ನವದೆಹಲಿ: ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್  ಸುಲ್ಮಾನ್ ಖಾನ್ ಈಗ ಕೇಂದ್ರ ಸಚಿವ ಕಿರೇನ್ ರಿಜೀಜು ಮತ್ತು ಅರುಣಾಚಲ ಪ್ರದೇಶದ ಸಿಎಂ ಪೆಮಾ ಖಂಡು ಜೊತೆ ಸೈಕಲ್ ಸವಾರಿ ಮಾಡುತ್ತಿರುವ ವಿಡಿಯೋವೊಂದನ್ನು ಈಗ ಅವರು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವುದಕ್ಕೆ ಅರುಣಾಚಲ ಪ್ರದೇಶಕ್ಕೆ ಹೋಗಿದ್ದ  ಸಲ್ಮಾನ್ ಖಾನ್ ಮುಂದಿನ ಚಿತ್ರವನ್ನು ಇಲ್ಲಿ ಚಿತ್ರಿಕರಿಸುವುದಾಗಿ ತಿಳಿಸಿದ್ದಾರೆ.ಅವರು ಅರುಣಾಚಲಕ್ಕೆ ಭೇಟಿ ನೀಡಿರುವ ಬಗ್ಗೆ ಬರೆದುಕೊಂಡಿರುವ ಅಲ್ಲಿನ ಅಧಿಕಾರಿಗಳು "ಸಲ್ಮಾನ್ ಖಾನ್ ಅರುಣಾಚಲದ ಸೌಂದರ್ಯಕ್ಕೆ ಮಾರುಹೊಗಿದ್ದು ತಮ್ಮ ಮುಂದಿನ ಚಿತ್ರವನ್ನು ಇಲ್ಲಿ ಚಿತ್ರಿಕರಿಸುವುದಾಗಿ ಹೇಳಿದ್ದಾರೆ.ಇದರಿಂದ ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೆ  ಹೆಚ್ಚಿನ ಮಹತ್ವ ಬರಲಿದೆ" ಎಂದು ತಿಳಿಸಿದ್ದಾರೆ.



ಭರತ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಲ್ಮಾನ್ ಈಗ ದೆಹಲಿಯಲ್ಲಿ ಚಿತ್ರವೊಂದರ ಶೂಟಿಂಗ್ ಗಾಗಿ ದೆಹಲಿಯಲ್ಲಿ ಬ್ಯೂಸಿಯಾಗಿದ್ದಾರೆ.ಈ ಚಿತ್ರದಲ್ಲಿ ಕತ್ರಿನಾ ಕೈಫ್, ದಿಶಾ ಪಟಾನಿ,ಸುನಿಲ್ ಗ್ರೋವರ್, ಟಬು ಮುಂತಾದವರು ನಟಿಸುತಿದ್ದಾರೆ.ಈ ಚಿತ್ರವು 1947ರ  ದೇಶ ವಿಭಜನೆ ಕತೆ ಹಿನ್ನಲೆಯಲ್ಲಿದೆ 2019 ರ ಈದ್ ವೇಳೆಗೆ ಇದು ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.