ನವದೆಹಲಿ: ಶನಿವಾರ ಮಧುರೈನ ಒಂಬತ್ತು ವರ್ಷ ವಯಸ್ಸಿನ ಬಾಲಕಿ ಜನನಿ ಶಬರಿಮಲೈ ದೇವಸ್ತಾನದಲ್ಲಿ ವಿಶಿಷ್ಟವಾಗಿ ಕಾಣುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.


COMMERCIAL BREAK
SCROLL TO CONTINUE READING

ಶುಕ್ರವಾರದಂದು ತಮ್ಮ ತಂದೆಯೊಂದಿಗೆ ದೇವಸ್ತಾನಕ್ಕೆ ಬಂದಿದ್ದ ಈ ಬಾಲಕಿ " ನನ್ನ ಹೆಸರು ಜನನಿ ನನಗೆ 9 ವರ್ಷ ನನಗೆ  50 ವರ್ಷ ತುಂಬಿದ ನಂತರ ಮತ್ತೆ ನಾನು ಶಬರಿಮಲೆ ದೇವಸ್ತಾನಕ್ಕೆ ನಾನು ಭೇಟಿ ನೀಡುತ್ತೇನೆ ಅಲ್ಲಿಯವರೆಗೆ ನಾನು ಕಾಯುತ್ತೇನೆ" ಎಂದು ಬರೆದುಕೊಂಡಿರುವ ಪ್ಲೇ ಕಾರ್ಡ್ ಮೂಲಕ ಗಮನ ಸೆಳೆದರು.



ಈ ಕುರಿತಾಗಿ ಪ್ರತಿಕ್ರಿಯಿಸಿದ ಜನನಿ ತಂದೆ ಆರ್.ಸತೀಶ್ ಕುಮಾರ್ " ಸುಪ್ರಿಂಕೋರ್ಟ್ ತೀರ್ಪು ಏನು ನೀಡಿದೆ ಎನ್ನುವುದರ ಬಗ್ಗೆ ನಮಗೆ ತಿಳಿದಿಲ್ಲ,ನನ್ನ ಮಗಳು ಹತ್ತು ವರ್ಷ ವಯಸ್ಸು ಪೂರೈಸಿದ ನಂತರ ಐವತ್ತು ವರ್ಷ ತುಂಬುವವರೆಗೆ ಕಾಯುತ್ತಾಳೆ" ಆಗ ಅವಳು ಅಯ್ಯಪ್ಪ ಸ್ವಾಮಿ ದೇವಸ್ತಾನಕ್ಕೆ ಬರಬಹುದು  ಎಂದು  ತಿಳಿಸಿದರು. ಆ ವಯಸ್ಸಿನೊಳಗೆ ಬಂದರೆ ತಮಗೆ ಹಿಡಿಸುವುದಿಲ್ಲ ಎಂದರು.


ಶುಕ್ರವಾರದಂದು ಇಬ್ಬರು ಮಹಿಳೆಯರು ದೇವಸ್ತಾನ ಪ್ರವೇಶಿಸುವುದನ್ನು ಖಂಡಿಸಿ ಭಕ್ತರು ಖಂಡಿಸಿ ಪ್ರತಿಭಟನೆ ನಡೆಸಿದರು.