ನವ ದೆಹಲಿ: ದೀಪಾವಳಿಗೂ ಮುಂಚೆ, ರಾಷ್ಟ್ರಪತಿ ಭವನದ ಉತ್ತರ ಮತ್ತು ದಕ್ಷಿಣ ಬ್ಲಾಕ್ ಕಟ್ಟಡಗಳೆರಡರಲ್ಲೂ ಮಾಡಲಾಗಿರುವ ನೂತನ ದೀಪಾಲಂಕಾರದ ವ್ಯವಸ್ಥೆಯು, 1.6 ಮಿಲಿಯನ್ ವರೆಗಿನ ಬಣ್ಣ ಸಂಯೋಜನೆಗಳೊಂದಿಗೆ ವಿಭಿನ್ನ ವಿಷಯಗಳನ್ನು ಪ್ರದರ್ಶಿಸುತ್ತದೆ. ಹೊಸ ವ್ಯವಸ್ಥೆಯ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಹಲವಾರು ಕೇಂದ್ರ ಸಚಿವರು ಉಪಸ್ಥಿತರಿದ್ದರು. ಇದನ್ನು ಗೃಹ ಸಚಿವ ಹಿರಿಯ ಸಹಾಯಕ ಶ್ರೀ.ಮಹಿಪಾಲ್ ಸಿಂಗ್ ಉದ್ಘಾಟಿಸಿದರು. ಪ್ರಸ್ತುತ, ಈ ಕಟ್ಟಡಗಳನ್ನು ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ಆಯ್ದ ಎಂಟು ದಿನಗಳಲ್ಲಿ ಅಲಂಕರಿಸಲಾಗುವುದು.


COMMERCIAL BREAK
SCROLL TO CONTINUE READING

ಈ ಕಟ್ಟಡದಲ್ಲಿ ವ್ಯವಸ್ಥೆ ಮಾಡಲಾಗಿರುವ ದೀಪ ವ್ಯವಸ್ಥೆಯು ಮಸುಕಾದ ಬೆಳಕಿನ ಗುಣಲಕ್ಷಣಗಳನ್ನು ಒಳಗೊಂಡಿರುತ್ತದೆ, ಅಧಿಕಾರದ ಹೊರೆ ಕಡಿಮೆ ಮಾಡಲು ಈ ರೀತಿ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೀಪಾಲಂಕಾರವು ಸಂಜೆ 7 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ಇರುತ್ತದೆ ಹಾಗೂ ಕೆಲವು ಸೆಕೆಂಡ್ ಗಳಲ್ಲಿ ಬಣ್ಣಗಳು ಬದಲಾಗುತ್ತವೆ. ಜೊತೆಗೆ ರಾತ್ರಿ 8 ರಿಂದ 9 ರವರೆಗೆ ಪೂರ್ಣ ಸಾಮರ್ಥ್ಯದೊಂದಿಗೆ ದೀಪಗಳು ಬೆಳಗಲಿವೆ ಎಂದು ತಿಳಿಸಿದ್ದಾರೆ.



ಮೂರು ತಿಂಗಳೊಳಗೆ ರಾಷ್ಟ್ರಪತಿ ಭವನವೂ ಇಂತಹ ವ್ಯವಸ್ಥೆಯಲ್ಲಿ ಪ್ರಕಾಶಿಸಲಿದೆ ಎಂದು ಅವರು ತಿಳಿಸಿದರು.


ಪ್ರಧಾನ ಮಂತ್ರಿಗಳು ಆಗಮಿಸುವ ಕೆಲ ನಿಮಿಷಗಳ ಮೊದಲು ಮಾತನಾಡಿದ ಮನಿಪಾಲ್ ಸಿನ್ಹಾ "ನಾನು ಬಹಳ ಖುಷಿಯಿಂದಿದ್ದೇನೆ" ಎಂದು ಹೇಳಿದರು. ಹತ್ತು ದಿನಗಳಲ್ಲಿ ನಿವೃತ್ತಿಯಾಗಲಿರುವ ಸಿನ್ಹಾ 1975 ರಲ್ಲಿ ನಾಲ್ಕನೇ ಶ್ರೇಣಿಯ ಉದ್ಯೋಗಿಯಾಗಿ ಸೇರುವ ಮೂಲಕ ಗೃಹ ಸಚಿವಾಲಯ ಒಂದು ಭಾಗವೇ ಆಗಿದ್ದಾರೆ.



ಹೊಸ ಪ್ರಕಾಶನ ವ್ಯವಸ್ಥೆಯ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ಜೊತೆಯಲ್ಲಿ ಕೇಂದ್ರ ಸಚಿವರು ದಕ್ಷಿಣ ಮತ್ತು ಉತ್ತರ ಬ್ಲಾಕ್ಗಳ ಸುಂದರ ಬೆಳಕನ್ನು ನೋಡಿ ಆನಂದಿಸಿದರು.