ಆಂಧ್ರ ಪ್ರದೇಶ : ವಿಶಾಖಪಟ್ಟಣಂ ವ್ಯಾಪ್ತಿಯ ದುವ್ವಾಡ ರೈಲು ನಿಲ್ದಾಣದಲ್ಲಿ ಬೋಗಿ ಮತ್ತು ಪ್ಲಾಟ್‌ಫಾರ್ಮ್ ನಡುವೆ ಸಿಲುಕಿದ್ದ ಅಣ್ಣಾವರಂ ಯುವತಿ ಎಂ.ಶಶಿಕಲಾ (22) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ದುವ್ವಾಡದಲ್ಲಿ ಎಂಸಿಎ ಓದುತ್ತಿದ್ದ ಆಕೆ ಬುಧವಾರ ಬೆಳಗ್ಗೆ ಅಣ್ಣಾವರಂನಿಂದ ಗುಂಟೂರು - ರಾಯಗಡ ರೈಲಿನಲ್ಲಿ ದುವ್ವಾಡ ರೈಲು ನಿಲ್ದಾಣದಲ್ಲಿ ಇಳಿಯುತ್ತಿದ್ದಾಗ ಅಪಘಾತಕ್ಕೆ ಗುರಿಯಾಗಿದ್ದಳು.


COMMERCIAL BREAK
SCROLL TO CONTINUE READING

ರೈಲ್ವೆ ರಕ್ಷಣಾ ತಂಡವು ಪ್ಲಾಟ್‌ಫಾರ್ಮ್‌ ಹಾಗೂ ರೈಲಿನ ಮಧ್ಯ ಸಿಲುಕಿದ್ದ ಯುವತಿಯನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಮಾಹಿತಿ ಪಡೆದ ಕುಟುಂಬ ಸದಸ್ಯರು ಆಸ್ಪತ್ರೆಗೆ ಧಾವಿಸಿದರು. ಮಗಳ ಸ್ಥಿತಿ ಕಂಡು ಮನ ಕಲಕಿತು. ತಂದೆ-ತಾಯಿ, ಕುಟುಂಬಸ್ಥರು, ಸ್ನೇಹಿತರು, ಗ್ರಾಮಸ್ಥರು ಮಾತ್ರವಲ್ಲದೆ ಟಿವಿ, ಸಾಮಾಜಿಕ ಜಾಲತಾಣಗಳಲ್ಲಿ ಈ ದುರ್ಘಟನೆ ನೋಡಿದ ಎಲ್ಲರೂ ಶಶಿಕಲಾ ಬೇಗ ಗುಣಮುಖಳಾಗಲಿ... ಸುರಕ್ಷಿತವಾಗಿ ಮನೆಗೆ ಬರಲಿ... ಉನ್ನತ ಶಿಕ್ಷಣಕ್ಕೆ ಹೋಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು. ಆದ್ರೆ ವಿಧಿ ಆಟವೇ ಬೇರೆಯಾಗಿತ್ತು.. ಅವಳನ್ನು ಸಾವಿನ ಅಂಚಿಗೆ ನೂಕಿತ್ತು.


ಇದನ್ನೂ ಓದಿ: Cylinder Blast: ಜೋಧ್‌ಪುರದಲ್ಲಿ ಮದುವೆ ಸಮಾರಂಭದಲ್ಲಿ 5 ಸಿಲಿಂಡರ್ ಸ್ಫೋಟ, 60 ಜನರಿಗೆ ಗಾಯ, ನಾಲ್ವರ ದುರ್ಮರಣ


ನಿನ್ನೆಯವರೆಗೂ ಜೊತೆಗಿದ್ದ ಗೆಳತಿ ಶಶಿಕಲಾ ಇನ್ನಿಲ್ಲ ಎಂದು ತಿಳಿದು ಸಹ ವಿದ್ಯಾರ್ಥಿಗಳು ಕಣ್ಣೀರಿಟ್ಟರು. ಸಾವಿನೊಂದಿಗೆ ಶಶಿಕಲಾ ಅವರ 30 ಗಂಟೆಗಳ ಹೋರಾಟ ಮುಗಿದಿದೆ. ಈ ಸುದೀರ್ಘ ಹೋರಾಟದಲ್ಲಿ ವಿಧಿಗೆ ಜಯವಾಗಿದೆ. ಗುರುವಾರ ಬೆಳಗ್ಗೆ ವಿಶಾಖಪಟ್ಟಣದ ಆಸ್ಪತ್ರೆಗೆ ಆಗಮಿಸಿ ಶಶಿಕಲಾ ನೋಡಲು ಬಂದ ಸ್ನೇಹಿತರು ಅವಳ ಜತೆ ಕಳೆದ ದಿನಗಳನ್ನು ನೆನೆದು ಕಣ್ಣೀರು ಹಾಕಿದರು. ಅವರಿಗೆ ಸಾಂತ್ವನ ಹೇಳಲು ಯಾರಿಂದಲೂ ಸಾಧ್ಯವಾಗಲಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.