ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಈರುಳ್ಳಿ ಬೆಲೆ ಈಗ ಶತಕ ಬಾರಿಸಿದೆ, ಈ ಸಂದರ್ಭದಲ್ಲಿ ಕಳ್ಳನೊಬ್ಬ ಹಣವನ್ನು ಕಳ್ಳತನ ಮಾಡುವ ಬದಲು ಈರುಳ್ಳಿಯನ್ನು ಕದ್ದಿರುವ ಘಟನೆ ಪೂರ್ವ ಮಿಡ್ನಾಪೋರ್ ಜಿಲ್ಲೆಯಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಸುತಹತದಲ್ಲಿ ಅಂಗಡಿ ಹೊಂದಿರುವ ಅಕ್ಷಯ್ ದಾಸ್ ಅವರು ಮಂಗಳವಾರ ಬೆಳಿಗ್ಗೆ ತಮ್ಮ ಅಂಗಡಿಯನ್ನು ತೆರೆದಾಗ ಎಲ್ಲೆಡೆ ಚದುರಿದ ವಸ್ತುಗಳು ಕಂಡುಬಂದಿವೆ. ಸೋಮವಾರ ರಾತ್ರಿ ಕಳ್ಳರು ಅಂಗಡಿಗೆ ನುಸುಳಬಹುದೆಂದು ಅರಿತುಕೊಂಡ ದಾಸ್ ತನ್ನ ನಷ್ಟವನ್ನು ಎಣಿಸಿದಾಗ ಆಘಾತಕ್ಕೊಳಗಾಗಿದ್ದಾನೆ. ಅಲ್ಲಿರುವ ಹಣದ ಬಾಕ್ಸ್ ನೋಡಿದಾಗ ಅಲ್ಲಿ ನಗದು ಹಾಗೆ ಇದೆ, ಆದರೆ ಅಲ್ಲಿ ಇರುವ ಹಲವಾರು ಈರುಳ್ಳಿ ಚೀಲಗಳು ಕಾಣೆಯಾಗಿರುವುದು ಕಂಡು ಬಂದಿದೆ.


ಕಳ್ಳರು 50,000 ರೂ ಮೌಲ್ಯದ ಈರುಳ್ಳಿಯೊಂದಿಗೆ ಕೆಲವು ಬೆಳ್ಳುಳ್ಳಿ ಮತ್ತು ಶುಂಠಿ ಚೀಲದೊಂದಿಗೆ ಪರಾರಿಯಾಗಿದ್ದಾರೆ ಎಂದು ದಾಸ್ ಹೇಳಿದ್ದಾರೆ. ಆದರೆ "ಕಳ್ಳರು ನಗದು ಪೆಟ್ಟಿಗೆಯಿಂದ ಒಂದೇ ಪೈಸಾವನ್ನು ತೆಗೆದುಕೊಂಡಿಲ್ಲ" ಎಂದು ಅವರು ಹೇಳಿದರು.