Rajashtana Political Crisis: ಕಾಂಗ್ರೆಸ್‌ನ ರಾಜಸ್ಥಾನ ಘಟಕದಲ್ಲಿ ಬಿಕ್ಕಟ್ಟು ಉಂಟಾಗಿರುವ ಹಿನ್ನೆಲೆಯಲ್ಲಿ ಪಕ್ಷದ ಶಿಸ್ತು ಸಮಿತಿಯು ಮಂಗಳವಾರ ರಾಜಸ್ಥಾನದ ಸಚಿವರಾದ ಶಾಂತಿ ಧರಿವಾಲ್ ಮತ್ತು ಮಹೇಶ್ ಜೋಶಿ ಮತ್ತು ಶಾಸಕ ಧರ್ಮೇಂದ್ರ ರಾಥೋಡ್‌ಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಮೂಲಗಳ ಪ್ರಕಾರ, ಗಂಭೀರವಾದ ಅಶಿಸ್ತಿನ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬಾರದು ಎಂಬುದಕ್ಕೆ 10 ದಿನಗಳಲ್ಲಿ ಉತ್ತರಿಸುವಂತೆ ಕಾಂಗ್ರೆಸ್ ಸಮಿತಿಯು ರಾಜಸ್ಥಾನದ ಮೂವರು ನಾಯಕರನ್ನು ಕೇಳಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-SC: ಅಸಲಿ ಶಿವಸೇನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಧವ್ ಬಣಕ್ಕೆ ಭಾರಿ ಹಿನ್ನಡೆ, ಸುಪ್ರೀಂ ಹೇಳಿದ್ದೇನು?
    
ಇದಕ್ಕೂ ಮುನ್ನ ಪಕ್ಷದ ವೀಕ್ಷಕರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ಗೆ ನಿಕಟವಾಗಿರುವ ಮೂವರು ನಾಯಕರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದ್ದರು. ಪರಿವೀಕ್ಷಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ್ ಮಾಕನ್ ಇಬ್ಬರೂ ಸೋನಿಯಾ ಗಾಂಧಿ ಅವರಿಗೆ ಸಲ್ಲಿಸಿದ ವರದಿಯಲ್ಲಿ ಮುಖ್ಯಮಂತ್ರಿ ಗೆಹ್ಲೋಟ್ ಅವರನ್ನು ನೇರವಾಗಿ ಉಲ್ಲೇಖಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ, ಅಧಿಕೃತ ಶಾಸಕಾಂಗ ಪಕ್ಷದ ಸಭೆಯ ಬದಿಯಲ್ಲಿ ತಮ್ಮ ಬೆಂಬಲಿಗ ಶಾಸಕರ ಪರವಾಗಿ ಸಭೆ ನಡೆಸುವುದು ಅಶಿಸ್ತು ಎಂದು ಆರೋಪಿಸಿದ್ದಾರೆ.


ಇದನ್ನೂ ಓದಿ-Rajasthan Political Crisis: ಸೋನಿಯಾ ಗಾಂಧಿಗೆ ವರದಿ ಸಲ್ಲಿಸಿದ ಖರ್ಗೆ-ಮಾಕನ್, ವರದಿಯಲ್ಲೇನಿದೆ?


ಇದಕ್ಕೂ ಮೊದಲು ಭಾನುವಾರದ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಶಾಂತಿ ಧಾರಿವಾಲ್ ಅವರ ನಿವಾಸದಲ್ಲಿ ಗೆಹಲೋಟ್ ಬೆಂಬಲಿಗ ಶಾಸಕರು ಸಭೆಯನ್ನು ನಡೆಸಿದ್ದರು. ಈ ಸಭೆಯಲ್ಲಿ ಅವರು 2020ರಲ್ಲಿ ಅಶೋಕ್ ಗೆಹಲೋಟ್ ವಿರುದ್ಧ ಸಚಿನ್ ಪೈಲಟ್ ಅವರ ಬಂಡಾಯದ ವಿಷಯವನ್ನು ಉಲ್ಲೇಖಿಸಿದ್ದರು. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ