ನವದೆಹಲಿ: ಮಾಜಿ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸೇರಿದಂತೆ 10 ಮಾಜಿ ಸದಸ್ಯರಿಗೆ ಶುಕ್ರವಾರ ರಾಜ್ಯಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. 


COMMERCIAL BREAK
SCROLL TO CONTINUE READING

ಇಂದು ಬೆಳಿಗ್ಗೆ ಸಭೆ ಆರಂಭವಾಗುತ್ತಿದ್ದಂತೆಯೇ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು,  ಮನೋಹರ್ ಪರಿಕ್ಕರ್, ರಾಜನಾಥ್ ಸಿಂಗ್ ಸೂರ್ಯ, ವೀರೇಂದ್ರ ಕಟಾರಿಯಾ, ಚೌಧರಿ ಮುನಾವ್ವರ್ ಸಲೀಮ್, ಕೆ.ಆರ್.ಸುಬ್ಬಯ್ಯ, ದ್ರುಪದ ಬಾರ್ಗೊಹಾಯ್, ದೇವಿ ಪ್ರಸಾದ್ ಸಿಂಗ್, ವಸಂತಿ ಸ್ಟೇನ್ಲಿ, ವಿಶ್ವನಾಥ್ ಮೆನನ್, ಎಸ್.ಶಿವಸುಬ್ರಮಣ್ಯಂ ಅವರ ನಿಧನದ ಬಗ್ಗೆ ಪ್ರಸ್ತಾಪಿಸಿದರು. ಬಳಿಕ ಎಲ್ಲಾ ಸದಸ್ಯರೂ ಸ್ಥಳದಲ್ಲೇ ಎದ್ದು ನಿಂತು ಮೌನ ಆಚರಿಸುವ ಮೂಲಕ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಅರ್ಪಿಸಿದರು.


ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು 2014 ರಿಂದ 2017 ರವರೆಗೆ ಮೇಲ್ಮನೆಯಲ್ಲಿ ಉತ್ತರ ಪ್ರದೇಶವನ್ನು ಪ್ರತಿನಿಧಿಸಿದ್ದರು. ಅವರು ಮೂರು ಬಾರಿ ಗೋವಾದ ಸಿಎಂ ಆಗಿ ಆಡಳಿತ ನಡೆಸಿದ್ದರು. ಆಷ್ಟೇ ಅಲ್ಲದೆ, ಕೇಂದ್ರ ರಕ್ಷಣಾ ಸಚಿವರಾಗಿ ಪರಿಕ್ಕರ್ ಕೈಗೊಂಡ ಕ್ರಮಗಳ ಬಗ್ಗೆ ರಾಜ್ಯಸಭೆಯಲ್ಲಿ ನಾಯ್ಡು ಪ್ರಸ್ತಾಪಿಸಿ, ಅವರ ಸಾಧನೆಗಳನ್ನು ನೆನೆದರು.