ನವದೆಹಲಿ: ಇಂದಿನ ಸಂಸತ್ ಅಧಿವೇಶನ ಹಲವು ರೋಚಕ ಘಟನೆಗಳಿಗೆ ಸಾಕ್ಷಿಯಾಯಿತು. ಒಂದು ಕಡೆ ರಾಹುಲ್ ಗಾಂಧಿ ತಮ್ಮ ಹರಿತವಾದ ಭಾಷಣದ ಮೂಲಕ ಸರ್ಕಾರದ ಮೇಲೆ ಟೀಕಾ ಪ್ರಹಾರವನ್ನು ಮಾಡಿದರು.ಇದರ ಜೊತೆಗೆ ರಾಹುಲ್ ಗಾಂಧಿ ತಮ್ಮ ಭಾಷಣ ಮುಗಿದ ನಂತರ ಪ್ರಧಾನಿ ಮೋದಿಯವರನ್ನು ಹೋಗಿ ತಬ್ಬಿಕೊಂಡಿದ್ದು ಸದನದಲ್ಲಿ ರೋಚಕ ಘಟನೆಗೆ ಸಾಕ್ಷಿಯಾಯಿತು.


COMMERCIAL BREAK
SCROLL TO CONTINUE READING

ಪ್ರಧಾನಿಯವರನ್ನು ತಬ್ಬಿಕೊಂಡ ನಂತರ ತಮ್ಮ ಆಸನಕ್ಕೆ ಕುಳಿತುಕೊಳ್ಳುವ ಸಂದರ್ಭದಲ್ಲಿ ಇತ್ತೀಚಿಗೆ ಕಣ್ಸನ್ನೆಯಿಂದಲೇ ಸುದ್ದಿ ಮಾಡಿದ್ದ ಪ್ರಿಯಾ ವಾರಿಯರ್ ಅವರಂತೆ ರಾಹುಲ್ ಗಾಂಧಿ ಕಣ್ಣು ಹೊಡೆದಿರುವ ಸಂಗತಿ ಈ ಸಾಕಷ್ಟು ವೈರಲ್ ಆಗಿದೆ. ಅಂತೂ ಸಧನದಲ್ಲಿ ನಡೆದ ಬಿಸಿ ಬಿಸಿ ಚರ್ಚೆಯ ಮಧ್ಯದಲ್ಲಿ ರಾಹುಲ್ ಹಲವು ಸ್ವಾರಸ್ಯಕರ ಘಟನೆಗೆ ಕಾರಣವಾಗುವುದರ ಮೂಲಕ ಸಧನವನ್ನು ನಗೆಗಡಲೆಯಲ್ಲಿ ತೇಲುವಂತೆ ಮಾಡಿದರು. 


ಈ ಹಿಂದೆ ರಾಹುಲ್ ಗಾಂಧಿ ತಾವು ಸಂಸತ್ತಿನಲ್ಲಿ ಭಾಷಣ ಮಾಡಿದರೆ ಭೂಕಂಪವಾಗುತ್ತದೆ ಎಂದು ಹೇಳಿ ಸುದ್ದಿಯಾಗಿದ್ದರು.ಇವತ್ತು  ರಾಹುಲ್  ಅದೇ ರೀತಿಯಲ್ಲಿ ತಮ್ಮ ಮೊನಾಚಾದ ಭಾಷಣದಿಂದ ಸರ್ಕಾರಕ್ಕೆ ಚುಚ್ಚಿದರು.