ಪಾಟ್ನಾ: ಇಲ್ಲಿನ ಗಾಂಧಿ ಮೈದಾನ್ ರ್ಯಾಲಿಯಲ್ಲಿ ತೇಜಸ್ವಿಯಾದವ್ ಮಾತನಾಡುತ್ತಾ ರಾಹುಲ್ ಗಾಂಧಿ ಪ್ರಧಾನಮಂತ್ರಿಯಾಗುವುದಕ್ಕೆ ಬೆಂಬಲ ವ್ಯಕ್ತಪಡಿಸಿದರು.


COMMERCIAL BREAK
SCROLL TO CONTINUE READING

ರ್ಯಾಲಿಯಲ್ಲಿ ಭಾಗವಹಿಸಿ ರಾಹುಲ್ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿದ ತೇಜಸ್ವಿ ಯಾದವ್ " ಮುಂದಿನ ಪ್ರಧಾನಿಯಾಗಲು ನಿಮಗೆ ಎಲ್ಲ ರೀತಿಯ ಗುಣಗಳಿವೆ ಆದರೆ ನಿಮ್ಮ ಮುಂದೆ ಎಲ್ಲ ಪಕ್ಷಗಳನ್ನು ಜೊತೆಯಾಗಿ ತೆಗೆದುಕೊಂಡು ಹೋಗುವ ಜವಾಬ್ದಾರಿಯೂ ಇದೆ ಎಂದು ಅಭಿಪ್ರಾಯಪಟ್ಟರು. 


ಇದಕ್ಕೆ ಪ್ರತಿಯಾಗಿ ಮಾತನಾಡಿದ ರಾಹುಲ್ ಗಾಂಧಿ "ತೇಜಸ್ವಿ ,ಯುವಜನರ ನಾಯಕ ಅವರು ಎಂದು ಸುಳ್ಳು ಹೇಳುವುದಿಲ್ಲ, ನಾವು ಈ ಲೋಕಸಭಾ ಮತ್ತು ವಿಧಾನಸಭೆ ಚುನಾವಣೆ ನಂತರ ಮೈತ್ರಿ ಸರ್ಕಾರವನ್ನು ರಚಿಸುತ್ತೇವೆ "ಎಂದು ತಿಳಿಸಿದರು.


ವಿಶೇಷವೆಂದರೆ ತೇಜಸ್ವಿಯಾದವ್ ಎರಡನೇ ಬಾರಿಗೆ ರಾಹುಲ್ ಗಾಂಧಿಯವರು ಪ್ರಧಾನಮಂತ್ರಿಯಾಗುವ ವಿಚಾರದ ಬಗ್ಗೆ ಪ್ರಸ್ತಾಪಿಸಿದರು.ಇನ್ನೊಂದೆಡೆಗೆ ತಮಿಳುನಾಡಿನ ಡಿಎಂಕೆ ನಾಯಕ ಸ್ಟಾಲಿನ್ ಕೂಡ ರಾಹುಲ್ ಪ್ರಧಾನ ಮಂತ್ರಿಯಾಗುವ ವಿಚಾರವಾಗಿ ಈ ಹಿಂದೆ ಬ್ಯಾಟಿಂಗ್ ಮಾಡಿದ್ದರು.