ಪಾಟ್ನಾ: ಮೇವು ಹಗರಣದ ಕಾರಣದಿಂದಾಗಿ ಈಗ ಜೈಲು ಶಿಕ್ಷೆ ಅನುಭವಿಸುತ್ತಿರುವ ಆರ್ ಜೆ ಡಿ ನಾಯಕ ಲಾಲು ಪ್ರಸಾದ ಈಗ ವೈದಕೀಯ ಕಾರಣದಿಂದಾಗಿ 6 ವಾರಗಳ ಕಾಲ ತಾತ್ಕಾಲಿಕ ಜಾಮೀನು ಪಡೆದುಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಈ ಹಿನ್ನಲೆಯಲ್ಲಿ ಇಂದು ಲಾಲು ಪ್ರಸಾದ ರನ್ನು ಅವರ ಪಾಟ್ನಾ ನಿವಾಸದಲ್ಲಿ ಯೋಗ ಗುರು ಬಾಬಾ ರಾಮದೇವ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಈ ಭೇಟಿ ವೇಳೆ ಆರೋಗ್ಯವಾಗಿರಲು ಯೋಗದ ಸಲಹೆ ನೀಡಿರುವುದಾಗಿ  ರಾಮದೇವ ಸುದ್ದಿಗಾರರಿಗೆ ತಿಳಿಸಿದರು.


ಲಾಲು ಪ್ರಸಾದ್ ಇತ್ತೀಚಿಗೆ ಆರೋಗ್ಯದ ಕಾರಣದಿಂದಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ತಮ್ಮ ಮಗ ತೇಜ ಪ್ರತಾಪ್ ಯಾದವ್ ಮದುವೆಯ ಕಾರಣಕ್ಕಾಗಿ ಮೂರು ದಿನಗಳ ಕಾಲ ಪೆರೋಲ್ ಪಡೆದಿದ್ದರು. 


ಈ ಹಿಂದೆ ಲಾಲು ಪ್ರಸಾದ್ ಯಾದವ್ ಬಾಬಾ ರಾಮದೇವ್ ಅವರನ್ನು 2011 ರ ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ವ್ಯಂಗವಾಡಿದ್ದರು.ದೆಹಲಿಯ ರಾಮಲೀಲಾ ಮೈದಾನದಲ್ಲಿ ಪೊಲೀಸರು ಬಂದಿಸಲು ಬಂದಿದ್ದಾಗ ರಾಮದೇವ್ ಕುಡಾಸಾನವನ್ನು ಕೂಡ ಮಾಡುತ್ತಾರೆ ಎಂದು ವ್ಯಂಗವಾಡಿದ್ದರು.