ನವದೆಹಲಿ: ಕಾಂಗ್ರೇಸ್ ಪಕ್ಷವನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಸ್ಪಷ್ಟ ಹೆಜ್ಜೆಯನ್ನಿಟ್ಟಿರುವ ರಾಹುಲ್ ಗಾಂಧಿ ಇಲ್ಲಿನ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಮತ್ತು ಜನಸಾಮಾನ್ಯರ ನಡುವೆ ಸಂವಾದ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ರಾಹುಲ್ ಗಾಂಧಿ ಬೆಳಗ್ಗೆ 9:15 ಗಂಟೆಗೆ ಅಕ್ಬರ್ ರಸ್ತೆಯ ಪಕ್ಷದ ಪ್ರಧಾನ ಕಚೇರಿಗೆ ಆಗಮಿಸಿ , ದೆಹಲಿ, ರಾಜಸ್ಥಾನ ಮತ್ತು  ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಪಕ್ಷದ ಕಾರ್ಯಕರ್ತರ ನಿಯೋಗವನ್ನು ಭೇಟಿ ಮಾಡಿದರು. ಎಐಸಿಸಿ ಪ್ರಧಾನ ಕಚೇರಿಯಲ್ಲಿರುವ ಕಾಂಗ್ರೆಸ್ ಮುಖ್ಯಸ್ಥರ ಕಚೇರಿಯು ಹಲವಾರು ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿತ್ತು. ಮಾಜಿ ಪಕ್ಷದ ಮುಖ್ಯಮಂತ್ರಿ ಸೋನಿಯಾ ಗಾಂಧಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಗೆ ಹಾಜರಾಗಲು ಅಥವಾ ಪಕ್ಷದ ಸ್ಥಾಪನಾ ದಿನದಂದು ಮಾತ್ರ ಅದನ್ನು ತೆರೆಯಲಾಗುತ್ತಿತ್ತು. 


ಇತ್ತೀಚಿಗೆ ಕಚೇರಿಯನ್ನು  ರಾಹುಲ್ ಗಾಂಧಿಯವರಿಗಾಗಿ ನವೀಕರಿಸಲಾಗಿದೆ. ಈ ಹಿಂದೆ, ಇಂದಿರಾ ಗಾಂಧಿ ಮುಂತಾದ ಮಾಜಿ ಕಾಂಗ್ರೆಸ್ ಅಧ್ಯಕ್ಷರು ಅಲ್ಲಿ ಜನತಾ ದರ್ಬಾರನಲ್ಲಿ ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗುತ್ತಿದ್ದರು.