ನವದೆಹಲಿ: ಪ್ರತಿ ಮನೆಗೆ ಕೊಳವೆಗಳಿಂದ ಅನಿಲ(ಎಲ್‌ಪಿಜಿ) ತಲುಪಿಸಲು ಪೆಟ್ರೋಲಿಯಂ ಸಚಿವಾಲಯ ರಾಜಸ್ಥಾನದ ದುಂಗರಪುರ ಬನ್ಸ್ವಾರವನ್ನು ಆಯ್ಕೆ ಮಾಡಿದೆ. ಇದಕ್ಕಾಗಿ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಸಂಸದ ಕನಕ್ಮಲ್ ಕತಾರ ಅವರಿಗೆ ಪತ್ರ ಬರೆದಿದ್ದಾರೆ. ಈ ಇಡೀ ಪ್ರದೇಶವು ಬುಡಕಟ್ಟು ಪ್ರಾಬಲ್ಯ ಹೊಂದಿದೆ ಎಂಬುದು ಗಮನಾರ್ಹ ಅಂಶವಾಗಿದೆ.


COMMERCIAL BREAK
SCROLL TO CONTINUE READING

ಗುಜರಾತ್ ಗ್ಯಾಸ್ ಲಿಮಿಟೆಡ್ ಕೊಳವೆಗಳನ್ನು ಹಾಕಲಿದೆ:
ರಾಜಸ್ಥಾನದ ಈ ಬುಡಕಟ್ಟು ಪ್ರಾಬಲ್ಯದ ಪ್ರದೇಶಗಳಿಗೆ ಅನಿಲವನ್ನು ತಲುಪಿಸಲು ಪೈಪ್‌ಲೈನ್ ಜಾಲವನ್ನು ಸಿದ್ಧಪಡಿಸಲು ಗುಜರಾತ್ ಗ್ಯಾಸ್ ಲಿಮಿಟೆಡ್‌ಗೆ ಅಧಿಕಾರ ನೀಡಲಾಗಿದೆ ಎಂದು ಪೆಟ್ರೋಲಿಯಂ ಸಚಿವರು ಮಾಹಿತಿ ನೀಡಿದ್ದಾರೆ. ಈ ಎರಡು ಜಿಲ್ಲೆಗಳಲ್ಲಿ ವಾಹನಗಳಿಗೆ ಸಿಎನ್‌ಜಿ ನಿಲ್ದಾಣಗಳನ್ನು ನಿರ್ಮಿಸಲಾಗುವುದು. ನಗರ ಅನಿಲ ವಿತರಣಾ ಜಾಲದ ಹತ್ತನೇ ಹಂತಕ್ಕೆ ಸೇರಿಸಲು ಈ ಪ್ರದೇಶವನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.



ಮಾಲಿನ್ಯ ನಿಯಂತ್ರಣಕ್ಕೆ ಸಹಾಯ:
ದೇಶದಲ್ಲಿ ಸ್ವಚ್ಛ ಪರಿಸರ ಮತ್ತು ಮಾಲಿನ್ಯ ನಿಯಂತ್ರಣದ ಜೊತೆಗೆ ಆದ್ಯತೆಯೊಂದಿಗೆ ಅನಿಲ ಆಧಾರಿತ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಲು ಭಾರತ ಸರ್ಕಾರ ಬಯಸಿದೆ ಎಂದು ಸಚಿವ ಧರ್ಮೇಂದ್ರ ಪ್ರಧಾನ್ ಬನ್ಸ್ವಾರ ಮತ್ತು ಡುಂಗರಪುರದ ಸಂಸದ ಕನಕ್ಮಲ್ ಕತಾರ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಸಿಎನ್‌ಜಿಗೆ ದೇಶೀಯ ಅನಿಲ ಪೈಪ್‌ಲೈನ್ ಮತ್ತು ವಾಹನಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ನೈಸರ್ಗಿಕ ಅನಿಲದ ಬಳಕೆಯನ್ನು ಉತ್ತೇಜಿಸಲು ನಗರ ಅನಿಲ ವಿತರಣಾ ಜಾಲವನ್ನು ಬಲಪಡಿಸಲು ಮತ್ತು ವಿಸ್ತರಿಸಲು ಗಂಭೀರ ಪ್ರಯತ್ನಗಳು ನಡೆಯುತ್ತಿವೆ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.



ದೇಶಾದ್ಯಂತ ಗ್ಯಾಸ್ ಪೈಪ್‌ಲೈನ್ ಹಾಕಲು ತಯಾರಿ:
ನಗರ ಅನಿಲ ವಿತರಣಾ ಜಾಲವು 228 ಭೌಗೋಳಿಕ ಪ್ರದೇಶಗಳಲ್ಲಿ ವ್ಯಾಪಿಸಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಒಂಬತ್ತನೇ ಮತ್ತು ಹತ್ತನೇ ಹಂತ ಪೂರ್ಣಗೊಂಡ ನಂತರ, ದೇಶದ 54 ಪ್ರತಿಶತದಷ್ಟು ಮತ್ತು 70 ಪ್ರತಿಶತದಷ್ಟು ಜನಸಂಖ್ಯೆಯನ್ನು ದೇಶೀಯ ಅನಿಲ ಪೈಪ್‌ಲೈನ್ ಮತ್ತು ವಾಹನಗಳಿಗಾಗಿ ಸಿಎನ್‌ಜಿ ಯೋಜನೆಗೆ ಸಂಪರ್ಕಿಸಲಾಗುವುದು. ಈ ಯೋಜನೆಯ ಘೋಷಣೆಯ ನಂತರ, ಶೀಘ್ರದಲ್ಲೇ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟ ಕಂಪನಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸುವುದಾಗಿ ಪ್ರದೇಶದ ಸಂಸದ ಕನಕ್ಮಲ್ ಕಟಾರಾ ಹೇಳಿದರು ಮತ್ತು ಈ ದಿಕ್ಕಿನಲ್ಲಿ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಲು ಪ್ರಯತ್ನಿಸುತ್ತೇನೆ ಎಂದವರು ಭರವಸೆ ನೀಡಿದರು.