ನವದೆಹಲಿ: ಉತ್ತರ ಭಾರತದ ಅನೇಕ ಭಾಗಗಳಲ್ಲಿ ತೀವ್ರ ಶೀತ ಉಂಟಾಗುತ್ತಿದೆ ಮತ್ತು ಉತ್ತರ ರಾಜಸ್ಥಾನ ಮತ್ತು ದೆಹಲಿ ಸೇರಿದಂತೆ ಹಲವು ಭಾಗಗಳಲ್ಲಿ ಶೀತಲ ಅಲೆ ಮುಂದುವರೆದಿದೆ. ಜನವರಿ 27 ರವರೆಗೆ ಅನೇಕ ರಾಜ್ಯಗಳಲ್ಲಿ ದಟ್ಟವಾದ ಮಂಜಿನ ಸಾಧ್ಯತೆಯಿದೆ ಮತ್ತು ಇದರೊಂದಿಗೆ ತಾಪಮಾನವೂ ಕುಸಿಯಬಹುದು. ಇದಲ್ಲದೆ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶನಿವಾರ (ಜನವರಿ 23) ಕನಿಷ್ಠ 7.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದರೆ, ಭಾನುವಾರ 10.2℃ ದಾಖಲಾಗಿದೆ.


COMMERCIAL BREAK
SCROLL TO CONTINUE READING

ತಾಪಮಾನವು 4 ಡಿಗ್ರಿಗಳವರೆಗೆ ಹೋಗಬಹುದು :
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಬೆಟ್ಟಗಳಲ್ಲಿ ಭಾರೀ ಹಿಮಪಾತ (Snowfall) ವಾಗುತ್ತಿದೆ. ಈ ಕಾರಣದಿಂದಾಗಿ ಉತ್ತರ ಭಾರತದ ಬಯಲು ಪ್ರದೇಶಗಳಲ್ಲಿ ಶೀತ ಅಧಿಕವಾಗಿದೆ ಮತ್ತು ಮುಂದಿನ 2-4 ದಿನಗಳವರೆಗೆ ತಾಪಮಾನವು ನಾಲ್ಕು ಡಿಗ್ರಿಗಳಿಗೆ ಇಳಿಯಬಹುದು (ತಾಪಮಾನದಲ್ಲಿ 4 ° C ಪತನ) ಎಂದು ಹೇಳಲಾಗಿದೆ.


ಇದನ್ನೂ ಓದಿ - 


ಕೆಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ: 
ಮುಂಬರುವ 48 ಗಂಟೆಗಳಲ್ಲಿ ಕೆಲವು ರಾಜ್ಯಗಳಲ್ಲಿ ಭಾರೀ ಮಳೆ ಬೀಳಬಹುದು. ಮುಂದಿನ ಎರಡು ದಿನಗಳಲ್ಲಿ ದೆಹಲಿ (Delhi), ಪಂಜಾಬ್, ಹರಿಯಾಣ, ಚಂಡೀಗಢ ಸೇರಿದಂತೆ ಉತ್ತರ ಪ್ರದೇಶದ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿರುವ ಹವಾಮಾನ ಇಲಾಖೆ (ಐಎಂಡಿ) ಹಲವೆಡೆ ಆರೆಂಜ್ ಅಲರ್ಟ್ ಘೋಷಿಸಿದೆ.


ಗಣರಾಜ್ಯೋತ್ಸವದ ಪೆರೇಡ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ :
ಜನವರಿ 26 ರಂದು ನಡೆಯುವ ಗಣರಾಜ್ಯೋತ್ಸವದ ಪೆರೇಡ್ (Republic Day Parade) ಹವಾಮಾನದಿಂದ ಯಾವುದೇ ಅಡಚಣೆ ಉಂಟಾಗುವ ಸಾಧ್ಯತೆಯಿಲ್ಲ. ಶೀತ ಮತ್ತು ಮಧ್ಯಮ ಮಂಜು ಬೆಳಿಗ್ಗೆ ಇರುತ್ತದೆ. ಆದರೆ ಗಣರಾಜ್ಯೋತ್ಸವದ ಪರೇಡ್ ಪ್ರಾರಂಭವಾಗುವ ಹೊತ್ತಿಗೆ ಹವಾಮಾನ ಪರಿಸ್ಥಿತಿ ಸಾಮಾನ್ಯವಾಗುವ ಸಾಧ್ಯತೆಯಿದೆ. ಪಶ್ಚಿಮ ದಿಕ್ಕಿನಿಂದ ಬರುವ ಶುಷ್ಕ ಗಾಳಿಯಿಂದಾಗಿ ಬೆಳಿಗ್ಗೆ 9 ಗಂಟೆಯಿಂದ ತಾಪಮಾನವು ಹೆಚ್ಚಾಗಲು ಪ್ರಾರಂಭವಾಗುತ್ತದೆ. ಹಾಗಾಗಿ ರಾಜ್‌ಪತ್‌ನಲ್ಲಿ ಹಾಜರಿರುವ ಪ್ರೇಕ್ಷಕರಿಗೆ ಗಣರಾಜ್ಯೋತ್ಸವದ ಪೆರೇಡ್ ವೀಕ್ಷಣೆಗೆ ಯಾವುದೇ ತೊಡಕು ಉಂಟಾಗುವುದಿಲ್ಲ ಎಂದು ಹೇಳಲಾಗಿದೆ. 


ಇದನ್ನೂ ಓದಿ - Republic Day Parade : ದೆಹಲಿಯ ರಾಜಪಥದ ಪೆರಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಡಾ.‌ ರಾಜಕುಮಾರ್!


ಕಾಶ್ಮೀರದ ಪ್ರತಿಯೊಂದು ಭಾಗದಲ್ಲೂ ಭಾರಿ ಹಿಮಪಾತ :
ಹವಾಮಾನ ಇಲಾಖೆ (ಐಎಂಡಿ) ವರದಿಯ ಪ್ರಕಾರ ಶ್ರೀನಗರ ಸೇರಿದಂತೆ ಕಾಶ್ಮೀರದ ಪ್ರತಿಯೊಂದು ಭಾಗದಲ್ಲೂ ಭಾರೀ ಹಿಮಪಾತವಾಗಿದೆ. ಶುಕ್ರವಾರ ರಾತ್ರಿ ಪ್ರಾರಂಭವಾದ ಹಿಮಪಾತವು ಕಣಿವೆಯಲ್ಲಿ ಶನಿವಾರ ಸಂಜೆಯವರೆಗೂ ಮುಂದುವರೆಯಿತು, ಇದು ಕಾಶ್ಮೀರದ ಬಯಲಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಭಾರಿ ಹಿಮಪಾತಕ್ಕೆ ಕಾರಣವಾಗಿದೆ. ಉತ್ತರ ಕಾಶ್ಮೀರದ ಗುಲ್ಮಾರ್ಗ್‌ನ ಪ್ರಸಿದ್ಧ ಸ್ಕೀ ರೆಸಾರ್ಟ್‌ನಲ್ಲಿ ಶ್ರೀನಗರದಲ್ಲಿ ರಾತ್ರಿ 8:30 ರವರೆಗೆ 5 ಇಂಚು ಹಿಮಪಾತ ಮತ್ತು ಮೂರು ಅಡಿ ತಾಜಾ ಹಿಮಪಾತ ದಾಖಲಾಗಿದೆ. ಖಾಜಿಗುಂಡ್‌ನಲ್ಲಿ 7 ಇಂಚು ಹಿಮಪಾತ, ಕೋಕರ್‌ನಾಗ್‌ನಲ್ಲಿ ಮೂರು ಇಂಚು, ಪಹಲ್ಗಾಂನಲ್ಲಿ 12 ಇಂಚು ಮತ್ತು ಕುಪ್ವಾರಾದಲ್ಲಿ 15 ಇಂಚು ಹಿಮಪಾತ ದಾಖಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.