ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ರಾಜಕೀಯ ಕೋಲಾಹಲ ತೀವ್ರಗೊಂಡಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಬೆಂಬಲ ನೀಡುವುದಾಗಿ ಯೋಗಿ ಸರ್ಕಾರದ ಪ್ರತಿಪಕ್ಷಗಳು ಮತ್ತು ಸಮಾಜವಾದಿ ಪಕ್ಷದ ಮಿತ್ರಪಕ್ಷಗಳಾದ ಓಂ ಪ್ರಕಾಶ್ ರಾಜ್‌ಭರ್ ಮತ್ತು ಶಿವಪಾಲ್ ಯಾದವ್ ಘೋಷಿಸಿದ್ದಾರೆ. ಇದಲ್ಲದೇ ಜನಸತ್ತಾ ದಳದ ನಾಯಕ ರಘುರಾಜ್ ಪ್ರತಾಪ್ ಸಿಂಗ್ ಅಲಿಯಾಸ್ 'ರಾಜಾ ಭಯ್ಯಾ' ಮತ್ತು ಬಿಎಸ್‌ಪಿ ನಾಯಕ ಉಮಾ ಶಂಕರ್ ಸಿಂಗ್ ಕೂಡ ಮುರ್ಮುಗೆ ಬೆಂಬಲ ನೀಡಲಿದ್ದಾರೆ. ಕಳೆದ ದಿನ ದ್ರೌಪದಿ ಮುರ್ಮು ಲಕ್ನೋಗೆ ಆಗಮಿಸಿದ್ದು, ಅಲ್ಲಿನ ಬಿಜೆಪಿ ಮತ್ತು ಮಿತ್ರಪಕ್ಷಗಳಿಂದ ಬೆಂಬಲ ಕೋರಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಅಮರನಾಥದಲ್ಲಿ ಮೇಘಸ್ಪೋಟ: ಕನ್ನಡಿಗರ ರಕ್ಷಣೆಗೆ ಸರ್ಕಾರ ಕ್ರಮ, ಹೆಲ್ಪ್‌ಲೈನ್‌ ಬಿಡುಗಡೆ


ಸಿಎಂ ಯೋಗಿ ಔತಣಕೂಟದಲ್ಲಿ ನಾಲ್ವರು ನಾಯಕರು ಭಾಗಿ: 
ಎನ್‌ಡಿಎ ಅಭ್ಯರ್ಥಿಯ ಗೌರವಾರ್ಥವಾಗಿ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಔತಣಕೂಟವನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಎಸ್‌ಪಿ ಮುಖ್ಯಸ್ಥ ಓಂಪ್ರಕಾಶ್ ರಾಜ್‌ಭರ್, ಶಿವಪಾಲ್ ಯಾದವ್, ರಾಜಾ ಭಯ್ಯಾ ಮತ್ತು ಬಿಎಸ್‌ಪಿ ಶಾಸಕರು ಭಾಗವಹಿಸಿದ್ದರು. ಇದರೊಂದಿಗೆ ಸಿಎಂ ಕಚೇರಿಯಲ್ಲಿ ನಡೆದ ಸಭೆಯಲ್ಲಿ ದ್ರೌಪದಿ ಮುರ್ಮು ಅವರನ್ನು ಬಿಜೆಪಿ ಮತ್ತು ಎನ್‌ಡಿಎ ಮಿತ್ರಪಕ್ಷಗಳಾದ ಅಪ್ನಾ ದಳ (ಎಸ್) ಮತ್ತು ನಿರ್ಬಲ್ ಇಂಡಿಯನ್ ಶೋಷಿತ್ ಹಮಾರಾ ಆಮ್ ದಲ್ (ನಿಶಾದ್) ನಾಯಕರು ಸ್ವಾಗತಿಸಿ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.


ತಮ್ಮ ಭಾಷಣದಲ್ಲಿ ಉತ್ತರ ಪ್ರದೇಶದ ವೈಭವದ ಗತಕಾಲವನ್ನು ಉಲ್ಲೇಖಿಸಿದ ಮುರ್ಮು, "ಬುಡಕಟ್ಟು ಸಮಾಜದಲ್ಲಿ ಜನಿಸಿದ ಮಹಿಳೆಯೊಬ್ಬರು ಬೆಂಬಲ ಪಡೆಯಲು ನಿಮ್ಮ ಮುಂದೆ ಬಂದಿದ್ದಾರೆ" ಎಂದು ಹೇಳಿದರು. "ನನ್ನ ಬಲವಾದ ಇಚ್ಛಾಶಕ್ತಿಯ ಉನ್ನತ ಶಿಕ್ಷಣವನ್ನು ಪಡೆದುಕೊಂಡೆ. ಅನೇಕ ಕೊರತೆಗಳ ಹೊರತಾಗಿಯೂ ಈ ಸಾಧನೆ ಮಾಡಿದೆ. ನಾನು ದುರ್ಬಲ ವರ್ಗಗಳು ಮತ್ತು ಬುಡಕಟ್ಟು ಸಮಾಜಕ್ಕಾಗಿ ಜೀವಮಾನವಿಡೀ ದುಡಿದಿದ್ದೇನೆ. ನಿಮ್ಮೆಲ್ಲರ ಬೆಂಬಲ ನನಗೆ ಸಿಗುವ ವಿಶ್ವಾಸವಿದೆ" ಎಂದು ಹೇಳಿದರು. 


ಇದನ್ನೂ ಓದಿ: ಎರಡನೇ ಟಿ20ಗೆ ರೋಹಿತ್ ಗೆಳೆಯನ ದಿಢೀರ್ ಎಂಟ್ರಿ, ಇಂಗ್ಲೆಂಡ್ ತಂಡದಲ್ಲಿ ತಲ್ಲಣ!


ದ್ರೌಪದಿ ಮುರ್ಮು ಅವರಿಗೆ ವಿರೋಧ ಪಕ್ಷದ ನಾಯಕರ ಬೆಂಬಲ ಬಹಳ ಮುಖ್ಯ ಎಂಬುದು ಇಲ್ಲಿ ಉಲ್ಲೇಖಾರ್ಹ. ಏಕೆಂದರೆ ರಾಷ್ಟ್ರಪತಿ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ನೇತೃತ್ವದ ವಿಪಕ್ಷ ಪಾಳಯ ಯಶವಂತ್ ಸಿನ್ಹಾ ಅವರನ್ನು ಬೆಂಬಲಿಸುತ್ತಿದೆ. ಯಶವಂತ್ ಸಿನ್ಹಾ ಅವರೊಂದಿಗೆ ಗುರುವಾರ ನಡೆದ ಪತ್ರಿಕಾಗೋಷ್ಠಿಗೆ ಓಂಪ್ರಕಾಶ್ ರಾಜ್‌ಭರ್ ಅವರನ್ನು ಅಖಿಲೇಶ್ ಯಾದವ್ ಆಹ್ವಾನಿಸಲಿಲ್ಲ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ