ಅಹ್ಮದಾಬಾದ್: ಗುಜರಾತ್ನಲ್ಲಿ ಇಂದು (ಮಂಗಳವಾರ) ಪ್ರಧಾನಿ ನರೇಂದ್ರ ಮೋದಿ ಅವರು ಅಭಿಯಾನದ ಹೊಸ ಪರಿಕಲ್ಪನೆಯನ್ನು ಪಡೆಯಲಿದ್ದಾರೆ. ಇಂದು ಅಹಮದಾಬಾದ್ನಲ್ಲಿ ರೋಡ್ ಶೋ ರದ್ದುಗೊಳಿಸಿದ ನಂತರ, ಮೋದಿ ಅವರು ಸಬರಮತಿ ನದಿಯಿಂದ ಸಮುದ್ರ ವಿಮಾನದಲ್ಲಿ ಪ್ರಯಾಣಿಸಿದ್ದಾರೆ.  ಸ್ವಲ್ಪ ಹೊತ್ತಿನಲ್ಲೇ ಮೋದಿ ವಿಮಾನವು ಧರೋಯ್ ಅಣೆಕಟ್ಟೆಗೆ ತಲುಪಲಿದೆ. ಪ್ರಧಾನಿ ಮೋದಿ ಸಬರಮತಿ ನದಿಯ ಮೆಹ್ಸಾನ ಜಿಲ್ಲೆಯ ಮೂಲಕ ಗುಜರಾತ್ ಅಭಿವೃದ್ಧಿಯ ಬಗ್ಗೆ ಮತದಾರರ ಮನವೊಲಿಸಲು ಪ್ರಯತ್ನಿಸಿದ್ದಾರೆ. ದೇಶದಲ್ಲಿ ಈ ವಿಧದ ವಿಮಾನದ ಮೊದಲ ಹಾರಾಟ ಇದು. ಧರೋಯಿ ಅಣೆಕಟ್ಟು ತಲುಪಿದ ಪ್ರಧಾನಿ ಅಂಬಾಜಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಅಂಬಾಜಿಗೆ ಭೇಟಿ ನೀಡಿದ ನಂತರ ಪ್ರಧಾನಮಂತ್ರಿ ಮೋದಿ ಅದೇ ವಿಮಾನದಿಂದ ಅಹಮದಾಬಾದ್ಗೆ ಹಿಂದಿರುಗುವರು.


COMMERCIAL BREAK
SCROLL TO CONTINUE READING

"ನಾವು ಎಲ್ಲ ಕಡೆ ವಿಮಾನ ನಿಲ್ದಾಣಗಳನ್ನು ಮಾಡಲಾಗುವುದಿಲ್ಲ, ಇದೀಗ ನಾವು ಜಲಮಾರ್ಗಗಳ ಮೇಲೆ ಕೇಂದ್ರೀಕರಿಸುತ್ತೇವೆ" ಎಂದು ಸೋಮವಾರ ಪ್ರಧಾನಿ ಮೋದಿ ಹೇಳಿದ್ದರು.


 



ಪ್ರಧಾನಿ ಮೋದಿ ಕಾರ್ಯಕ್ರಮ ಇಂತಿದೆ: 
* ಬೆಳಿಗ್ಗೆ 9:30ಕ್ಕೆ  ಪ್ರಧಾನಿ ಸಬರಮತಿಯಿಂದ ವಿಮಾನದಲ್ಲಿ ತೆರಳುತ್ತಾರೆ.
* ಪ್ರಧಾನಿ ಮೋದಿ ಬೆಳಿಗ್ಗೆ 10:30 ಕ್ಕೆ ಧೋರೋಯಿ ಅಣೆಕಟ್ಟು ತಲುಪುತ್ತಾರೆ.
* ಧರೋಯಿ ಅಣೆಕಟ್ಟಿನಿಂದ 49 ಕಿ.ಮೀ. ದೂರದಲ್ಲಿರುವ ಅಂಬಾ ಜಿ ದೇವಸ್ಥಾನಕ್ಕೆ ಪ್ರಧಾನಿ ಮೋದಿ ಭೇಟಿ ನೀಡುತ್ತಾರೆ
* ಮಧ್ಯಾಹ್ನ 2:30ಕ್ಕೆ ಪ್ರಧಾನಿ, ಧಾರೊಯಿ ಅಣೆಕಟ್ಟು ಸಬರ್ಮಾತಿ ನದಿಯ ಮುಂಭಾಗವನ್ನು ತಲುಪಲಿದ್ದಾರೆ.


ಸೋಮವಾರ, ಅವರು ಗುಜರಾತ್ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ: "ಮಂಗಳವಾರ, ಇತಿಹಾಸದಲ್ಲಿ ಮೊದಲ ಬಾರಿಗೆ ಸಿ-ಪ್ಲೇನ್ ಸಬರಮತಿ ನದಿಯ ಮೇಲೆ ಇಳಿಯಲಿದೆ. ಧೋರೊಯಿ ಅಣೆಕಟ್ಟಿನ ಮೇಲೆ ಇಳಿದ ನಂತರ ನಾನು ಸಿ-ಪ್ಲೇನ್ ನಲ್ಲಿ ಹಿಂದಿರುಗುತ್ತೇನೆ. "ನಮ್ಮ ಪಕ್ಷವು (ಬಿಜೆಪಿ) ನನ್ನ ರೋಡ್ಶೋ ಯೋಜನೆಯನ್ನು ನಿನ್ನೆ ಯೋಜಿಸಿತ್ತು, ಆದರೆ ಆಡಳಿತವು ಅದನ್ನು ಅಂಗೀಕರಿಸಲಿಲ್ಲ ಮತ್ತು ನಾನು ಸಮಯವನ್ನು ಹೊಂದಿದ್ದೆ, ಹಾಗಾಗಿ ಸಿ-ಪ್ಲೇನ್ ನಿಂದ ಹೋಗಲು ನಾನು ನಿರ್ಧರಿಸಿದೆ" ಎಂದು ಅವರು ಹೇಳಿದರು." ನಾವು ಎಲ್ಲೆಡೆ ವಿಮಾನ ನಿಲ್ದಾಣಗಳನ್ನು ಹೊಂದಿಲ್ಲ, ಆದ್ದರಿಂದ ನಮ್ಮ ಸರ್ಕಾರ ಈ ಸಿ-ಪ್ಲೇನ್ ಅನ್ನು ಯೋಜಿಸಬೇಕಾಗಿದೆ" ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದರು.