ಕಾನ್ಪುರ್: ಕೆಲವೊಮ್ಮೆ ವಿದ್ಯಾರ್ಥಿಗಳು ರಜೆ ತೆಗೆದುಕೊಳ್ಳಲು ನಾನಾ ರೀತಿಯ ಸರ್ಕಸ್ ಮಾಡುವುದನ್ನು ಕೇಳಿದ್ದೇವೆ. ಈಗ ಅಂತದ್ದೇ ಒಂದು ಘಟನೆಯಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಸಾವಿಗಾಗಿ ಅರ್ಧ ದಿನ ರಜೆ ಕೇಳಿ ಅದಕ್ಕೆ ಅನುಮತಿಯನ್ನು ಪಡೆದಿರುವ ಘಟನೆ ಕಾನ್ಪುರದಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಪ್ರಾಂಶುಪಾಲರನ್ನು ಉದ್ದೇಶಿಸಿ ವಿದ್ಯಾರ್ಥಿ ಬರೆದ ಅರ್ಜಿಯಲ್ಲಿ ತಾನು (ವಿದ್ಯಾರ್ಥಿ ಸ್ವತಃ) ಆ ದಿನ ಬೆಳಿಗ್ಗೆ 10 ಗಂಟೆಗೆ ನಿಧನವಾಗಿರುವುದಾಗಿ ಹೇಳಿ ಬೇಗನೆ ಮನೆಗೆ ತಾನು  ಹೋಗಬೇಕಾಗಿದೆ ಎಂದು ಬರೆದಿದ್ದಾನೆ. ಇದಕ್ಕಾಗಿ ಅರ್ಧ ದಿನದ ರಜೆ ತೆಗೆದುಕೊಳ್ಳಲು ಅವನು ಪ್ರಾಂಶುಪಾಲರನ್ನು ಮನವಿ ಮಾಡಿಕೊಂಡಿದ್ದಾನೆ. ಇದಕ್ಕೆ ಶಾಲೆಯ ಪ್ರಾಂಶುಪಾಲರು ರಜೆಗೆ ಲಿಖಿತವಾಗಿ ಅನುಮತಿ ನೀಡಿದ್ದಾರೆ! ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.


ಆ ವಿದ್ಯಾರ್ಥಿಯು ಆರಂಭದಲ್ಲಿ ಈ  ಕಥೆಯನ್ನು ತನ್ನಲ್ಲಿಯೇ ಇಟ್ಟುಕೊಂಡಿದ್ದರಿಂದ ಈ ಘಟನೆ ತಕ್ಷಣವೇ ತಿಳಿದುಬಂದಿಲ್ಲ. ಆದಾಗ್ಯೂ, ನಂತರ ಅವರು ಅದನ್ನು ಕೆಲವು ಸ್ನೇಹಿತರೊಂದಿಗೆ ಹಂಚಿಕೊಂಡಿದ್ದರಿಂದಾಗಿ. ನಿಧಾನವಾಗಿ, ಇಡೀ ವಿದ್ಯಾರ್ಥಿ ಸಮುದಾಯವೇ ಹಾಗೆ ಮಾಡಲು ಪ್ರಾರಂಭವಾಯಿತು ಎಂದು ತಿಳಿದಿದೆ. ಕೆಲವು ಶಿಕ್ಷಕರು ಪ್ರಾಂಶುಪಾಲರನ್ನು ಸಮರ್ಥಿಸಿಕೊಂಡು ಮತ್ತು ಅವರ ವಿಷಯಗಳನ್ನು ನೋಡದೆ ಅರ್ಜಿಗಳಿಗೆ ಸಹಿ ಮಾಡುವ ಅಭ್ಯಾಸದಲ್ಲಿದ್ದಾರೆ ಎಂದು ಹೇಳಿದ್ದಾರೆ.