ಹೈದರಾಬಾದ್: ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ರಾಹುಲ್ ಗಾಂಧಿಯನ್ನು ಈ ದೇಶದ ಅತಿ ದೊಡ್ಡ ವಿದೂಷಕ ಎಂದು ವ್ಯಂಗವಾಡಿದ್ದಾರೆ.


COMMERCIAL BREAK
SCROLL TO CONTINUE READING

ತೆಲಂಗಾಣ ವಿಧಾನಸಭೆಯನ್ನು ವಿಸರ್ಜನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು" ಎಲ್ಲರಿಗೂ ಗೊತ್ತು ರಾಹುಲ್ ಗಾಂಧಿ ಏನು ಎನ್ನುವುದು ಅವರು ಈ ದೇಶದ ಅತಿ ದೊಡ್ಡ ವಿದೂಷಕ  ...ಇಡೀ ದೇಶ ಅವರು ಹೇಗೆ ನರೇಂದ್ರ ಮೋದಿಯನ್ನು ಅಪ್ಪಿಕೊಂಡಿದ್ದು ಮತ್ತು ಕಣ್ಸನ್ನೆ ಮಾಡಿದ್ದನ್ನು ನೋಡಿದೆ.ತೆಲಂಗಾಣಕ್ಕೆ ಅವರು ಬಂದಂತೆ ನಾವು ಅಧಿಕ ಸೀಟುಗಳನ್ನು ಗೆಲ್ಲುತ್ತೇವೆ" ಎಂದು ತಿಳಿಸಿದರು.


ರಾಜ್ಯಪಾಲರಿಗೆ ತೆಲಂಗಾಣ ವಿಧಾನಸಭೆಯನ್ನು ವಿಸರ್ಜಿಸಲು ಶಿಪಾರಸ್ಸು ಮಾಡಿದ ನಂತರ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರ ಮೇಲೆ ಟಿಕಾ ಪ್ರಹಾರ ನಡೆಸಿದ ಕೆಸಿಆರ್ " ರಾಹುಲ್ ಗಾಂಧಿ ಕಾಂಗ್ರೆಸ್ ನ ದೆಹಲಿ ಸುಲ್ತಾನದ ಪ್ರತೀಕರಾಗಿದ್ದಾರೆ.ಆದ್ದರಿಂದ ನಾನು ಜನರಲ್ಲಿ ಮನವಿ ಮಾಡಿಕೊಳ್ಳುವುದಿಷ್ಟೇ ಕಾಂಗ್ರೆಸ್ ನ ಗುಲಾಮ ಮತ್ತು ದೆಹಲಿಯ ಗುಲಾಮರಾಗಬೇಡಿ" ಎಂದು ವಿನಂತಿಸಿಕೊಂಡರು.