ಬೆಂಗಳೂರು : ವಿಘ್ನೇಶ್ ಎಂಬ 10 ವರ್ಷದ ಬಾಲಕ ಆರು ವರ್ಷಗಳ ಕಾಲ ಕೋಮಾದಲ್ಲಿದ್ದು ಕೊನೆಯುಸಿರೆಳೆದಿದ್ದಾನೆ. ಆರು ವರ್ಷಗಳ ಹಿಂದೆ ವಿಘ್ನೇಶ್ ಹರ್ನಿಯಾ ಚಿಕಿತ್ಸೆಗಾಗಿ ಸುಬ್ರಹ್ಮಣ್ಯನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ವಿಘ್ನೇಶ್‌ಗೆ 2017ರ ಎಪ್ರಿಲ್ 4ರಂದು ಶಸ್ತ್ರ ಚಿಕಿತ್ಸೆ ನಡೆಯಲಿದೆ ಎಂದು ತಿಳಿಸಿದ್ದರಿಂದ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು. 


COMMERCIAL BREAK
SCROLL TO CONTINUE READING

ಶಸ್ತ್ರ ಚಿಕಿತ್ಸೆ ಸಮಯದಲ್ಲಿ ವೈದ್ಯರು ಮೂರು ಬಾರಿ ಅನಸ್ತೇಷಿಯ ನೀಡಿದ್ದ ಪರಿಣಾಮ ವಿಘ್ನೇಶ್ ಪ್ರಜ್ಞೆ ಕಳೆದುಕೊಂಡಿದ್ದ.‌ ಈ ವಿಚಾರವಾಗಿ ಆಸ್ಪತ್ರೆ ವೈದ್ಯರು ವಿಘ್ನೇಶ್ ಪೋಷಕರಿಗೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಅದರ ವೆಚ್ಚವನ್ನು ಆಸ್ಪತ್ರೆ ಬರಿಸುತ್ತೆ ಅಂತ ಹೇಳಿದ್ರಂತೆ. ಆ ಸಮಯಲ್ಲಿ ಘಟನೆ ಬಗ್ಗ ವಿಘ್ನೇಶ್ ಪೋಷಕರು ಬನಶಂಕರಿ ಪೊಲೀಸರಿಗೆ ದೂರು ನೀಡಿದ್ದರು. 


ಇದನ್ನೂ ಓದಿ: ಕನ್ನಡಿಗರೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಮೊಸಳೆ ಕಣ್ಣೀರಿನ ಗ್ಯಾರಂಟಿಗೆ ಬಲಿಯಾಗಬೇಡಿ!


ಆರು ವರ್ಷದಿಂದ ಕೋಮಾದಲ್ಲಿದ್ದ ವಿಘ್ನೇಶ್ ತಿಲಕ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ವಿಘ್ನೇಶ್ ಚಿಕಿತ್ಸೆಗೆಂದು ಪೋಷಕರು19 ಲಕ್ಷ ಖರ್ಚು ಮಾಡಿದ್ದು ನಿರ್ಲಕ್ಷ್ಯವೆಸಗಿದ ಆಸ್ಪತ್ರೆಯವರು ಮಾತ್ರ ಐದು ಲಕ್ಷ ಕೊಟ್ಟು ಕೈತೊಳೆದುಕೊಂಡಿದ್ದಾರಂತೆ, ಅಲ್ಲದೆ, ಉಳಿದ ಚಿಕಿತ್ಸೆ ವೆಚ್ವ ಕೂಡ ನೀಡದೆ ಬೆದರಿಕೆ ಹಾಕಿದ ಆರೋಪ‌ಕೂಡ ಮಾಡಲಾಗಿದೆ.


ಇನ್ನು 6 ವರ್ಷ ಕೋಮಾದಲ್ಲಿದ್ದ ವಿಘ್ನೇಶ್ ಜನವರಿ 3 ರಂದು ಸಾವನ್ನಪ್ಪಿದ್ದಾನೆ‌. ಆಸ್ಪತ್ರೆ ವೈದ್ಯರ ಯಡವಟ್ಟು ಸಂಬಂಧ ಮತ್ತೆ ಬನಶಂಕರಿ ಪೊಲೀಸ್ ಠಾಣೆಗೆ ವಿಘ್ನೇಶ್ ಕುಟುಂಬ ದೂರು ನೀಡಿದೆ. ಸದ್ಯ ಬನಶಂಕರಿ ಪೊಲೀಸರು ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.