ಚಾಮರಾಜನಗರ : ರಾಜಕೀಯ ಎಂದರೇ ಹಾಗೇ ನಿಗೂಢ, ಒಮ್ಮೆಗೆ ಅರ್ಥವಾಗದ, ಹತ್ತಾರು ಪ್ಲಾನ್ ಗಳಿರುವ ಅಖಾಡ ಎಂಬುದಕ್ಕೆ ಇದೇ ನೋಡಿ ನಿದರ್ಶನ. ಅಪ್ಪ ಮೂರು ಬಾರಿ ಎಂಎಲ್ಎ ಆಗಿ ನಾಲ್ಕನೇ ಬಾರಿ ಕಣಕ್ಕಿಳಿಯುತ್ತಿದ್ದರೇ ಮಗ ಪಕ್ಷೇತರನಾಗಿ ನಾಮಿನೇಷನ್ ಸಲ್ಲಿಸಿದ್ದಾರೆ.


COMMERCIAL BREAK
SCROLL TO CONTINUE READING

ಹೌದು... ಚಾಮರಾಜನಗರ ಜಿಲ್ಲೆಯ ಹನೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್. ನರೇಂದ್ರ ಮಂಗಳವಾರ ನಾಮಿನೇಷನ್ ಸಲ್ಲಿಸಲಿದ್ದಾರೆ. ಆದರೆ, ಅವರ ಮಗ ನವನೀತ್ ಗೌಡ ಇಂದು ಪಕ್ಷೇತರನಾಗಿ ಉಮೇದುವಾರಿಕೆ ಸಲ್ಲಿಸುವ ಮೂಲಕ ಎದುರಾಳಿಗಳ ತಲೆಗೆ ಹುಳು ಬಿಟ್ಟಿದ್ದಾರೆ.


ಇದನ್ನೂ ಓದಿ: ನಿಖಿಲ್ ಕುಮಾಸ್ವಾಮಿ ನಾಮಪತ್ರ : ದೇವೇಗೌಡರರಿಂದ ಬಿ ಫಾರಂ ಪಡೆಯುವ ವೇಳೆ ಕಣ್ಣೀರು


ಈಗಾಗಲೇ ನರೇಂದ್ರ ಪರ ಮಗ ನವನೀತ್ ಬೆಟ್ಟಗುಡ್ಡ ಹತ್ತಿಳಿದು ಪ್ರಚಾರ ನಡೆಸಿದ್ದು, ತಮ್ಮ ಕುಟುಂಬದ ಮತ ಬ್ಯಾಂಕ್ ಬೇರೆಯವರ ಪಾಲಾಗದಂತೆ ಎಚ್ಚರ ವಹಿಸಿದ್ದಾರೆ. ಆದರೆ, ಈ ನಡುವೆ ನವನೀತ್ ಗೌಡ ಪಕ್ಷೇತರನಾಗಿ ನಾಮಿನೇಷನ್ ಕೂಡ ಫೈಲ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಮಗನಿಗೆ ನಾಮಿನೇಷನ್ ಫೈಲ್ ಮಾಡಿಸುವ ಮೂಲಕ ಎಲೆಕ್ಷನ್ ಪಾಠವನ್ನು ಎಂಎಲ್ಎ ನರೇಂದ್ರ ಧಾರೆ ಎರೆಯುವುದು ಆಗಿದೆ. ಇಲ್ಲವೇ, ಬೇರೆ ಏನೂ ರಣನೀತಿ ಇದೆಯೋ ಸದ್ಯಕ್ಕಂತೂ ತಿಳಿಯದಾಗಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ