ನವದೆಹಲಿ: ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ತಾಲಿಬಾನ್ ಹೇಳಿಕೆಗೆ ಉತ್ತರಿಸಿದ ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಪಾಕಿಸ್ತಾನದಲ್ಲಿರುವ ತನ್ನ ಗೆಳತಿ ಜೊತೆ ವಾಸಿಸುವುದು ಹೆಚ್ಚು ಆರಾಮದಾಯಕ ಎನಿಸುತ್ತದೆ ಎಂದು ವ್ಯಂಗವಾಡಿದ್ದಾರೆ.


COMMERCIAL BREAK
SCROLL TO CONTINUE READING

ಶಶಿ ತರೂರ್ ಇಂದು ತಿರುವನಂತಪುರಂನಲ್ಲಿ ಸಾರ್ವಜನಿಕ ಸಭೆಯಲ್ಲಿ  ಮಾತನಾಡುತ್ತಾ , "ನಾನು ಪಾಕಿಸ್ತಾನಕ್ಕೆ ಹೋಗಬೇಕೆಂದು ಅವರು ನನ್ನನ್ನು ಕೇಳುತ್ತಿದ್ದಾರೆ. ನಾನು ಅವರಂತೆ ಹಿಂದೂ ಅಲ್ಲವೆಂದು ತೀರ್ಮಾನಿಸುವ ಹಕ್ಕನ್ನು ಯಾರು ನೀಡಿದ್ದಾರೆ ಮತ್ತು ನನಗೆ ದೇಶದಲ್ಲಿ ಬದುಕುವ ಹಕ್ಕನ್ನು ಇಲ್ಲ ಎನ್ನುವ ಹಕ್ಕನ್ನು ಅವರಿಗೆ ಯಾರು ನೀಡಿದ್ದಾರೆ? ಅವರು ಹಿಂದೂ ಧರ್ಮದಲ್ಲಿ ತಾಲಿಬಾನ್ ಪ್ರಾರಂಭಿಸಿದ್ದಾರಾ? "ಎಂದು ಅವರು ಪ್ರಶ್ನಿಸಿದ್ದಾರೆ.


ತರೂರ್ ಅವರ ಹೇಳಿಕೆಗೆ ಉತ್ತರಿಸಿದ ಸ್ವಾಮಿ" ನಾವು ಅವರನ್ನು (ಶಶಿ ತರೂರ್) ಭಾರತ ಬಿಟ್ಟು  ಹೋಗಲು ಒತ್ತಾಯಿಸುತ್ತಿಲ್ಲ, ಬದಲಾಗಿ ಅಲ್ಲಿ ಅವರ ಪಾಕಿಸ್ತಾನದ ಗೆಳತಿ ಇರುವುದರಿಂದ ನಾವು ಅವರಿಗೆ ಸಲಹೆಯನ್ನು ನೀಡುದ್ದೇವೆ ಅಷ್ಟೇ" ಎಂದು ತಿಳಿಸಿದರು. "