಪ್ರಧಾನಮಂತ್ರಿಗಳು ನನಗೆ ನೀಡಿದ್ದ ತಮ್ಮ ಸಲಹೆಯನ್ನು ಅಳವಡಿಸಿಕೊಳ್ಳಬೇಕಾಗಿದೆ ಮತ್ತು ಅಂತಹ ಘಟನೆಗಳ ಕುರಿತಾಗಿ ಮಾತನಾಡಬೇಕಾಗಿದೆ. ನನಗೆ ಪತ್ರಕರ್ತರ ಮೂಲಕ ಅವರು ನಾನು ಮಾತನಾಡದೆ ಇರುವುದರ ಬಗ್ಗೆ ಟೀಕಿಸಿದ್ದರ ಗೊತ್ತಾಗಿತ್ತು,ಈಗ ಅವರು ನನಗೆ ನೀಡಿರುವ ಸಲಹೆಯನ್ನು ಸ್ವತಃ ಅವರೇ ಪಾಲಿಸಬೇಕಾಗಿದೆ ಎಂದು ವ್ಯಂಗವಾಡಿದರು.