ನವದೆಹಲಿ: ರಸ್ತೆ ಅಪಘಾತದಲ್ಲಿ ತೆಲುಗು ನಟಿ ಅನುಷಾ ರೆಡ್ಡಿ ಮತ್ತು ಭಾರ್ಗವಿ ಮೃತಪಟ್ಟಿದ್ದಾರೆ.ಶೂಟಿಂಗ್ ಮುಗಿಸಿ ವಿಕರಾಬಾದ್ ನಿಂದ ಹೈದರಾಬಾದ್ ಗೆ ಪ್ರಯಾಣಿಸುತ್ತಿದ್ದಾಗ ಈ ದುರ್ಘಟನೆ ನಡೆಸಿದೆ. ಕಾರಿನಲ್ಲಿ ಇತರರು ಗಂಭೀರವಾಗಿ ಗಾಯಗೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ವರದಿಗಳು ಹೇಳುವಂತೆ ಕಾರು ಚೆವೆಲ್ಲಾವನ್ನು ತಲುಪಿದಾಗ ಎದುರಿಗೆ ವೇಗವಾಗಿ ಬಂದ ಲಾರಿಯನ್ನು ತಪ್ಪಿಸಲು ಚಾಲಕನು ಕಾರನ್ನು ಇನ್ನೊಂದು ಬದಿಗೆ ತಿರುಗಿಸಿದ್ದಾನೆ. ಈ ವೇಳೆ ಅದು ಮರಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.ಈ ದುರ್ಘಟನೆ ನಡೆದಾಗ ಕಾರಿನಲ್ಲಿ ನಾಲ್ವರು ವ್ಯಕ್ತಿಗಳು ಉಪಸ್ಥಿತರಿದ್ದರು.ಇದರಲ್ಲಿ ಇಬ್ಬರು ಮೃತಪಟ್ಟಿದ್ದರೆ,ಇಬ್ಬರು ಗಾಯಗೊಂಡಿದ್ದಾರೆ. ಈಗ ಗಾಯಗೊಂಡವರನ್ನು ಚಕ್ರಿ ಮತ್ತು ವಿನಯ ಎಂದು ಗುರುತಿಸಲಾಗಿದೆ. ಅವರನ್ನು ಓಸ್ಮಾನಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.


ಇನ್ನು ಮೃತಪಟ್ಟಿರುವವರಲ್ಲಿ ಭಾರ್ಗವಿಯವರು ನಿರ್ಮಲ್ ಹಾಗೂ ಅನುಷಾ  ಅವರು ಜಯಶಾಂಕರ್ ಭುಲ್ಲಪಲ್ಲಿ ಜಿಲ್ಲೆಯವರಾಗಿದ್ದಾರೆ ಎಂದು ತಿಳಿದುಬಂದಿದೆ.ಈಗ ಈ ಅಪಘಾತದ  ಬಗ್ಗೆ ಪೋಲಿಸರು ತನಿಖೆ ನಡೆಸಿದ್ದಾರೆ.ಇಬ್ಬರು ಕಿರುತೆರೆ ನಟಿಯರ ಸಾವಿನ ಬಗ್ಗೆ ಸಹ ತೆಲುಗು ಕಿರುತೆರೆ ನಟರು ಸಂತಾಪ ಸೂಚಿಸಿದ್ದಾರೆ.