ಬೆಂಗಳೂರು: ಮುಂದಿನ ದಿನಗಳಲ್ಲಿಯೂ ಲಿಂಗಾಯಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೀಡಿರುವ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಲಿಂಗಾಯತ ನಾಯಕರ ಬೆನ್ನಿಗೆ ಚೂರಿ ಹಾಕಿದ ಬಿಜೆಪಿ ವಿರುದ್ಧ ಲಿಂಗಾಯತ ಸಮುದಾಯ ತಿರುಗಿ ಬೀಳುತ್ತಿದ್ದಂತೆಯೇ ಊಸರವಳ್ಳಿ ಬಣ್ಣ ಬದಲಿಸಿದೆ ಬಿಜೆಪಿ’ ಎಂದು ಟೀಕಿಸಿದೆ.


ನಿಗೂಢ ಎಲೆಕ್ಷನ್ ಸ್ಟಾಟರ್ಜಿ : ಅಪ್ಪ ಕಾಂಗ್ರೆಸ್ ಅಭ್ಯರ್ಥಿ- ಮಗ ಪಕ್ಷೇತರನಾಗಿ ನಾಮಿನೇಷನ್


‘ಹಿಂದುಳಿದವರ ಕೈಗೆ ನಾಯಕತ್ವ ಕೊಡುತ್ತೇವೆ, ದಲಿತರ ಕೈಗೆ ನಾಯಕತ್ವ ಕೊಡುತ್ತೇವೆ, ಶೋಷಿತರ ಕೈಗೆ ಅಧಿಕಾರ ಕೊಡುತ್ತೇವೆ ಎಂದು ಬಿಜೆಪಿ ಹೇಳುವುದಿಲ್ಲವೇಕೆ? ಇದೇನಾ ಸಾಮಾಜಿಕ ನ್ಯಾಯ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.


ನಿಖಿಲ್ ಕುಮಾಸ್ವಾಮಿ ನಾಮಪತ್ರ : ದೇವೇಗೌಡರರಿಂದ ಬಿ ಫಾರಂ ಪಡೆಯುವ ವೇಳೆ ಕಣ್ಣೀರು


‘ದೇಶದಲ್ಲೇ ಅತಿಹೆಚ್ಚು ತೆರಿಗೆ ಸಂಗ್ರಹಿಸುವ 2ನೇ ರಾಜ್ಯ ಕರ್ನಾಟಕ. ಆದರೆ ಕೇಂದ್ರ ಸರ್ಕಾರಕ್ಕೆ ಹೋಗುವ ಈ ತೆರಿಗೆ ವಾಪಾಸ್ ಕರ್ನಾಟಕಕ್ಕೆ ಬರುವುದು ಬಿಡಿಗಾಸಿನ ರೂಪದಲ್ಲಿ. ಉತ್ತರದ ರಾಜ್ಯಗಳಿಗೆ ನಮ್ಮ ತೆರಿಗೆಯ ಸಿಂಹಪಾಲು. ನಮ್ಮದೇ ತೆರಿಗೆಯಲ್ಲಿ ನಮಗೆ ಬಿಡಿಗಾಸು. ಇದು ಬಿಜೆಪಿ ದ್ರೋಹ’ ಎಂದು ಕಾಂಗ್ರೆಸ್ ಕಿಡಿಕಾರಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.